ಮಹಾರಾಷ್ಟ್ರ: 7 ತಿಂಗಳಲ್ಲಿ 1555 ರೈತರು ಸಾವಿಗೆ ಶರಣು

Published : Sep 22, 2023, 08:26 AM IST
ಮಹಾರಾಷ್ಟ್ರ: 7 ತಿಂಗಳಲ್ಲಿ 1555 ರೈತರು ಸಾವಿಗೆ ಶರಣು

ಸಾರಾಂಶ

ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿ 1555 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್‌  (Vijay Vadettiwar) ಮಾಹಿತಿ ನೀಡಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿ 1555 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್‌  (Vijay Vadettiwar) ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಅವರು, ‘ರಾಜ್ಯದ 13 ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಮುಂಗಾರು (monsoon rain) ಮಳೆಯಾಗಿದೆ. ಪರಿಣಾಮ 7 ತಿಂಗಳಲ್ಲಿ 1555 ರೈತರು ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಜನವರಿಯಲ್ಲಿ 226, ಫೆಬ್ರವರಿಯಲ್ಲಿ 192, ಮಾರ್ಚ್‌ನಲ್ಲಿ 226, ಏಪ್ರಿಲ್‌ನಲ್ಲಿ 225, ಮೇನಲ್ಲಿ 224, ಜೂನ್‌ನಲ್ಲಿ 233 ಹಾಗೂ ಜುಲೈ ತಿಂಗಳಿನಲ್ಲಿ 229 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮರಾವತಿ ವಲಯದಲ್ಲಿ (Amravati zone)ಅತಿ ಹೆಚ್ಚು 637, ಉಳಿದಂತೆ ಔರಂಗಾಬಾದ್‌ ವಲಯದಲ್ಲಿ 584, ನಾಸಿಕ್‌ ವಲಯದಲ್ಲಿ 174, ನಾಗಪುರ ಮತ್ತು ಪುಣೆ ವಲಯದಲ್ಲಿ 144 ಮತ್ತು 16 ರೈತರು ಸಾವನ್ನಪ್ಪಿದ್ದಾರೆ.

ಆದರೆ ಸರ್ಕಾರ ಮಾತ್ರ ಕೇವಲ ಆಶ್ವಾಸನೆಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಬರ(drought) ನಿರ್ವಹಣೆಗೆ ಮತ್ತು ರೈತರ ಸಾವು ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

ವಿಶ್ವದ ಫ್ಯಾಷನ್‌ ಲೋಕವನ್ನು ಆಳುತ್ತಿರುವ ಪುಟಾಣಿ ಸೂಪರ್‌ ಮಾಡೆಲ್‌ಗಳಿವರು...

ಅಪಘಾತ ಪರಿಹಾರ ಮೊತ್ತ 10 ಪಟ್ಟು ಹೆಚ್ಚಳ ಮಾಡಿದ ಭಾರತೀಯ ರೈಲ್ವೆ ಇಲಾಖೆ

ನವದೆಹಲಿ: ರೈಲ್ವೆ ಅಪಘಾತಗಳಲ್ಲಿ ಯಾವುದೇ ವ್ಯಕ್ತಿಗೆ ಉಂಟಾಗುವ ಗಾಯ ಅಥವಾ ಸಾವಿಗೆ ನೀಡುವ ಪರಿಹಾರದ ಮೊತ್ತವನ್ನು ರೈಲ್ವೆ ಇಲಾಖೆ (Railway Department) 10 ಪಟ್ಟು ಹೆಚ್ಚಳ ಮಾಡಿದೆ. ಈ ಹಿಂದೆ 2012 ಮತ್ತು 2013ರಲ್ಲಿ ಪರಿಹಾರದ ಮೊತ್ತ (compensation amount) ಪರಿಷ್ಕರಿಸಲಾಗಿತ್ತು. ಈ ಹಿಂದೆ ಪ್ರಯಾಣಿಕರ ಸಾವಿಗೆ ನೀಡುತ್ತಿದ್ದ ಮೊತ್ತವನ್ನು 50000 ರು.ನಿಂದ 5 ಲಕ್ಷ ರು.ಗೆ, ಗಂಭೀರವಾಗಿ ಗಾಯಗೊಂಡವರಿಗೆ 25000 ರು. ಬದಲು 2.5 ಲಕ್ಷ ರು. ಮತ್ತು ಸಾಮಾನ್ಯ ಗಾಯಗೊಂಡವರಿಗೆ 5000 ರು. ಬದಲು 50000 ರು. ನೀಡಲಾಗುವುದು. ಅಲ್ಲದೆ 30 ದಿನಕ್ಕಿಂತ ಹೆಚ್ಚಿನ ದಿನ ಆಸ್ಪತ್ರೆ ದಾಖಲಾಗಿದ್ದರೆ ನಿತ್ಯ 3000 ರು. ನೀಡಲಾಗುವುದು ಎಂದು ರೈಲ್ವೆ ಮಾಹಿತಿ ನೀಡಿದೆ.

ನಾವು ಹೇಳದ ‘ಚಂದ್ರರಹಸ್ಯ’ ಇನ್ನೂ ಇದೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!