ಪುದುಚೇರಿ ಸಿಎಂ, ಗೌರ್ನರ್‌ ನಡುವೆ ಹೆಲ್ಮೆಟ್‌ ಜಟಾಪಟಿ

Published : Oct 21, 2019, 01:42 PM IST
ಪುದುಚೇರಿ ಸಿಎಂ, ಗೌರ್ನರ್‌ ನಡುವೆ ಹೆಲ್ಮೆಟ್‌ ಜಟಾಪಟಿ

ಸಾರಾಂಶ

ಪುದುಚೇರಿ ಸಿಎಂ, ಗೌರ್ನರ್‌ ನಡುವಿನ ಜಟಾಪಟಿಗೆ ಕಾರಣವಾಯ್ತು ಹೆಲ್ಮೇಟ್ | ಹೆಲ್ಮೆಟ್‌ ಧರಿಸದ್ದಕ್ಕೆ ಕ್ರಮಕ್ಕೆ ಸೂಚಿಸಿದ ಬೇಡಿ | ಯಾರನ್ನೂ ಬಿಡುವುದಿಲ್ಲ ಟ್ರಾಫಿಕ್ ನಿಯಮ 

ಪುದುಚೇರಿ (ಅ. 21): ಪುದುಚೇರಿ ಉಪರಾಜ್ಯಪಾಲೆ ಕಿರಣ್‌ ಬೇಡಿ ಹಾಗೂ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಈ ಸಲ ಈ ಇಬ್ಬರೂ ಹೆಲ್ಮೆಟ್‌ ಧರಿಸದ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳ ಮಳೆಗರೆದಿದ್ದಾರೆ.

ನಾರಾಯಣಸಾಮಿ ಅವರು ಕಾಮರಾಜನಗರ ವಿಧಾನಸಭೆ ಉಪಚುನಾವಣೆ ಪ್ರಚಾರ ಮಾಡುವ ವೇಳೆ ಶನಿವಾರ ಹೆಲ್ಮೆಟ್‌ ಧರಿಸದೇ ಬೈಕ್‌ ರ್ಯಾಲಿ ನಡೆಸಿದ್ದರು.

 

ಈ ಫೋಟೋ ಭಾನುವಾರದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಬೇಡಿ ಅವರು, ‘ಹೆಲ್ಮೆಟ್‌ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿ ಮೇಲೆ ಕ್ರಮ ಜರುಗಿಸಿ’ ಎಂದು ಪುದುಚೇರಿ ಪೊಲೀಸ್‌ ಮಹಾನಿರ್ದೇಶಕರಿಗೆ ವಾಟ್ಸಪ್‌ ಸಂದೇಶ ಕಳಿಸಿದ್ದರು.

ಇದರ ಬೆನ್ನಲ್ಲೇ ನಾರಾಯಣಸ್ವಾಮಿ ಅವರು ಟ್ವೀಟರ್‌ನಲ್ಲಿ, ಬೇಡಿ ಅವರು 2017ರಲ್ಲಿ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿರುವ ಫೋಟೋವನ್ನು ಪ್ರಕಟಿಸಿದ್ದು, ‘ಉಪದೇಶ ಮಾಡುವ ಮುನ್ನ ಅದನ್ನು ಪಾಲಿಸಿ’ ಎಂದು ಕಿಚಾಯಿಸಿದ್ದಾರೆ. ಬೇಡಿ ಅವರು ಕುಳಿತಿದ್ದ ವಾಹನದ ಚಾಲಕಿ ಕೂಡ ಹೆಲ್ಮೆಟ್‌ ಧರಿಸಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು