
ಕೊಟ್ಟಾಯಂ(ಜೂ. 01) ಕೇರಳ ರಾಜ್ಯ ಜಲಸಾರಿಗೆ ಸಂಸ್ಥೆ ಜನಮೆಚ್ಚುವ ಕೆಲಸ ಮಾಡಿದೆ. ಕೊರೋನಾ ಸಂದರ್ಭದಲ್ಲಿ ಕೇವಲ ಒಬ್ಬ ಹುಡುಗಿ ಪರೀಕ್ಷಾ ಹಾಲ್ ಗೆ ತೆರಳಲು ಬೋಟ್ ಒಂದನ್ನು ಬಿಟ್ಟಿದೆ. ಅಲ್ಲದೇ ಆಕೆಯನ್ನು ಸುರಕ್ಷಿತವಾಗಿ ವಾಪಾಸ್ ಕರೆದುಕೊಂಡು ಹೋಗಿ ಬಿಡಲಾಗಿದೆ.
ಐದು ಜನ ಸಿಬ್ಬಂದಿ ಒಳಗೊಂಡ ವಾಟರ್ ಬೋಟ್ ಎಂ ಎನ್ ಬ್ಲಾಕ್ ನಿಂದ ಹೊರಟಿದೆ. ನಡುಗಡ್ಡೆ ಕುಟ್ಟಾನಾಡ್ ನಿಂದ ಹೊರಟ ಬೋಟು ಶಾಲೆ ಇರುವ ಕೊಟ್ಟಾಯಂ ತಲುಪಿದೆ
ಸಮುದಾಯದಲ್ಲಿ ಕೊರೋನಾ; ಕೇರಳ ಸರ್ಕಾರದ ದಿಟ್ಟ ಕ್ರಮ
ಕೊಟ್ಟಾಯಂ ನ ಕಾಂಜಿರಂ ನಲ್ಲಿರುವ ಎಸ್ ಎನ್ ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕಿ ಸಾಂದ್ರಾ ಸಾಬು ಪ್ಲಸ್ 2( ದ್ವಿತೀಯ ಪಿಯುಸಿ) ಅಧ್ಯಯನ ಮಾಡುತ್ತಿದ್ದಾಳೆ. ಎಪ್ಪತ್ತು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯುಳ್ಳ ಬೋಟ್ ಎರಡು ದಿನ ಅಂದರೆ ಮೇ 29 ಮತ್ತು 30ರಂದು ಈಕೆ ಒಬ್ಬಳಿಗಾಗಿ ಓಡಾಟ ಮಾಡಿದೆ.
ಕೊಟ್ಟಾಯಂನಿಂದ ಪ್ರಯಾಣ ಬೆಳೆಸಿದ ಬೋಟ್ ಎಂಎನ್ ಬ್ಲಾಕ್ ಮಾರ್ಗವಾಗಿ ಕಾಂಜಿರಂ ತಲುಪಿದೆ. ಬಾಲಕಿಯನ್ನು ಆಕೆಯ ಶಾಲೆಯ ಎದುರಿನಲ್ಲೇ ಡ್ರಾಪ್ ಮಾಡಲಾಗಿದೆ. ಅಲ್ಲದೇ ಆಕೆಯ ಪರೀಕ್ಷೆ ಮುಗಿಯುವವರೆಗೆ ಅಲ್ಲಿಯೇ ಕಾದು ನಂತರ ಮನೆಗೆ ಕಳುಹಿಸಿ ಬರಲಾಗಿದೆ ಎಂದು ಜಲಸಾರಿಗೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಸಾರಿಗೆಯ ಸಚಿವ ಶಾಜಿ ವಿ ನಾಯರ್ ನನ್ನ ಜೀವನದಲ್ಲಿ ಮರೆಯಲಾಗದ ಸಹಾಯ ಮಾಡಿದ್ದಾರೆ ಎಂದು ಬಾಲಕಿ ಸಾಂದ್ರಾ ತಿಳಿಸಿದ್ದಾರೆ. ನನ್ನ ಪಾಲಕರು ವಿಚಾರವನ್ನು ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ್ದಾರೆ ಎಂದು ಬಾಲಕಿ ಧನ್ಯವಾದ ಅರ್ಪಿಸಿದ್ದಾರೆ. ಇಡೀ ದಿನದ ಬೋಟ್ ಜರ್ನಿಗೆ ಬಾಲಕಿಯಿಂದ 18 ರೂ. ಶುಲ್ಕ ಪಡೆದುಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ