
ಕೂಡಂಕುಳಂ (ಅ. 30): ದೇಶದ ಅತಿದೊಡ್ಡ ಅಣು ವಿದ್ಯುತ್ ಸ್ಥಾವರ ಘಟಕವಾಗಿರುವ ಇಲ್ಲಿನ ಕೂಡಂಕುಳಂ ಸಿಸ್ಟಮ್ಗಳ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲು ಹಬ್ಬಿದ ಬೆನ್ನಲ್ಲೇ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೂಡಂಕುಳಂ ಅಣು ವಿದ್ಯುತ್ ಘಟಕ(ಕೆಕೆಎನ್ಪಿಪಿ), ತನ್ನ ಕಂಪ್ಯೂಟರ್ಗಳ ಮೇಲೆ ಸೈಬರ್ ದಾಳಿ ನಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಡಿಟ್ರ್ಯಾಕ್ ರಾರಯಟ್(DTrackRAT) ಎಂಬ ವೈರಸ್ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಘಟಕದ ನೆಟ್ವರ್ಕ್ ಮೇಲೆ ಅಪ್ಪಳಿಸಿದೆ ಎಂಬ ಮಾಹಿತಿ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು. ಇದು ಜನ ಸಾಮಾನ್ಯರಲ್ಲಿ ಭಾರೀ ಆತಂಕವನ್ನುಂಟು ಮಾಡಿದ್ದರೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಹಿನ್ನೆಲೆ ಈ ಬಗ್ಗೆ ಪರಿಶೀಲನೆ ನಡೆಸಿದ ಕೆಕೆಎನ್ಪಿಪಿ, ತನ್ನ ಮೇಲೆ ಸೈಬರ್ ದಾಳಿ ನಡೆಯದೆ ಇರುವುದನ್ನು ಖಚಿತಪಡಿಸಿಕೊಂಡಿತು. ಬಳಿಕ, ಈ ಬಗ್ಗೆ ಸ್ಪಷ್ಟನೆ ರೂಪದ ಪ್ರತಿಕ್ರಿಯೆ ನೀಡಿದ ಕೆಕೆಎನ್ಪಿಪಿ, ‘ಕೆಕೆಎನ್ಪಿಯಲ್ಲಿರುವ ಕಂಪ್ಯೂಟರ್ಗಳು ಮತ್ತು ಇತರೆ ಅಣು ವಿದ್ಯುತ್ ಘಟಕಗಳ ನಿಯಂತ್ರಣವನ್ನಿಟ್ಟುಕೊಂಡಿರುವ ಸಿಸ್ಟಂಗಳು ಸುರಕ್ಷಿತವಾಗಿದ್ದು, ಅವುಗಳು ಬಾಹ್ಯ ಸೈಬರ್ ನೆಟ್ವರ್ಕ್ಗಳು ಅಥವಾ ಇಂಟರ್ನೆಟ್ನೊಂದಿಗೆ ಸಂಪರ್ಕ ಹೊಂದಿಲ್ಲ. ಹೀಗಾಗಿ, ಕೂಡಂಕುಳಂ ವಿದ್ಯುತ್ ಘಟಕದ ಮೇಲೆ ಸೈಬರ್ ದಾಳಿ ನಡೆಯಲು ಸಾಧ್ಯವೇ ಇಲ್ಲ’ ಎಂದು ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ