ಜೈಲು ಶಿಕ್ಷೆ ಮಧ್ಯೆಯೇ ಅಭ್ಯರ್ಥಿಗಳಿಗೆ ಲಾಲು ಸಂದರ್ಶನ!

Kannadaprabha News   | Asianet News
Published : Oct 09, 2020, 11:43 AM ISTUpdated : Oct 09, 2020, 11:47 AM IST
ಜೈಲು ಶಿಕ್ಷೆ ಮಧ್ಯೆಯೇ ಅಭ್ಯರ್ಥಿಗಳಿಗೆ ಲಾಲು ಸಂದರ್ಶನ!

ಸಾರಾಂಶ

ಆಸ್ಪ​ತ್ರೆ​ಯ​ಲ್ಲಿ​ರುವ ಅತಿ ಸುದೀ​ರ್ಘಾ​ವಧಿ ಅಪ​ರಾಧಿ ಎಂಬ ‘ಕೀ​ರ್ತಿ​’ಗೂ ಭಾಜ​ನ​ರಾ​ಗಿ​ರುವ ಆರ್‌​ಜೆಡಿ ಮುಖ್ಯಸ್ಥ ಲಾಲುಪ್ರಸಾದ್‌ ಯಾದವ್‌ ಅವರು ಶಿಕ್ಷೆ ಅನು​ಭ​ವಿ​ಸು​ತ್ತಿ​ರುವ ವೇಳೆಯೇ ಬಿಹಾರ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಅಭ್ಯ​ರ್ಥಿ​ಗಳ ಸಂದ​ರ್ಶನ ಆರಂಭಿ​ಸಿ​ದ್ದಾ​ರೆ!

ರಾಂಚಿ/ಪಟ​ನಾ(ಅ.09): ಮೇವು ಹಗ​ರ​ಣ​ದಲ್ಲಿ ಜೈಲು ಪಾಲಾ​ಗಿ​ರುವ ಆರ್‌​ಜೆಡಿ ಮುಖ್ಯಸ್ಥ ಲಾಲುಪ್ರಸಾದ್‌ ಯಾದವ್‌ ಅವರು ಶಿಕ್ಷೆ ಅನು​ಭ​ವಿ​ಸು​ತ್ತಿ​ರುವ ವೇಳೆಯೇ ಬಿಹಾರ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಅಭ್ಯ​ರ್ಥಿ​ಗಳ ಸಂದ​ರ್ಶನ ಆರಂಭಿ​ಸಿ​ದ್ದಾ​ರೆ!

ಅಚ್ಚರಿ ಎನ್ನಿ​ಸಿ​ದರೂ ಹೌದು. ರಾಂಚಿ ಜೈಲಿ​ನಲ್ಲಿ ಲಾಲು​ರನ್ನು ಇರಿ​ಸ​ಲಾ​ಗಿ​ತ್ತಾ​ದರೂ, ಅನಾ​ರೋ​ಗ್ಯದ ಕಾರಣ ನೀಡಿ ಅವರು 2018ರ ಆ.29ರಂದೇ ರಾಂಚಿಯ ರಿಮ್ಸ್‌ ಆಸ್ಪ​ತ್ರೆಗೆ ಚಿಕಿ​ತ್ಸೆಗೆ ದಾಖ​ಲಾ​ಗಿ​ದ್ದರು. ಈ ಮೂಲಕ ಆಸ್ಪ​ತ್ರೆ​ಯ​ಲ್ಲಿ​ರುವ ಅತಿ ಸುದೀ​ರ್ಘಾ​ವಧಿ ಅಪ​ರಾಧಿ ಎಂಬ ‘ಕೀ​ರ್ತಿ​’ಗೂ ಭಾಜ​ನ​ರಾ​ಗಿ​ದ್ದಾ​ರೆ. ಇನ್ನು ಕಳೆ​ದ ಆಗಸ್ಟ್‌ 5ರಂದು ಅವರು ಆಸ್ಪ​ತ್ರೆಯ ಡೈರೆ​ಕ್ಟರ್ಸ್‌ ಬಂಗ​ಲೆಗೆ ಸ್ಥಳಾಂತ​ರ​ಗೊಂಡು ಅಲ್ಲಿಯೇ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಶಿವಸೇನೆ ಸರ್ಕಾರ ಕೆಳಗಿಳಿಸ್ತೀವಿ, ಮಹಾರಾಷ್ಟ್ರದಲ್ಲಿ ಶೀಘ್ರ ಬಿಜೆಪಿ ಸರ್ಕಾರ ರಚನೆ: ನಡ್ಡಾ

ಆದರೆ ಇದೇ ಅವ​ಕಾ​ಶ​ವನ್ನು ‘ದು​ರ್ಬ​ಳ​ಕೆ’ ಮಾಡಿ​ಕೊ​ಳ್ಳು​ತ್ತಿ​ರುವ ಅವರು, ಅಲ್ಲಿಂದಲೇ ಆರ್‌​ಜೆಡಿ ಟಿಕೆಟ್‌ ಆಕಾಂಕ್ಷಿ​ಗ​ಳನ್ನು ಕರೆ​ಸಿ​ಕೊಂಡು ಸಂದ​ರ್ಶನ ಆರಂಭಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ. ಈ ಮಾಹಿ​ತಿ​ಯ​ನ್ನು ಲಾಲು ಆಪ್ತ​ರೊ​ಬ್ಬರು ಖಚಿ​ತ​ಪ​ಡಿ​ಸಿ​ದ್ದಾರೆ. ‘ಡೈ​ರೆ​ಕ್ಟರ್ಸ್‌ ಬಂಗ​ಲೆಗೆ ತಮಗೆ ಬೇಕಾದ ಟಿಕೆಟ್‌ ಆಕಾಂಕ್ಷಿ​ಗಳನ್ನು ಲಾಲು ಕರೆ​ಸಿ​ಕೊ​ಳ್ಳು​ತ್ತಿ​ದ್ದಾ​ರೆ. ಅವ​ರಿಗೆ ಲಾಲು ಟಿಕೆಟ್‌ ಆಶ್ವಾ​ಸನೆ ನೀಡು​ತ್ತಿ​ದ್ದಾ​ರೆ. ಲಾಲು ಅವರೇ ಟಿಕೆಟ್‌ ಫೈನಲ್‌ ಮಾಡು​ತ್ತಿ​ದ್ದಾ​ರೆ’ ಎಂದು ತಿಳಿ​ಸಿ​ದ್ದಾ​ರೆ.

‘ನಿತ್ಯ ಲಾಲು ಅವ​ರಿಗೆ ಸುಮಾರು 5000 ಬಯೋ​ಡೇ​ಟಾ​ಗಳು ತಲು​ಪು​ತ್ತಿವೆ. ಲಾಲು ಅವರು ಮೊಬೈ​ಲ್‌​ನಲ್ಲೂ ಚುನಾ​ವಣಾ ಚಟು​ವ​ಟಿ​ಕೆ ನಡೆ​ಸು​ತ್ತಿ​ದ್ದಾ​ರೆ​’ ಎಂದೂ ತಿಳಿ​ದು​ಬಂದಿ​ದೆ.

ದೇವೇಂದ್ರ ಫಡ್ನ​ವೀಸ್‌ ಜತೆ ಜಾರ​ಕಿ​ಹೊಳಿ: ಕುತೂ​ಹಲ ಕೆರ​ಳಿ​ಸಿದ ಉಭಯ ನಾಯಕರ ಭೇಟಿ

‘ಅಪ​ರಾ​ಧಿ​ಗ​ಳಿಗೆ ಈ ರೀತಿ ಮುಕ್ತ​ವಾಗಿ ಬೇಕಾ​ದ​ವ​ರನ್ನು ಭೇಟಿ ಮಾಡಲು ಆಗದು. ಅದ್ಹೇಗೆ ಎಲ್ಲ​ರಿಗೂ ಭೇಟಿಗೆ ಅವ​ಕಾಶ ನೀಡ​ಲಾ​ಗು​ತ್ತಿ​ದೆ ಎಂಬುದೇ ಪ್ರಶ್ನೆ. ಇದು ರಾಜ್ಯದ ಜೆಎಂಎಂ-ಕಾಂಗ್ರೆಸ್‌ ಸರ್ಕಾ​ರದ ವೈಫಲ್ಯ’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯ​ಮಂತ್ರಿ ರಘು​ಬರ ದಾಸ್‌ ಆರೋ​ಪಿ​ಸಿ​ದ್ದಾ​ರೆ. ಅಲ್ಲದೆ, ಲಾಲುಗೆ ಮೊಬೈಲ್‌ ಹೇಗೆ ನೀಡ​ಲಾ​ಗಿದೆ ಎಂಬುದೂ ಪ್ರಶ್ನೆ​ಯಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗ ಹೊತ್ತಿ ಉರಿದ ಐವರು ಮದುವೆಗೆ ತೆರಳುತ್ತಿದ್ದವರ ಕಾರ್
ಕುಂಭಮೇಳ ವೈರಲ್ ಹುಡುಗಿ ಮದುವೆ ವಯಸ್ಸಿನ ವಿವಾದದಲ್ಲಿ ಹೊಸ ತಿರುವು! ಕೇರಳ ಪೊಲೀಸರ ತನಿಖೆ