ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

Published : Oct 06, 2021, 07:30 AM ISTUpdated : Oct 06, 2021, 12:57 PM IST
ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಂತ್ರಿ ಮಗನಿಂದ ರೈತರಿಗೆ ಗುಂಡೇಟು!

ಸಾರಾಂಶ

* ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್‌ * ಉತ್ತರ ಪ್ರದೇಶದ ಲಖೀಂಪುರ ಖೇರಿ ದುರ್ಘಟನೆಯ ದೃಶ್ಯಾವಳಿ ಬಹಿರಂಗ * ಹಠಾತ್‌ ಮೈಮೇಲೆರಗಿದ ಕಾರು * ಕಾರಲ್ಲಿ ಮಗ ಇದ್ದರೆ ರಾಜೀನಾಮೆ: ಕೇಂದ್ರ ಸಚಿವ ಮಿಶ್ರಾ * ಕಾರಲ್ಲಿ ಮಿಶ್ರಾ ಪುತ್ರ ಇದ್ದ, ಗುಂಡು ಹಾರಿಸಿದ: ಎಫ್‌ಐಆರ್‌  

ಲಖನೌ(ಅ 06): ಉತ್ತರ ಪ್ರದೇಶದ(Uttar Pradesh) ಲಖೀಂಪುರ ಖೇರಿಯಲ್ಲಿ(Lakhimpur Kheri) ರೈತರ ಮೇಲೆ ಹರಿದಿದೆ ಎನ್ನ​ಲಾದ ಎಸ್‌​ಯುವಿ(SUV) ಕಾರಿ​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ನಡು​ವೆಯೇ ಘಟ​ನೆಯ ಎಫ್‌​ಐ​ಆ​ರ್‌​ನಲ್ಲಿ(FIR) ‘ರೈತರ ಮೇಲೆ ಹರಿದ ಕಾ​ರಿ​ನಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ(Ajay Mishra) ಮಗ ಇದ್ದರು. ಅವರು ರೈತರ ಮೇಲೆ ಗುಂಡು ಕೂಡ ಹಾರಿ​ಸಿ​ದ​ರು(Firing)’ ಎಂದು ಉಲ್ಲೇಖಿ​ಸ​ಲಾ​ಗಿದೆ. ಇದು ದೊಡ್ಡ ರಾಜ​ಕೀಯ ಬಿರು​ಗಾಳಿ ಎಬ್ಬಿ​ಸಿ​ದೆ.

25 ಸೆಕೆಂಡಿನ ವಿಡಿಯೋ ಕ್ಲಿಪ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಎಸ್‌ಯುವಿ ಕಾರೊಂದು ಗುದ್ದಿಕೊಂಡು ಹೋಗಿದೆ. ಈ ಸಮಯದಲ್ಲಿ ಕೆಲವರು ಕಾರಿನ ಅಡಿಗೆ ಸಿಲುಕಿಕೊಂಡರೆ, ಹಲವರು ತಪ್ಪಿಸಿಕೊಳ್ಳಲು ಓಡಿದ್ದಾರೆ.

"

‘ಈ ಕಾರಿನಲ್ಲಿ ಕೇಂದ್ರ ಮಂತ್ರಿ ಅಜಯ್‌ ಕುಮಾರ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ(Ashish Mishra) ಹಾಗೂ ಅವರ ಸಹ​ಚ​ರರು ಇದ್ದ​ರು. ಕಾರು 100 ಕಿ.ಮೀ. ವೇಗ​ದಲ್ಲಿ ನುಗ್ಗಿ​ಬಂತು. ಇದು ನಮ್ಮ ಕೊಲೆಗೆ ನಡೆದ ಸಂಚಾ​ಗಿ​ತ್ತು’ ಎಂದು ಗಾಯಾಳು ರೈತ ತೇಜಿಂದರ್‌ ವಿರ್ಕ್ ಆರೋ​ಪಿ​ಸಿ​ದ್ದಾ​ರೆ. ದೃಶ್ಯ​ದಲ್ಲಿ ಕಾರು ಚಾಲನೆ ಮಾಡು​ತ್ತಿ​ದ್ದ​ವರು ಯಾರು ಎಂಬ ಸ್ಪಷ್ಟತೆ ಇಲ್ಲ. ಆದರೆ ಎಫ್‌ಐ​ಆ​ರ್‌​ನಲ್ಲಿ ‘ಕಾ​ರಲ್ಲಿ ಮಿಶ್ರಾ ಪುತ್ರ ಆಶಿಷ್‌ ಇದ್ದ​ರು’ ಎಂದು ಬರೆ​ದಿ​ರು​ವುದು ಈ ದೃಶ್ಯಕ್ಕೆ ಪುಷ್ಟಿನೀಡು​ವಂತಿ​ದೆ.

ವಿಡಿಯೋ ಬಗ್ಗೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಪ್ರತಿ​ಕ್ರಿ​ಯಿ​ಸಿದ್ದು, ‘ನನ್ನ ಮಗನ ವಿರುದ್ಧ ಒಂದೇ ಒಂದು ಸಾಕ್ಷ್ಯ ದೊರಕಿದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಆ ಕಾರು ನಮ್ಮದೇ ಹೌದು. ಆದರೆ ಅದರಲ್ಲಿ ನನ್ನ ಮಗ ಇರಲಿಲ್ಲ’ ಎಂದು ತಿಳಿಸಿದ್ದಾರೆ.

ಈ ನಡುವೆ, ವಿಡಿ​ಯೋ​ವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಟ್ವೀಟ​ರ್‌​ನಲ್ಲಿ ಹಂಚಿ​ಕೊಂಡಿದ್ದು, ತಪ್ಪಿ​ತ​ಸ್ಥರ ವಿರುದ್ಧ ಕ್ರಮಕ್ಕೆ ಆಗ್ರ​ಹಿ​ಸಿ​ದ್ದಾ​ರೆ.

3 ರೈತರ ಅಂತ್ಯ​ಕ್ರಿ​ಯೆ:

ಕಾರು ಹರಿದು ಮೃತ​ಪಟ್ಟಮೂವರು ರೈತರ ಅಂತ್ಯ​ಕ್ರಿಯೆ ಮಂಗ​ಳ​ವಾರ ನಡೆ​ಯಿತು. ಆದರೆ ನಾಲ್ಕನೇ ರೈತನ ಕುಟುಂಬ​ದ​ವರು ಪೋಸ್ಟ್‌ ಮಾರ್ಟಂನಲ್ಲಿ ಅಕ್ರಮ ನಡೆ​ದಿದೆ ಎಂದು ಆರೋ​ಪಿ​ಸಿದ್ದು, 2ನೇ ಬಾರಿ ಮರ​ಣೋ​ತ್ತರ ಪರೀ​ಕ್ಷೆಗೆ ಆಗ್ರ​ಹಿ​ಸಿ​ದ್ದಾರೆ. ಬೇಡಿಕೆ ಈಡೇ​ರಿಕೆವರೆ​ಗೆ ಅಂತ್ಯ​ಕ್ರಿಯೆ ನೆರ​ವೇ​ರಿ​ಸಲು ನಿರಾ​ಕ​ರಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್