ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!

Published : May 09, 2021, 09:52 AM ISTUpdated : May 09, 2021, 09:53 AM IST
ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!

ಸಾರಾಂಶ

ಲಸಿಕೆ ಅಭಿಯಾನದಲ್ಲಿ ಸಕ್ಸಸ್ ಆದ ಗ್ರಾಮ | 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಸುರಕ್ಷಾ ಕವಚ

ಮುಂಬೈ(ಮೇ.09): ಲಸಿಕೆ ಅಭಿಯಾನದ ವಿಚಾರದಲ್ಲಿ ಹಲವು ರಾಜ್ಯ, ಜಿಲ್ಲೆಗಳು ಬಹಳಷ್ಟು ಅಡೆತಡೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗಿ ಗ್ರಾಮವೊಂದು ಸಂಪೂರ್ಣ ಅಭಿಯಾನವನ್ನು ಸಕ್ಸಸ್‌ಫುಲ್ ಆಗಿ ಮುಗಿಸಿದೆ. ಔರಂಗಾಬಾದ್‌ನ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಮುಗಿದಿದ್ದು, ಈ ಮೂಲಕ 100% ಲಸಿಕೆ ಸುರಕ್ಷತೆಯನ್ನು ಹೊಂದಿದ ಗ್ರಾಮವಾಗಿ ಮೂಡಿಬಂದಿದೆ.

ನಗರಗಳಿಂತ ಭಿನ್ನವಾಗಿ ಗ್ರಾಮ ಪ್ರದೇಶದಲ್ಲಿ ಲಸಿಕೆ ಕುರಿತ ಮೂಢನಂಬಿಕೆ, ಭೀತಿ, ಸುಳ್ಳುಸುದ್ದಿಗಳನ್ನು ಮೀರಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿರುವುದು ಸಾಧನೆಯೇ ಸರಿ. ಈ ಗ್ರಾಮದಲ್ಲಿ ಕೌನ್ಸಿಲ್ ಲಸಿಕೆಗಾಗಿ 45 ವರ್ಷ ಮೇಲ್ಪಟ್ಟವರಲ್ಲಿ ಆಧಾರ್ ಕಾರ್ಡ್ ಕೇಳಿದಾಗ ಬರೀ 5 ಜನರಷ್ಟೇ ಆಧಾರ್‌ಕಾರ್ಡ್ ತಂದುಕೊಟ್ಟಿದ್ದರು. ನಂತರ ಈ ಕುರಿತು ವಿಚಾರಿಸಿದಾಗ ಜನರ ಅಪನಂಬಿಕೆಯ ಬಗ್ಗೆ ತಿಳಿದಿದೆ.

ಆಸ್ಪತ್ರೆ ದಾಖಲಾತಿಗೆ ಕೋವಿಡ್‌ ವರದಿ ಕಡ್ಡಾಯವಲ್ಲ!

ಲಸಿಕೆ ತೆಗೆದು ಜನರು ಸತ್ತಿದ್ದಾರೆ ಎಂಬಂತಹ ಸುಳ್ಳು ವಿಡಿಯೋ ನೋಡಿದ ಜನರು ಭೀತಿಗೊಳಗಾಗಿದ್ದರು.  ಇನ್ನೂ ಕೆಲವರಿಗೆ ಲಸಿಕೆ ತೆಗೆದುಕೊಂಡ ನಂತರ ತೋಳುಗಳಿಗೆ ಸಮಸ್ಯೆಯಾಗಿದೆ ಎನ್ನಲಾಗಿತ್ತು. ಕೆಲವು ಜನರು ಧಾರ್ಮಿಕ ಕಟ್ಟುಪಾಡುಗಳ ಕಾರಣ ಹೇಳಿದರೆ, ಮಹಿಳೆಯರು ಅವರದ್ದೇ ಆದ ಸಮಸ್ಯೆಗಳನ್ನು ಹೇಳಲಾರಂಭಿಸಿದ್ದರು.

ನಂತರದಲ್ಲಿ ಲಸಿಕೆ ಕುರಿತು ಜಾಗೃತಿ ಶಿಬಿರಗಳನ್ನು ನಡೆಸಲಾಯ್ತು. ಏಪ್ರಿಲ್ 27ರಂದು ಜನುಮ ಜಯಂತಿ ದಿನ ದೇವಾಲಯದ ಆವರಣದಲ್ಲಿ ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಗ್ರಾಮಸ್ಥರನ್ನು ಮನವರಿಕೆ ಮಾಡಲು ಬರೋಬ್ಬರಿ ಒಂದು ತಿಂಗಳು ಸಮಯ ಹಿಡಿದಿತ್ತು. ಆದರೆ ಈಗ ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ