Wayanad Landslide: ಕೇರಳ ಸಿಎಂ ರಿಲೀಫ್‌ ಫಂಡ್‌ಗೆ 5 ಕೋಟಿ ನೀಡಿದ ಗೌತಮ್‌ ಅದಾನಿ

By Santosh NaikFirst Published Jul 31, 2024, 6:38 PM IST
Highlights

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ ಇಲ್ಲಿಯವರೆಗೂ 205 ಮಂದಿ ಸಾವು ಕಂಡಿದ್ದಾರೆ. ಇದರ ಬೆನ್ನಲ್ಲೇ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ.

ಮುಂಬೈ (ಜು.31): ಕೇರಳದ ವಯನಾಡ್ ಜಿಲ್ಲೆಯನ್ನು ಧ್ವಂಸಗೊಳಿಸಿದ ವಿನಾಶಕಾರಿ ಭೂಕುಸಿತದಲ್ಲಿ ಇಲ್ಲಿಯವರೆಗೂ 205 ಮಂದಿ ಸಾವು ಕಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಪರಿಹಾರ ನಿಧಿಗೆ ಹಣಕಾಸಿನ ನೆರವೂ ಬೀಳುತ್ತಿದೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಬುಧವಾರ ಕೇರಳ ಮುಖ್ಯಮಂತ್ರಿಗೆ 5 ಕೋಟಿ ರೂ. ಸಂಕಷ್ಟ ಪರಿಹಾರ ನಿಧಿಯನ್ನು ನೀಡಿದ್ದಾರೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಮಂಗಳವಾರ ಸಂಭವಿಸಿದ ಈ ದುರಂತದಲ್ಲಿ ಹಲವಾರು ಜನರು ಈಗಲೂ ನಾಪತ್ತೆಯಾಗಿದ್ದಾರೆ ಮತ್ತು 400 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಸಂತಾಪ ವ್ಯಕ್ತಪಡಿ ಗೌತಮ್‌ ಅದಾನಿ ಮಾಡಿರುವ ಟ್ವೀಟ್‌ನಲ್ಲಿ "ವಯನಾಡಿನಲ್ಲಿ ಸಂಭವಿಸಿದ ದುರಂತದ ಪ್ರಾಣಹಾನಿಯಿಂದ ತೀವ್ರ ದುಃಖಿತವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನೋವಿನಲ್ಲಿ ನಾನೂ ಭಾಗಿಯಾಗಿರುವೆ. ಈ ಕಷ್ಟದ ಸಮಯದಲ್ಲಿ ಅದಾನಿ ಸಮೂಹವು ಕೇರಳದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ನಾವು ನಮ್ಮ ಬೆಂಬಲವನ್ನು ನೀಡುತ್ತೇವೆ. ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ನೀಡಲಿದ್ದೇವೆ' ಎಂದು ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತಗಳು, ಜಿಲ್ಲೆಯನ್ನು ಬೆಳಗಿನ ಜಾವ 2 ಮತ್ತು 4.10 ರ ಸುಮಾರಿಗೆ ಅಪ್ಪಳಿಸಿದವು, ಈ ವೇಳೆ ಪ್ರದೇಶದ ಅನೇಕ ನಿವಾಸಿಗಳು ತಮ್ಮ ಸುಖನಿದ್ರೆಯಲ್ಲಿದ್ದರು. ಈ ದುರಂತವು ಭಯಾನಕ ದೃಶ್ಯಗಳಿಗೆ ಕಾರಣವಾಗಿದೆ, ಸೇನೆ, ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಒಳಗೊಂಡಿರುವ ರಕ್ಷಣಾ ತಂಡಗಳು ಬದುಕುಳಿದವರನ್ನು ಹುಡುಕಲು ಮತ್ತು ಮೃತದೇಹಗಳನ್ನು ಹುಡುಕಲು ದಣಿವರಿಯಿಲ್ಲದೆ ಶ್ರಮಿಸುತ್ತಿವೆ. ಬುಧವಾರದ ಹೊತ್ತಿಗೆ, ಸೇನೆಯು ಸುಮಾರು 1,000 ಜನರನ್ನು ರಕ್ಷಿಸಿದೆ, ಆದರೆ ವಾಯುಪಡೆಯು ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ವೈಮಾನಿಕ ವಿಚಕ್ಷಣೆಯನ್ನೂ ನಡೆಸಿದೆ.

ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಚೂರಲ್ಮಲಾದಲ್ಲಿ ಸೇನೆಯು ಬೈಲಿ ಸೇತುವೆಯನ್ನು ನಿರ್ಮಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿದೆ. ಈ ಡನುಎವ, ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರವು ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಖಚಿತಪಡಿಸಿದ್ದಾರೆ.

Latest Videos

Wayanad Landslide: 200ರ ಗಡಿ ದಾಟಿದ ಸಾವಿನ ಸಂಖ್ಯೆ, ಭಾರೀ ಮಳೆಯ ನಡುವೆ ಮುಂದುವರಿದ ರಕ್ಷಣಾ ಕಾರ್ಯ

ದುರಂತವು ಬದುಕುಳಿದವರ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರಿದೆ, ಅವರು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಪಡಿತರ ಚೀಟಿ ವಿವರಗಳು ಮತ್ತು ಇತರ ಸರ್ಕಾರಿ ದಾಖಲೆಗಳನ್ನು ಬಳಸಿಕೊಂಡು ನಾಪತ್ತೆಯಾದವರ ಬಗ್ಗೆ ಜಿಲ್ಲಾಡಳಿತವು ಸಕ್ರಿಯವಾಗಿ ಡೇಟಾವನ್ನು ಸಂಗ್ರಹಿಸುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ

Deeply saddened by the tragic loss of life in Wayanad. My heart goes out to the affected families. The Adani Group stands in solidarity with Kerala during this difficult time. We humbly extend our support with a contribution of Rs 5 Cr to the Kerala Chief Minister's Distress…

— Gautam Adani (@gautam_adani)
click me!