ಉದ್ಧವ್‌ ಠಾಕ್ರೆಗೆ ಮತ್ತೊಂದು ಶಾಕ್, ಶಿವಸೇನೆಯ ವಕ್ತಾರೆ ಶಿಂಧೆ ಬಣಕ್ಕೆ!

Published : Jul 13, 2022, 10:46 AM ISTUpdated : Jul 13, 2022, 04:51 PM IST
ಉದ್ಧವ್‌ ಠಾಕ್ರೆಗೆ ಮತ್ತೊಂದು ಶಾಕ್, ಶಿವಸೇನೆಯ ವಕ್ತಾರೆ ಶಿಂಧೆ ಬಣಕ್ಕೆ!

ಸಾರಾಂಶ

* ರಾಜ್ಯದಲ್ಲಿ ಮಹಾ ಅಘಾಡಿ ಸರ್ಕಾರ ಪತನ * ಠಾಕ್ರೆಗೆ ಶಾಕ್‌ ಕೊಟ್ಟಿದ್ದ ಶಿಂಧೆಯಿಂದ ಇದೀಗ ಮತ್ತೊಂದು ಪೆಟ್ಟು * ಶಿವಸೇನೆಯ ಕವಕ್ತಾರೆ ಶಿಂಧೆ ಬಣಕ್ಕೆ

ಮುಂಬೈ(ಜು.13): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಹೊಡೆತವಾಗಿ, ಪಕ್ಷದ ವಕ್ತಾರ ಮತ್ತು ಮುಂಬೈನ ಮಾಜಿ ಕೌನ್ಸಿಲರ್ ಶೀತಲ್ ಮಾತ್ರೆ ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯಕ್ಕೆ ಸೇರಿದರು. ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಂಬೈನ ಮೊದಲ ಮಾಜಿ ಶಿವಸೇನೆ ಕೌನ್ಸಿಲರ್ ಶೀತಲ್ ಮ್ಹಾತ್ರೆಯವರು 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ ದಹಿಸರ್‌ನಲ್ಲಿ ವಾರ್ಡ್ ಸಂಖ್ಯೆ 7 ಅನ್ನು ಪ್ರತಿನಿಧಿಸಿದ್ದರು.

ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 25, ಶಿಂಧೆ ಟೀಮ್‌ನ 12 ಸಚಿವರು?

ಮ್ಹಾತ್ರೆ ಅವರು ಕೆಲವು ಶಿವಸೇನಾ ಕಾರ್ಯಕರ್ತರೊಂದಿಗೆ ಮಂಗಳವಾರ ರಾತ್ರಿ ಶಿಂಧೆ ಅವರ ನಿವಾಸಕ್ಕೆ ತೆರಳಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಠಾಕ್ರೆ ನೇತೃತ್ವದ ಶಿವಸೇನೆ ಅಲಿಬಾಗ್-ಪೆನ್ ಪ್ರದೇಶಕ್ಕೆ ಸಂಪರ್ಕ್ ಸಂಯೋಜಕರಾಗಿ (ಸಂಯೋಜಕ) ಮ್ಹಾತ್ರೆ ಅವರನ್ನು ನೇಮಿಸಿತ್ತು. 

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!

ಇನ್ನು ಕೆಲವೇ ತಿಂಗಳುಗಳಲ್ಲಿ ಶಿವಸೇನೆ ಹಿಡಿತದಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಚುನಾವಣೆ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಹೀಗಿರುವಾಗಲೇ ಮ್ಹಾತ್ರೆ ಶಿಂಧೆ ಬಣ ಸೇರಿರುವುದು ಶಿವಸೇನೆಗೆ ಬಹುದೊಡ್ಡ ಹೊಡೆತ ನೀಡಲಿದೆ.  ಇನ್ನು ಕಳೆದ ತಿಂಗಳು ಶಿಂಧೆ ಅವರ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು ಎಂಬುದು ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು