ಡಿಸೆಂಬರ್ 6ರಂದು ಅಯೋಧ್ಯೆ ಸೇರಿ ಅನೇಕ ಸ್ಥಳ ಸ್ಫೋಟಿಸುವ ಬೆದರಿಕೆ!

By Suvarna NewsFirst Published Nov 10, 2021, 2:07 PM IST
Highlights

* ಮೀರತ್ ನಗರ ಸೇರಿದಂತೆ 9 ರೈಲು ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ

* ಡಿಸೆಂಬರ್ 6 ರಂದು ಅಯೋಧ್ಯೆ ಸೇರಿ ಅನೇಕ ಸ್ಥಳ ಬ್ಲಾಸ್ಟ್‌?

* ಭಾರೀ ಆತಂಕ ಸ್ಋಷ್ಟಿಸಿದೆ ಬೆದರಿಕೆ ಪತ್ರ

ಲಕ್ನೋ(ನ.10): ಉತ್ತರ ಪ್ರದೇಶದ ಮೀರತ್ (Meerut, Uttar Pradesh) ನಗರ ಸೇರಿದಂತೆ 9 ರೈಲು ನಿಲ್ದಾಣಗಳಿಗೆ ಪತ್ರ ಕಳುಹಿಸುವ ಮೂಲಕ ಬಾಂಬ್ ಸ್ಫೋಟದ (Bomb Blast) ಬೆದರಿಕೆ ಹಾಕಲಾಗಿದೆ. ಡಿಸೆಂಬರ್ 6 ರಂದು ಅಯೋಧ್ಯೆಯ (Ayodhya) ಹನುಮಾನ್‌ಗರ್ಹಿ ಸೇರಿದಂತೆ ಹಲವಾರು ದೇವಾಲಯಗಳನ್ನು ಸ್ಫೋಟಿಸುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆರಂಭದಲ್ಲಿ, ಪೊಲೀಸರು ಈ ಪತ್ರಗಳನ್ನು ಕಿಡಿಗೇಡಿಗಳ ಕೃತ್ಯ ಎಂದು ಪರಿಇಗಣಿಸಿದ್ದರೂ ಗುರುವಾರ, ಯುಪಿ ಸಿಎಂ ಯೋಗಿ (CM Yogi Adityanath) ಮೀರತ್‌ಗೆ ಭೇಟಿ ನೀಡಿದ್ದರಿಂದ ಈ ವಿಚಾರ ಭಾರೀ ಸಂಚಲನ ಮೂಡಿಸಿದೆ.

ಪತ್ರದಲ್ಲಿ ಉಲ್ಲೇಖಿಸಲಾದ ನಿಲ್ದಾಣಗಳಲ್ಲಿ ಮೀರತ್, ಘಾಜಿಯಾಬಾದ್, ಹಾಪುರ್, ಮುಜಾಫರ್‌ನಗರ, ಅಲಿಗಢ, ಖುರ್ಜಾ, ಕಾನ್ಪುರ, ಲಕ್ನೋ, ಶಹಜಹಾನ್‌ಪುರ ರೈಲು ನಿಲ್ದಾಣಗಳು ಸೇರಿವೆ. ಹೀಗೊಂದು ಬೆದರಿಕೆ ಪತ್ರ ಬಂದಿರುವುದನ್ನು ರೈಲ್ವೆ ಪೊಲೀಸ್ ಉಪ ಎಸ್ಪಿ ಸುದೇಶ್ ಕುಮಾರ್ ಗುಪ್ತಾ ಖಚಿತಪಡಿಸಿದ್ದಾರೆ. ಮೀರತ್ ಸಿಟಿ ರೈಲು ನಿಲ್ದಾಣದ ಅಧೀಕ್ಷಕರ ಕಚೇರಿಗೆ ಮಂಗಳವಾರ ಇಂತಹ ಪತ್ರ ಬಂದಿದ್ದು, ಮೀರತ್ ಸಿಟಿ ನಿಲ್ದಾಣದ ಜೊತೆಗೆ ಕ್ಯಾಂಟ್ ನಿಲ್ದಾಣ, ಪರ್ತಾಪುರ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ ಎಂದು ಅವರು ಬುಧವಾರ ತಿಳಿಸಿದರು. 

Latest Videos

ಈ ಪ್ರಕರಣದಲ್ಲಿ ಮೀರತ್ ಸಿಟಿ ರೈಲು ನಿಲ್ದಾಣದಲ್ಲಿರುವ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 505/2 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗುರುವಾರ ಮೀರತ್‌ಗೆ ಸಿಎಂ ಯೋಗಿ ಭೇಟಿ ನೀಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮುಖ್ಯಮಂತ್ರಿಗಳ ಭೇಟಿಗೆ ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ (ನಗರ) ವಿನೀತ್ ಭಟ್ನಾಗರ್ ತಿಳಿಸಿದ್ದಾರೆ.

ಅಕ್ಟೋಬರ್ 30 ರಂದೂ ಇಂತಹುದೇ ಪತ್ರ

ಅಕ್ಟೋಬರ್ 30 ರಂದು ಹಾಪುರ್ ರೈಲ್ವೆ ನಿಲ್ದಾಣದ ಅಧೀಕ್ಷಕರ ಕಚೇರಿಗೆ ಇದೇ ರೀತಿಯ ಪತ್ರ ಬಂದಿದ್ದು, ನಂತರ ನಿಲ್ದಾಣದ ಆವರಣದಲ್ಲಿ ತನಿಖೆ ನಡೆಸಲಾಗಿತ್ತು. ಈ ಬಗ್ಗೆ ಠಾಣೆಯ ಅಧೀಕ್ಷಕ ಆರ್.ಪಿ.ಸಿಂಗ್ ಅವರು ಪತ್ರದೊಂದಿಗೆ ಪೋಸ್ಟ್ ಮ್ಯಾನ್ ಕಚೇರಿಗೆ ಬಂದಿದ್ದರು. ರೈಲ್ವೆ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಅಯೋಧ್ಯೆಯ ಹನುಮಾನ್‌ಗರ್ಹಿ, ರಾಮಜನ್ಮಭೂಮಿ (Ram Janmbhumi), ಅಲಹಾಬಾದ್, ಗಾಜಿಯಾಬಾದ್, ಮೀರತ್ (Meerut), ಮುಜಾಫರ್‌ನಗರ ಮತ್ತು ಸಹರಾನ್‌ಪುರದಲ್ಲಿ ಡಿಸೆಂಬರ್ 6 ರಂದು ದಾಳಿಯ ಭೀತಿ ಎದುರಾಗಿದೆ.

ಅಕ್ಟೋಬರ್ 30 ರಂದೂ ಇದೇ ರೀತಿ ಪತ್ರ

ಅಕ್ಟೋಬರ್ 30 ರಂದು ಹಾಪುರ್ ರೈಲ್ವೆ ನಿಲ್ದಾಣದ ಅಧೀಕ್ಷಕರ ಕಚೇರಿಗೆ ಇದೇ ರೀತಿಯ ಪತ್ರ ಬಂದಿದ್ದು, ನಂತರ ನಿಲ್ದಾಣದ ಆವರಣದಲ್ಲಿ ತನಿಖೆ ನಡೆಸಲಾಗಿತ್ತು. ಆ ಪತ್ರದಲ್ಲಿ ನವೆಂಬರ್ 26 ರಂದು ರೈಲು ನಿಲ್ದಾಣಗಳಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಬರೆಯಲಾಗಿದೆ. ಆ ಪತ್ರದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಮೀಮ್ ಶೇಖ್ ಹೆಸರನ್ನು ಬರೆಯಲಾಗಿತ್ತು. ಈತ ಕರಾಚಿ ನಿವಾಸಿ. ಪತ್ರದಲ್ಲಿ ಲಷ್ಕರ್-ಎ-ತೈಬಾ ಜಿಂದಾಬಾದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ. ಮಂಗಳವಾರ ಸ್ವೀಕರಿಸಿದ ಪತ್ರದಲ್ಲಿ, ಡಿಸೆಂಬರ್ 6 ರಂದು ದಾಳಿಯ ಬೆದರಿಕೆಗೆ ಒಳಗಾದ ದೇವಾಲಯಗಳು, ಹನುಮಾನ್‌ಗರ್ಹಿ, ರಾಮಜನ್ಮಭೂಮಿ, ಅಲಹಾಬಾದ್, ಗಾಜಿಯಾಬಾದ್, ಮೀರತ್, ಮುಜಾಫರ್‌ನಗರ ಮತ್ತು ಅಯೋಧ್ಯೆಯ ಸಹರಾನ್‌ಪುರದ ದೇವಾಲಯಗಳಿಗೆ ಉತ್ತರ ಪ್ರದೇಶದ ಅನೇಕ ದೇವಾಲಯಗಳ ಹೆಸರನ್ನು ಇಡಲಾಗಿದೆ.

click me!