
ತಿರುವನಂತಪುರಂ(ಮೇ.30): ಲಾಕ್ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಕೊರೋನಾ ವೈರಸ್ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಕೊರೋನಾ ವಿರುದ್ಧ ನಿಯಂತ್ರಣ ಸಾಧಿಸಿದ್ದ ಕೇರಳ ಕೂಡ ಇದೀಗ ಕೊರೋನಾ ವೈರಸ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೇರಳದಲ್ಲಿ ಸಮುದಾಯ ಮಟ್ಟದಲ್ಲಿ ಕೊರೋನಾ ಹರಡುವ ಭೀತಿ ಎದುರಾದ ಕಾರಣ ಇದೀಗ ಸರ್ಕಾರ, ಪ್ರೈಮರಿ ಲೆವೆಲ್ ಟೆಸ್ಟಿಂಗ್ ಆರಂಭಿಸಿದೆ.
ದೇಶದಲ್ಲಿ ಒಂದೇ ದಿನ ದಾಖಲೆಯ 7720 ಜನಕ್ಕೆ ವೈರಸ್!
ಇದೇ ಮೊದಲ ಬಾರಿಗೆ ಕೇರಳ ಪ್ರೈಮರಿ ಲೆವಲ್ ಟೆಸ್ಟಿಂಗ್ ಆರಂಭಿಸಿದೆ. ಕೇರಳ ತಜ್ಞರ ಸಮಿತಿ ಮುಖ್ಯಸ್ಥ ಡಾ.ಇಕ್ಬಾಲ್ ನೀಡಿದ ಸೂಚನೆ ಮೇರೆಗೆ ಕೇರಳ ಪ್ರೈಮರಿ ಲವೆಲ್ ಟೆಸ್ಟಿಂಗ್ ಆರಂಭಿಸಿದೆ. ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಸಮದಾಯ ಮಟ್ಟದಲ್ಲಿ ಕೊರೋನಾ ಹರಡುವ ಕುರಿತು ಎಚ್ಚರಿಸಿತ್ತು. ಇಷ್ಟೇ ಅಲ್ಲ ಇದನ್ನು ತಡೆಯಲು ಮಾಡಬೇಕಾದ ಕ್ರಮಗಳನ್ನೂ ಸೂಚಿಸಿತ್ತು.
ಕೊರೋನಾಗೆ ಭಾರತದಲ್ಲೇ ಔಷಧ, ಲಸಿಕೆ!
ಕೇರಳದಲ್ಲಿ ಇದುವರೆಗೆ ಕಮ್ಯೂನಿಟಿ ಲೆವೆಲ್ಗೆ ಕೊರೋನಾ ಹರಡಿಲ್ಲ. ಆದರೆ ನಾವು ಹಲವು ವಿಧಾನದ ಮೂಲಕ ಸಮುದಾಯ ಮಟ್ಟದಲ್ಲಿ ಕೊರೋನಾ ಹರಡಿರುವ ಕುರಿತು ಪರೀಕ್ಷೆ ನಡೆಸುತ್ತಿದ್ದೇವೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದ್ದಾರೆ.
ಪ್ರೈಮರಿ ಲೆವೆಲ್ ಟೆಸ್ಟಿಂಗ್ ಕಣ್ಣೂರು ಹಾಗೂ ತಿರುವನಂತಪುರಂಗಳಲ್ಲಿ ಆರಂಭಿಸಲಾಗಿದೆ. ಇನ್ನುಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ. ಪ್ರಾಥಮಿ ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ ಟೆಸ್ಟಿಂಗ್ ನಡೆಸಲಾಗುತ್ತಿದೆ. ಕೇರಳದಲ್ಲಿ ಕೊರೋನಾ ಹರಡದಂತೆ ತಡೆಯಲು ಜನರೂ ಕೂಡ ಸಹಕರಿಸಬೇಕು ಎಂದು ಶೈಲಜಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ