ಸಲಿಂಗ ಜೋಡಿಯ ಕೇಸ್ ತೀರ್ಪು : ಮನೋತಜ್ಞರ ಸಲಹೆ ಪಡೆಯಲು ಮುಂದಾದ ಜಡ್ಜ್

Kannadaprabha News   | Asianet News
Published : Apr 30, 2021, 10:38 AM IST
ಸಲಿಂಗ ಜೋಡಿಯ ಕೇಸ್  ತೀರ್ಪು :  ಮನೋತಜ್ಞರ ಸಲಹೆ ಪಡೆಯಲು ಮುಂದಾದ ಜಡ್ಜ್

ಸಾರಾಂಶ

ಸಲಿಂಗ ಜೋಡಿಯ ಪ್ರಕರಣ ಒಂದರ ಸಂಬಂಧ ತೀರ್ಪು ನೀಡಲು ಮದ್ರಾಸ್ ಹೈ ಕೋರ್ಟ್  ನ್ಯಾಯಾಧೀಶರು ಮನೋತಜ್ಞರ ನೆರವು ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಮನೋತಜ್ಞರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುವುದಾಗಿ ಹೇಳಿದ್ದಾರೆ.

ಚೆನ್ನೈ (ಏ.30): ಸಾಮಾನ್ಯವಾಗಿ ನ್ಯಾಯಾಲಯಗಳು ಉಭಯ ಫಿರಾರ‍ಯದುದಾರರ ವಾದ-ಪ್ರತಿವಾದಗಳನ್ನು ಆಲಿಸಿ ಪ್ರಕರಣದ ತೀರ್ಪುಗಳನ್ನು ನೀಡುತ್ತವೆ. ಆದರೆ ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಸಲಿಂಗ ಪ್ರೇಮದ ಪ್ರಕರಣದ ತೀರ್ಪು ಪ್ರಕಟಣೆ ಮುನ್ನ ಮನೋತಜ್ಞರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುವುದಾಗಿ ಹೇಳಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ನ ನ್ಯಾಯಾಧೀಶ ಎನ್‌. ಆನಂದ್‌ ವೆಂಕಟೇಶ್‌ ಅವರೇ ಹೀಗೆ ಮನೋ ವೈದ್ಯರ ಸಹಾಯ ನಿರೀಕ್ಷಿಸಿದವರು.

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ..

ಈ ಪ್ರಕರಣವು ಸೂಕ್ಷ್ಮವಾಗಿದ್ದು, ಇದನ್ನು ಸಲಿಂಗಪ್ರೇಮವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅಲ್ಲದೆ ಈ ಪ್ರಕರಣದ ತೀರ್ಪು ನನ್ನ ಹೃದಯದಿಂದ ಬರಬೇಕೇ ಹೊರತು ತಲೆಯಿಂದಲ್ಲ ಎಂದು ನ್ಯಾಯಾಧೀಶ ಆನಂದ್‌ ವೆಂಕಟೇಶ್‌ ಹೇಳಿದ್ದಾರೆ.

ಲಿವ್ ಇನ್‌ನಲ್ಲಿದ್ದ ಸಹೋದರಿಯರು ಮದುವೆಯಾದ್ರು.. ಒಟ್ಟಿಗೆ ಬಾಳ್ತೆವೆ! ..

ಮದುರೈ ಮೂಲದ ಸಲಿಂಗಿ ಜೋಡಿಯೊಂದು ತಮ್ಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು ಬೆದರಿಕೆಯೊಡ್ಡುತ್ತಿದ್ದಾರೆ. ತಮಗೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಚೆನ್ನೈಗೆ ಪರಾರಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ