ಸಹೋದರನಿಂದ ಗರ್ಭಿಣಿಯಾಗಿದ್ದ ಅಪ್ರಾಪ್ತೆಯ ಮಗು ತೆಗೆಸೋದು ಸರಿಯಲ್ಲ: ಅದು ದೇವರ ಕೊಡುಗೆ ಎಂದು ಮೇಲ್ಮನವಿ ಸಲ್ಲಿಕೆ

Published : May 27, 2023, 01:30 PM IST
ಸಹೋದರನಿಂದ ಗರ್ಭಿಣಿಯಾಗಿದ್ದ ಅಪ್ರಾಪ್ತೆಯ ಮಗು ತೆಗೆಸೋದು ಸರಿಯಲ್ಲ: ಅದು ದೇವರ ಕೊಡುಗೆ ಎಂದು ಮೇಲ್ಮನವಿ ಸಲ್ಲಿಕೆ

ಸಾರಾಂಶ

ಗರ್ಭದಲ್ಲಿರುವ ಮಗುವು "ಸರ್ವಶಕ್ತನ ಕೊಡುಗೆ" ಎಂದು ಹೇಳಿದ ವಕೀಲರು, ಇದನ್ನು ನ್ಯಾಯಾಂಗ ಆದೇಶದಿಂದ ಕೊನೆಗೊಳಿಸಲಾಗುವುದಿಲ್ಲ ಎಂದಿದ್ದಾರೆ. 

ತಿರುವನಂತಪುರ (ಮೇ 27, 2023): 15 ವರ್ಷದ ಬಾಲಕಿಗೆ ತನ್ನ ಸಹೋದರನಿಂದ ಗರ್ಭಿಣಿಯಾಗಿದ್ದ 7 ತಿಂಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದ ಏಕ-ನ್ಯಾಯಾಧೀಶರ ಇತ್ತೀಚಿನ ಆದೇಶವನ್ನು ರದ್ದುಗೊಳಿಸುವಂತೆ ವಕೀಲರೊಬ್ಬರು ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ .

ಈ ಸಂಬಂಧ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠವು ಗುರುವಾರ ಅರ್ಜಿದಾರ-ವಕೀಲರಿಗೆ ಈ ತೀರ್ಪು ನೀಡಿದ್ದ ಏಕ-ನ್ಯಾಯಮೂರ್ತಿಯನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳಲ್ಲಿ ಒಬ್ಬರನ್ನಾಗಿ ಮಾಡುವುದಕ್ಕಾಗಿ ಸಂಪರ್ಕಿಸಲು ಹೇಳಿದೆ. ಅಪ್ರಾಪ್ತ ಬಾಲಕಿಯ ಸ್ವಂತ ಒಡಹುಟ್ಟಿದವರಿಂದಲೇ ಮಗುವನ್ನು ಗರ್ಭಧರಿಸಿದ ಕಾರಣ ಗರ್ಭಾವಸ್ಥೆಯ ಮುಂದುವರಿಕೆ ಸಾಮಾಜಿಕ ಮತ್ತು ವೈದ್ಯಕೀಯ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಏಕ-ನ್ಯಾಯಾಧೀಶರ ಆದೇಶವನ್ನು ಕುಲತ್ತೂರು ಜೈಸಿಂಗ್ ಅವರು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಸಹೋದರನಿಂದ್ಲೇ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ: 7 ತಿಂಗಳ ಭ್ರೂಣ ತೆಗೆಸಲು ಹೈಕೋರ್ಟ್ ಒಪ್ಪಿಗೆ

ಗರ್ಭದಲ್ಲಿರುವ ಮಗುವು "ಸರ್ವಶಕ್ತನ ಕೊಡುಗೆ" ಎಂದು ಹೇಳಿದ ವಕೀಲರು, ಇದನ್ನು ನ್ಯಾಯಾಂಗ ಆದೇಶದಿಂದ ಕೊನೆಗೊಳಿಸಲಾಗುವುದಿಲ್ಲ. ಅಲ್ಲದೆ,  ಸಂತ್ರಸ್ತ ಬಾಲಕಿಯ ಕುಟುಂಬವನ್ನು ಸಾಮಾಜಿಕ ಮತ್ತು ಮಾನಸಿಕ ಕಳಂಕ ಅಥವಾ "ಸುಳ್ಳು ಹೆಮ್ಮೆ" ಯಿಂದ ರಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ, ಕೇವಲ ಎಫ್‌ಐಆರ್‌ನ ಆಧಾರದ ಮೇಲೆ ಆಕೆಯ ಸಹೋದರನಿಂದ ಗರ್ಭಪಾತವಾಗಿದೆ ಎಂಬ ತೀರ್ಮಾನಕ್ಕೆ ಏಕ-ನ್ಯಾಯಾಧೀಶರು ಬಂದಿದ್ದಾರೆ. 8 ತಿಂಗಳ ಗರ್ಭದಲ್ಲಿರುವ ಮಗುವಿನ ಅಂತ್ಯಕ್ಕೆ ಸಾಮಾಜಿಕ ಮತ್ತು ಮಾನಸಿಕ ತೊಡಕುಗಳು ಕಾರಣವಲ್ಲ ಎಂದು ಸಲ್ಲಿಸಲಾಗಿದೆ’’ ಎಂದು ಏಕ ನ್ಯಾಯಮೂರ್ತಿಗಳ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ವಕೀಲರು ಹೇಳಿದರು.

ಹಾಗೆ, ಹೆರಿಗೆಯ ಸಮಯದಲ್ಲಿ ಮಗುವಿನ ಜೀವಕ್ಕೆ ಅಪಾಯವಿದೆ ಅಥವಾ ಗರ್ಭಾವಸ್ಥೆಯನ್ನು ಮುಂದುವರೆಸಿದರೆ ತಾಯಿಗೆ ವೈದ್ಯಕೀಯ ಸಮಸ್ಯೆಗಳಿರುತ್ತವೆ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿಲ್ಲ. ಅಲ್ಲದೆ, ತಾಯಿ ಮತ್ತು ಭ್ರೂಣ ಇಬ್ಬರೂ ಸಾಮಾನ್ಯ ಹೆರಿಗೆಗೆ ದೈಹಿಕವಾಗಿ ಸಮರ್ಥರಾಗಿದ್ದಾರೆ ಎಂದು ಊಹಿಸಬಹುದು  ಎಂದೂ ವಕೀಲರು ವಾದಿಸಿದ್ದಾರೆ. "ಈ ಗೌರವಾನ್ವಿತ ನ್ಯಾಯಾಲಯದ ಮಧ್ಯಂತರ ಆದೇಶವು ಸಾಮಾನ್ಯರ ಆತ್ಮಸಾಕ್ಷಿಗೆ ವಿರುದ್ಧವಾಗಿದೆ ಮತ್ತು ಹೃದಯ ವಿದ್ರಾವಕ ಭಾವನೆಯನ್ನು ಹೊಂದಿರಬಹುದು" ಎಂದೂ ಅರ್ಜಿದಾರರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಗರ್ಭಪಾತ ನಿರ್ಧರಿಸುವ ಹಕ್ಕು ಮಹಿಳೆಗಿದೆ; 32 ವಾರದ ಗರ್ಭಿಣಿಯ ಅಬಾರ್ಷನ್‌ಗೆ ಹೈಕೋರ್ಟ್‌ ಅಸ್ತು..!

ಇನ್ನು, ಈ ವಿಷಯವನ್ನು ಮುಂದಿನ ಸೋಮವಾರ ಪರಿಗಣಿಸಲಾಗುವುದು ಎಂದೂ ವರದಿಯಾಗಿದೆ. 

32 ವಾರದ ಗರ್ಭಿಣಿಯ ಅಬಾರ್ಷನ್‌ಗೆ ಅಸ್ತು ಎಂದಿದ್ದ ಹೈಕೋರ್ಟ್‌ 
ಭ್ರೂಣಕ್ಕೆ ತೀವ್ರ​ವಾದ ಸ​ಮ​ಸ್ಯೆ​ಗ​ಳು ಇರು​ವು​ದ​ರಿಂದ ವಿವಾ​ಹಿತ ಮಹಿ​ಳೆಗೆ 32ನೇ ವಾರದಲ್ಲಿ ಗರ್ಭ​ಪಾತ ಮಾಡಿ​ಕೊ​ಳ್ಳಲು ಕೋರ್ಟ್‌ ಅನು​ಮತಿ ನೀಡಿದ್ದ ಘಟನೆ ಜನವರಿಯಲ್ಲಿ ನಡೆದಿತ್ತು. ಗರ್ಭ​ದ​ಲ್ಲಿ​ರುವ ಮಗು​ವಿಗೆ ಆರೋಗ್ಯ ಸಮ​ಸ್ಯೆ​ಗ​ಳಿ​ರು​ವು​ದ​ರಿಂದ ಗರ್ಭ​ಪಾ​ತಕ್ಕೆ ಅವ​ಕಾಶ ನೀಡ​ಬೇಕು ಎಂದು ಕೋರಿ ಮಹಿಳೆಯೊ​ಬ್ಬರು ಬಾಂಬೆ ಹೈಕೋರ್ಟ್‌ ಮೆಟ್ಟಿ​ಲೇ​ರಿ​ದ್ದರು. ಈ ಅರ್ಜಿಯ ವಿಚಾ​ರಣೆ ನಡೆ​ಸಿದ್ದ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಎ​ಸ್‌.​ಜಿ.​ ದಿಗೆ ಅವ​ರಿದ್ದ ಪೀಠ, ಭ್ರೂಣಕ್ಕೆ ತೀವ್ರ ಆರೋಗ್ಯ ಸಮ​ಸ್ಯೆ​ಗ​ಳಿ​ದ್ದಾಗ ಗರ್ಭ​ಪಾ​ತಕ್ಕೆ ನಿಗದಿಪಡಿ​ಸಿ​ರುವ ಅವ​ಧಿ​ಯನ್ನು ಪರಿ​ಗ​ಣಿ​ಸ​ಬಾ​ರದು ಎಂದು ಹೇಳಿತು.

‘ಗರ್ಭ​ಪಾತ ಮಾಡಿ​ಸಿ​ಕೊ​ಳ್ಳ​ಬೇಕು ಎಂಬುದು ಮಹಿ​ಳೆ ತಾನಾ​ಗಿಯೇ ತೆಗೆ​ದು​ಕೊಂಡಿ​ರುವ ನಿರ್ಧಾರ. ಗರ್ಭ​ಪಾ​ತಕ್ಕೆ ಸಂಬಂಧಿ​ಸಿ​ದಂತೆ ನಿರ್ಧ​ರಿ​ಸುವ ಹಕ್ಕು ಮಹಿ​ಳೆ​ಗಿ​ದೆಯೇ ಹೊರತು ವೈದ್ಯ​ಕೀಯ ಸಂಸ್ಥೆ​ಗಲ್ಲ. ಆರೋಗ್ಯ ಸಮ​ಸ್ಯೆ ಇರುವ ಮಕ್ಕ​ಳನ್ನು ಬೆಳೆ​ಸು​ವುದು ತಾಯಿಗೆ ಜೀವನ ಪೂರ್ತಿ ಕಷ್ಟ​ವಾ​ಗು​ತ್ತದೆ. ಹಾಗಾಗಿ ಈ ಗರ್ಭ​ಪಾ​ತಕ್ಕೆ ಅನು​ಮತಿ ನೀಡ​ಲಾ​ಗಿದೆ’ ಎಂದು ಕೋರ್ಟ್‌ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿತು. ಸರ್ಕಾರದ ನಿಯಮದ ಪ್ರಕಾರ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಬೇಕು. ಆದರೆ, ವಿಶೇಷ ಕೆಟಗರಿಗೆ 24 ವಾರದ ಮಿತಿ ಹಾಕಲಾಗಿದೆ ಎಂಬ ಕಾನೂನು ಇದೆ. 

ಇದನ್ನೂ ಓದಿ: ಅಯ್ಯೋ ಪಾಪಿ! ಹೆಣ್ಣು ಶಿಶುವಿಗೆ ಜನ್ಮ ಕೊಟ್ಟು ಕಿಟಕಿಯಿಂದ ಎಸೆದು ಕೊಂದ 19 ವರ್ಷದ ಯುವತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Hindu New Year: ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಅವರಿಂದ 'ಹಿಂದೂ ಹೊಸವರ್ಷ'ದ ವಿಶೇಷ ಶುಭ ಹಾರೈಕೆ
Divorce Maintenance: ಹೆಂಡತಿ ಕೇಳಿದಷ್ಟು ಜೀವನಾಂಶ ಕೊಡ್ಬೇಕಾ? ಗಂಡಂದಿರಿಗೆ ಈ ಸತ್ಯ ಗೊತ್ತಾದ್ರೆ ನಿರಾಳ!