5 ವರ್ಷದ ಬಳಿಕ ಸದ್ದು ಮಾಡಿದ ಕೊಡನಾಡ್ ಕೊಲೆ ಪ್ರಕರಣ, ಮೊದಲ ಬಾರಿ ಶಶಿಕಲಾ ವಿಚಾರಣೆ!

By Suvarna NewsFirst Published Apr 21, 2022, 2:06 PM IST
Highlights

* ಕೊಡನಾಡ್ ದರೋಡೆ ಮತ್ತು ಕೊಲೆ ಪ್ರಕರಣ

* ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಎಸ್ಟೇಟ್‌ನಲ್ಲಿ ನಡೆದಿದ್ದ ಪ್ರಕರಣ

* ಗುರುವಾರ ದಿವಂಗತ ಜೆ ಜಯಲಲಿತಾ ಅವರ ಸಹಾಯಕಿ ವಿಕೆ ಶಶಿಕಲಾ ವಿಚಾರಣೆ

ಚೆನ್ನೈ(ಏ.21): ಕೊಡನಾಡ್ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಸಹಾಯಕಿ ವಿಕೆ ಶಶಿಕಲಾ ಅವರನ್ನು ಗುರುವಾರ ಮೊದಲ ಬಾರಿವಿಚಾರಣೆ ನಡೆಸಲಾಗುತ್ತದೆ. ಶಶಿಕಲಾ ಅವರ ಸಹೋದ್ಯೋಗಿಯೊಬ್ಬರು ಹೆಸರು ಉಲ್ಲೇಖಿಸಬಾರದೆಂಬ ಷರತ್ತಿನ ಮೇರೆಗೆ ಈ ಮಾಹಿತಿ ನೀಡಿದ್ದಾರೆ. ನಮಗೆ ಪೊಲೀಸ್ ಸಮನ್ಸ್ ಬಂದಿದೆ. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಅವರ ಟಿ ನಗರ ನಿವಾಸದಲ್ಲಿ (ಚೆನ್ನೈನಲ್ಲಿ) ವಿಚಾರಣೆ ನಡೆಯಲಿದೆ ಎಂದಿದ್ದಾರೆ. ಪಶ್ಚಿಮ ವಲಯದ ಮಹಾನಿರೀಕ್ಷಕ ಸುಧಾಕರ್ ನೇತೃತ್ವದ ತಂಡ ತನಿಖೆ ನಡೆಸಿ ವಿಚಾರಣೆ ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಕಳೆದ ವಾರ ಕೋಯಂಬತ್ತೂರಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶಾಸಕ ವಿ ಸಿ ಆರುಕುಟ್ಟಿ ಮತ್ತು ಪಕ್ಷದ ಅಮ್ಮಾ ಪೆರ್ವೈ ಪದಾಧಿಕಾರಿ ಅನುಭವ ರವಿ ಅವರನ್ನು ವಿಚಾರಣೆ ನಡೆಸಿತ್ತು ಎಂಬುವುದು ಉಲ್ಲೇಖನೀಯ. 

ಕೊಡನಾಡ್ ಟೀ ಗಾರ್ಡನ್, ಎಸ್ಟೇಟ್ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 900 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಬೇಸಿಗೆ ರಜೆ ಕಳೆಯಲು ಇಲ್ಲಿಗೆ ಬರುತ್ತಿದ್ದರು. ಈ ಉದ್ಯಾನದ ಒಳಗೆ ಬಂಗಲೆಯೂ ಇದೆ. ಈ ಬಗ್ಗೆ ಜನರು ವಿವಿಧ ಬಗ್ಗೆ ಮಾತನಾಡುತ್ತಿದ್ದರು. ಕೆಲವೇ ಜನರು ಬಂಗಲೆಯೊಳಗೆ ಪ್ರವೇಶಿಸುತ್ತಿದ್ದರು. ಬಂಗಲೆಯೊಳಗೆ ಹಲವು ರಹಸ್ಯ ಅಡಗಿದೆ ಎನ್ನಲಾಗಿದೆ. ಈ ಬಂಗಲೆಯಲ್ಲಿ ವಾಸಿಸುವ ನಿಧಿಯ ಬಗ್ಗೆಯೂ ಜನರು ಹೇಳುತ್ತಾರೆ. ಕೊಡನಾಡ್ ಎಸ್ಟೇಟ್ ಅನ್ನು ಜಯಲಲಿತಾ ಮತ್ತು ಅವರ ಆಪ್ತ ಸಹಾಯಕಿ ಶಶಿಕಲಾ ಮತ್ತು ಅವರ ಕುಟುಂಬ ಸದಸ್ಯರು 1990 ರ ದಶಕದಲ್ಲಿ ಪ್ರತ್ಯೇಕ ಷೇರುಗಳೊಂದಿಗೆ ಜಂಟಿಯಾಗಿ ಖರೀದಿಸಿದ್ದರು. ಇನ್ನು 2016ರಲ್ಲಿ ಜಯಲಲಿತಾ ನಿಧನರಾಗಿದ್ದಾರೆಂಬುವುದು ಉಲ್ಲೇಖನೀಯ.

ಗುರುವಾರ, ಕೊಡನಾಡು ಎಸ್ಟೇಟ್‌ನಲ್ಲಿ ಶಶಿಕಲಾ ಅವರ ಪಾತ್ರ ಮತ್ತು ಆಸ್ತಿ ವಿವರಗಳ ಬಗ್ಗೆ ಪ್ರಶ್ನಿಸುವ ಸಾಧ್ಯತೆಯಿದೆ. ಕಳೆದ ಡಿಸೆಂಬರ್‌ನಲ್ಲಿ ಶಶಿಕಲಾ ಅವರ ಸೋದರಳಿಯ ವಿವೇಕ್ ಜಯರಾಮನ್ ಅವರನ್ನೂ ಈ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು.

 23 ಏಪ್ರಿಲ್ 2017 ರ ರಂದು ನಡೆದಿತ್ತು ಆ ಕೊಲೆ

ಈ ಘಟನೆಯು 23 ಏಪ್ರಿಲ್ 2017 ರ ರಾತ್ರಿ ಕೊಡ್ನಾಡ್ ಎಸ್ಟೇಟ್ ನ ಕಾವಲುಗಾರ ಓಂ ಬಹದ್ದೂರ್ ಕೊಲೆಯಾದ. ಮತ್ತೊಬ್ಬ ಸಿಬಂದಿ ಕೃಷ್ಣ ಬಹದ್ದೂರ್ ಅವರ ಮೇಲೂ ದಾಳಿ ನಡೆದಿದ್ದು, ಆತ ಬದುಕುಳಿದಿದ್ದಾನೆ. ಕೊಲೆ ನಡೆಸಿದ ತಂಡದಲ್ಲಿ ಸುಮಾರು 10 ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದಲ್ಲದೇ ಅಲ್ಲಿ ನಿರ್ಮಿಸಿದ್ದ ಬಂಗಲೆಯನ್ನೂ ಈ ಗ್ಯಾಂಗ್ ಧ್ವಂಸ ಮಾಡಿದೆ. ಇದರೊಂದಿಗೆ ದರೋಡೆಯೂ ನಡೆದಿದ್ದು, ಆಸ್ತಿ ಪತ್ರಗಳು ಸೇರಿದಂತೆ ಹಲವು ವಸ್ತುಗಳು ನಾಪತ್ತೆಯಾಗಿದ್ದವು. ಆದರೆ, ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿತ್ತು.

ಪ್ರಕರಣ ಇನ್ನೂ ಬಗೆಹರಿದಿಲ್ಲ

ಈ ವಿಷಯದ ರಹಸ್ಯ ಇನ್ನೂ ಬಗೆಹರಿದಿಲ್ಲ. ಘಟನೆಯ ಒಂದು ವಾರದ ನಂತರ ಏಪ್ರಿಲ್ 28 ರಂದು ಇಬ್ಬರು ಪ್ರಮುಖ ಆರೋಪಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರಿಂದ ವಿಷಯವು ನಿಗೂಢವಾಗಿದೆ. ಸೇಲಂ ಬಳಿ ಸಿ ಕನಕರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೇರಳಕ್ಕೆ ತೆರಳುತ್ತಿದ್ದ ವೇಳೆ ವಿ ಸಾಯನ್ ಗಂಭೀರವಾಗಿ ಗಾಯಗೊಂಡಿದ್ದು, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕಣಕರಾಜ್ ಒಂದು ಕಾಲದಲ್ಲಿ ಜಯಲಲಿತಾರವರ ಡ್ರೈವರ್ ಆಗಿದ್ದ ಕಾರ್ಯ ನಿರ್ವಹಿಸುತ್ತಿದ್ದ ಎಂಬುವುದು ಉಲ್ಲೇಖನೀಯ. ಜಯಲಲಿತಾ ಮತ್ತು ಶಶಿಕಲಾ ಇಬ್ಬರ ಕೊಠಡಿಗಳಿಗೂ ಕಳ್ಳರು ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಸ್ಟೇಟ್‌ಗೆ ಸಂಬಂಧಿಸಿದ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ, ಪೊಲೀಸರು 11 ಜನರ ವಿರುದ್ಧ 300 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಈ 11 ಜನರಲ್ಲಿ ಕನಕರಾಜ್ ಮಾತ್ರ ತಮಿಳುನಾಡಿನವರಾಗಿದ್ದು, ಉಳಿದವರು ಕೇರಳದವರು.
 

click me!