PUBGಗಾಗಿ ಅಮ್ಮನ ಕೊಲೆ, ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು!

Published : Jun 09, 2022, 11:50 AM ISTUpdated : Jun 09, 2022, 11:51 AM IST
PUBGಗಾಗಿ ಅಮ್ಮನ ಕೊಲೆ, ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು!

ಸಾರಾಂಶ

* ಪಬ್‌ಜೀ ಆಡಲು ಬಿಡಲಿಲ್ಲವೆಂದು ತಾಯಿಯ ಹತ್ಯೆ * ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು * ರಾಜಧಾನಿ ಲಕ್ನೋದ ಪಿಜಿಐ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಲಕ್ನೋ(ಜೂ.09): ಒಬ್ಬ ಮಗ ತನ್ನ ತಾಯಿಯನ್ನು ಎಷ್ಟು ದ್ವೇಷಿಸುತ್ತಾನೆಂದರೆ ಆಕೆಯನ್ನು ಗುಂಡಿಟ್ಟು ಕೊಂದಿದ್ದಾನೆ. ರಾಜಧಾನಿ ಲಕ್ನೋದ ಪಿಜಿಐ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇನಾ ಅಧಿಕಾರಿ ನವೀನ್ ಸಿಂಗ್ ಅವರ ಪತ್ನಿ ಸಾಧನಾ ಸಿಂಗ್ ಅವರ ಹತ್ಯೆಯು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಪ್ರಾಪ್ತ ಮಗ, ತನ್ನ ತಾಯಿ PUBG ಆಡಲು ಅಡ್ಡಿಪಡಿಸುತ್ತಾರೆಂದು ತಂದೆಗೆ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ತಾಯಿಯನ್ನು ಕೊಂದಿದ್ದಾನೆ. ಅಷ್ಟೇ ಅಲ್ಲ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡು ಬರೋಬ್ಬರಿ ಮೂರು ದಿನ ಅಲ್ಲೇ ಸ್ನೇಹಿತರ ಜೊತೆ ಪಾರ್ಟಿ ಕೂಡ ಮಾಡಿದ್ದಾರೆ. ಬುಧವಾರ ತಂದೆ ನವೀನ್ ಸಿಂಗ್ ಮನೆಗೆ ಬಂದಾಗ 10 ವರ್ಷದ ಮಗಳನ್ನು ಅಪ್ಪಿಕೊಂಡು ಅತ್ತಿದ್ದಾರೆ.

ಹೆದರಿದ ಮಗಳು ಇಡೀ ಕಥೆಯನ್ನು ಹೇಳಿದಾಗ ಪೊಲೀಸರೂ ಬೆಚ್ಚಿಬಿದ್ದಿದ್ದಾರೆ. 10 ವರ್ಷದ ಮಗಳು ತನ್ನ ತಾಯಿಯೊಂದಿಗೆ ಮಲಗಿದ್ದಳು. ಗುಂಡಿನ ಸದ್ದು ಕೇಳಿ ಆಕೆ ಎಚ್ಚರಗೊಂಡಾಗ ಆಕೆಯ ಸಹೋದರನ ಕೈಯಲ್ಲಿ ರಿವಾಲ್ವರ್ ಇತ್ತು ಮತ್ತು ತಾಯಿಯ ಮೃತದೇಹವು ರಕ್ತದಲ್ಲಿ ಮುಳುಗಿತ್ತು. ಸಹೋದರ ಬೇರೆ ಕೋಣೆಗೆ ಕರೆದೊಯ್ದು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಸಹೋದರನ ಭಯದಿಂದಾಗಿ ಅಮಾಯಕ ಬಾಲಕಿಯನ್ನು ಮತ್ತೊಂದು ಕೋಣೆಯಲ್ಲಿ ಬಂಧಿಸಲಾಯಿತು. ಅವಳು ಹಸಿವಿನಿಂದ ಅಳಲು ಪ್ರಾರಂಭಿಸಿದಾಗ, ಅಣ್ಣಗೆ ಅಡುಗೆ ಮಾಡಿ ತಿನ್ನಿಸಿದನು ಎಂದು ಅವಳು ಹೇಳಿದ್ದಾಳೆ. ಮೃತದೇಹದಿಂದ ದುರ್ವಾಸನೆ ಬರಲಾರಂಭಿಸಿದಾಗ ವಾಂತಿ ಕೂಡ ಮಾಡಿಕೊಂಡಿದ್ದಾಳೆ.

ಬಾಯಿಬಿಟ್ಟರೆ ಗುಂಡು ಹಾರಿಸುವುದಾಗಿ ಸಹೋದರ ಬೆದರಿಕೆ ಹಾಕಿದ್ದ ಎಂದು ಮಗಳು ಹೇಳಿದ್ದಾಳೆ. ಇದೇ ಕಾರಣಕ್ಕೆ ಕೊಲೆಯಾದ ಎರಡನೇ ದಿನ ಸಹೋದರ ತನ್ನ ಸ್ನೇಹಿತರನ್ನು ಪಾರ್ಟಿಗೆಂದು ಮನೆಗೆ ಕರೆದಾಗ ಆಕೆಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಮಗಳ ಪ್ರಕಾರ, ಕೊಲೆಯ ನಂತರ, ಸಹೋದರ ತನ್ನೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ. ಅಷ್ಟೇ ಅಲ್ಲ ರೂಮ್ ಫ್ರೆಶ್ನರ್ ನಿಂದ ವಾಸನೆ ತಡೆಯುವ ಪ್ರಯತ್ನ ನಡೆದಿದೆ.

ಅಜ್ಜಿಯೊಂದಿಗೆ ಹೋಗಿದ್ದ ಮೊಮ್ಮಗಳು

ಈ ಘಟನೆ ಬಳಿಕ ನವೀನ್‌ನ ತಾಯಿ ಹೆದರಿದ ಮೊಮ್ಮಗಳನ್ನು ಆಕೆಯ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮೊಮ್ಮಗ ನಗುತ್ತಲೇ ತಮ್ಮ ಸಂಸಾರವನ್ನೇ ಹಾಳು ಮಾಡಿದ್ದಾನೆ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ತಂದೆ ನವೀನ್ ತನ್ನ ಮಗನೊಂದಿಗೆ ಪಿಜಿಐ ಪೊಲೀಸ್ ಠಾಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಮಗನೇ ನೀನೇನು ಮಾಡಿದಿ? ಎಂದಷ್ಟೇ ಪ್ರಶ್ನಿಸಲು ಅವರಿಂದ ಸಾಧ್ಯವಾಗಿದೆ. ಇದಕ್ಕೆ ಉತ್ತರಿಸಿದ ಆರೋಪಿ ನೀವೂ ಕೂಡಾ ನಮ್ಮ ಬಗ್ಗೆ ಗಮನಹರಿಸುತ್ತಿರಲಿಲ್ಲವಲ್ಲ ಎಂದಷ್ಟೇ ಹೇಳಿದ್ದಾನೆ. ಈ ಸಮಯದಲ್ಲಿ ತಾನು ಮಾಡಿದ ಕೇತ್ಯಕ್ಕೆ ಅವನಲ್ಲಿ ಯಾವುದೇ ಪಶ್ಚಾತಾಪವೂ ಕಂಡು ಬಂದಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!