ಕೊರೋನಾಗೆ ನಲುಗಿದ ರಾಷ್ಟ್ರರಾಜಧಾನಿ ದೆಹಲಿಗೆ ಭೂಕಂಪದ ಶಾಕ್!

Published : Apr 13, 2020, 06:19 PM ISTUpdated : Apr 13, 2020, 06:21 PM IST
ಕೊರೋನಾಗೆ ನಲುಗಿದ ರಾಷ್ಟ್ರರಾಜಧಾನಿ ದೆಹಲಿಗೆ ಭೂಕಂಪದ ಶಾಕ್!

ಸಾರಾಂಶ

ಕೊರೋನಾಗೆ ನಲುಗಿದ ದೆಹಲಿಗೆ ಮತ್ತೊಂದು ಏಟು| ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಭೂಕಂಪ| ಝೋನ್ ನಾಲ್ಕರಲ್ಲಿದೆ ದೆಹಲಿ

ನವದೆಹಲಿ(ಏ.13): ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ ಎರಡು ಬಾರಿ ಭೂಕಂಪವಾಗಿದೆ. ಈ ಮೂಲಕ ಕೊರೋನಾ ತಾಂಡವಕ್ಕೆ ನಲುಗಿರುವ ರಾಷ್ಟ್ರರಾಜಧಾನಿಗೆ ಮತ್ತೊಂದು ಶಾಕ್ ಲಭಿಸಿದೆ. ಸೋಮವಾರ ಮಧ್ಯಾಹ್ನ 1 ಗಂಟೆ 26 ನಿಮಿಷಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 2.7 ಎಂದು ನಮೂದಾಗಿದೆ. ಇದಕ್ಕೂ ಮುನ್ನ ದೆಹಲಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ತೋರಿಸುತ್ತಿತ್ತು.

ಭಾರತದಲ್ಲಿ ವಿನಾಶಕಾರಿ ಭೂಕಂಪಕ್ಕೂ ಈ ಮೊದಲೂ ಸಂಭವಿಸಿವೆ. 2001ರಲ್ಲಿ ಗುಜರಾತ್‌ನ ಕಚ್ಛ್ ಕ್ಷೇತ್ರದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಸದ್ಯ ದೆಹಲಿಯಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಯಾವುದೇ ಸಾವು ನೋವುಗಳ ಕುರಿತು ವರದಿಯಾಗಿಲ್ಲ.

ಜಮಾತ್‌ಗೆ ಹಾಜರಾದ ತಬ್ಲೀಘಿಗೆ ಕೊರೋನಾ, ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣು

ಭೂಕಂಪ ವಿಚಾರದಲ್ಲಿ ಬಹಳ ಸೂಕ್ಷ್ಮ ದೆಹಲಿ

ಭೂಕಂಪ ವಿಚಾರವವಾಗಿ ದೆಹಲಿ ಬಹಳ ಸೂಕ್ಷ್ಮ. ದೆಹಲಿ ಹಾಗೂ ಆಸುಪಾಸಿನ ಇಲಾಖೆಯನ್ನು ಭೌಗೋಳಿಕ ತಜ್ಞರು ಝೋನ್ 4ರಲ್ಲಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ 7.9 ರಷ್ಟು ತೀವ್ರತೆಯ ಭೂಕಂಪವೂ ಸಂಭವಿಸಬಹುದು. ಇಂತಹಹ ಭೂಕಂಪ ಸಂಭವಿಸಿದರೆ, ಜನರ ಜೀವಕ್ಕೂ ಅಪಾಯ.

ಅದೇನಿದ್ದರೂ ಸದ್ಯ ಸಂಭವಿಸಿರುವ ಭೂಕಂಪ ದೆಹಲಿಗೆ ಬಹುದೊಡ್ಡ ಹೊಡೆತ ನೀಡಿದೆ. ಈಗಾಗಲೇ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು, ಭೂಕಂಪ ಮತ್ತೊಂದು ಏಟು ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು