
ನವದೆಹಲಿ (ಅ.10) ದೇಶದ ಹಲವೆಡೆ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಸಿಡಿಸುವ ಪಟಾಕಿಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಅನ್ನೋ ಕಾರಣಕ್ಕೆ ನಿಷೇಧ ಮಾಡಲಾಗಿದೆ. ಪ್ರಮುಖವಾಗಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವ ಕಾರಣ ಪಟಾಕಿ ನಿಷೇಧ ಮಾಡಲಾಗಿದೆ. ಇದೀಗ ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ರಾಜ್ಯಗಳು ಕನಿಷ್ಢ 2 ದಿನ ಮಕ್ಕಳು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಸುಪ್ರೀಂ ಕೋರ್ಟ್ ಅವಕಶ ಮಾಡಿಕೊಡಬೇಕು ಎಂದು ಮನವಿ ಮಾಡಿದೆ.
ದೆಹಲಿ ಸೇರಿದಂತೆ ರಾಜಧಾನಿ ವ್ಯಾಪ್ತಿ ರಾಜ್ಯಗಳ ಪರವಾಗಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿ ಸಲ್ಲಿಸಿ ವಾದ ಮುುಂದಿಟ್ಟಿದ್ದದಾರೆ. ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಬಿಆರ್ ಗವಾಯಿ ಮುಂದೆ ಮನವಿ ಮಾಡಿದ್ದಾರೆ. ಕನಿಷ್ಠ ಮಕ್ಕಳಿಗೆ ಹಸಿರು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡದ ಹಸಿರು ಪಟಾಕಿ ಮೂಲಕ ಕನಷ್ಠ 2 ದಿನ ಮಕ್ಕಳು ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದರೆ.
ದೀಪಾವಳಿ ಹಬ್ಬದ ಕೇವಲ 2 ದಿನ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಹಸಿರು ಪಟಾಕಿ ಸಿಡಿಸಲು ಅಕಾಶ ನೀಡಬೇಕು. ಇದು ಮಕ್ಕಳು ತಮ್ಮ ಹಬ್ಬ ಆಚರಿಸಿ ಸಂಭ್ರಮಿಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಕೆಲ ನಿರ್ಬಂಧನೆ ಮೂಲಕ ಅವಕಾಶ ನೀಡಬೇಕು. ಈ ಕುರಿತು ಸರ್ಕಾರಗಳು ರೂಪುರೇಶೆ ಸಿದ್ದಪಡಿಸಿದೆ. ಅದರಂತೆ ಕನಿಷ್ಠ ಸಮಯಕ್ಕೆ ಪಟಾಕಿ ಸಿಡಿಸಿ ಹಬ್ಬ ಆಚರಿಸಲು ಅವಕಾಶ ಕೊಡಿ ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದಾರೆ.
ಕೇವಲ ಲೈಸೆನ್ಸ್ ಟ್ರೇಡರ್ ಮೂಲಕ ಹಸಿರು ಪಟಾಕಿ ಮಾರಾಟ ಮಾಡಲು ಅವಕಾಶ ನೀಡಬೇಕು. ಇದು ಕೇವಲ ಲೈಸೆನ್ಸ್ ಟ್ರೇಡರ್ ಮೂಲಕ ಮಾರಾಟ ಮಾಡಿದರೆ ಎಲ್ಲವೂ ನಿಯಮದ ಚೌಕಟ್ಟಿನಲ್ಲಿ ಇರಲಿದೆ. ಬ್ಯಾಲೆನ್ಸ್ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಬೇಕು ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ