ಮದುವೆ ಮಂಟಪವಾಗಿ ಬದಲಾದ ಕೋವಿಡ್ ಆಸ್ಪತ್ರೆ; ಹೊಸ ಬದುಕಿಗೆ ಕಾಲಿಟ್ಟ ನವಜೋಡಿ!

Published : Apr 25, 2021, 09:43 PM ISTUpdated : Apr 25, 2021, 09:45 PM IST
ಮದುವೆ ಮಂಟಪವಾಗಿ ಬದಲಾದ ಕೋವಿಡ್ ಆಸ್ಪತ್ರೆ; ಹೊಸ ಬದುಕಿಗೆ ಕಾಲಿಟ್ಟ ನವಜೋಡಿ!

ಸಾರಾಂಶ

ಕೊರೋನಾ 2ನೇ ಅಲೆಗೆ ಆಸ್ಪತ್ರೆ ವರಾಂಡ, ಆ್ಯಂಬುಲೆನ್ಸ್, ತಾತ್ಕಾಲಿಕ ಕೊಠಡಿಗಳೇ ಆಸ್ಪತ್ರೆಗಳಾಗಿ ಪರಿವರ್ತನೆಗೊಂಡಿದೆ. ಇದೀಗ ಕೊರೋನಾ ಆಸ್ಪತ್ರೆಯೇ ಮದುವೆ ಮಂಟಪವಾಗಿ ಬದಲಾದ ಅಪರೂಪದ ಘಟನೆ ನಡೆದಿದೆ. ಈ ಮಂಟಪದಲ್ಲಿ ನವ ಜೋಡಿ ಸಪ್ತಪದಿ ತುಳಿದಿದೆ.

ಕೇರಳ(ಏ.25): ದೇಶದಲ್ಲಿ ಎದ್ದಿರುವ ಕೊರೋನಾ ವೈರಸ್ 2ನೇ ಅಲೆಗೆ ಜನ ತತ್ತರಿಸಿದ್ದಾರೆ. ಸರ್ಕಾರ ಕಲ್ಯಾಣ ಮಂಟಪಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸುವ ಕುರಿತು ಚಿಂಚನೆ ನಡೆಸುತ್ತಿದೆ. ಇದರ ನಡುವೆ ಕೇರಳದ ಆಲಪುಜ್ಜಾದ ಕೋವಿಡ್ ಕೇರ್ ಆಸ್ಪತ್ರೆ ಒಂದು ಕ್ಷಣ ಮದುವೆ ಮಂಟಪವಾಗಿ ಬದಲಾಗಿದೆ. ಸೋಂಕಿತ ಜೋಡಿ ವಿಶೇಷ ರೀತಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಹಾಸನ; ಮಾಸ್ಕ್ ಧರಿಸದ ಮದುಮಗಳಿಗೆ ಸ್ಥಳದಲ್ಲೇ ದಂಡ

ಆಲಪ್ಪುಜಾದ ಕೈನಕಾರಿ ವಲಯದ ಶರತ್ ಮೊನ್ ಹಾಗೂ ಅದೇ ಗ್ರಾಮದ ವಧುವಿನ ಮದುವೆ ನಿಶ್ಚಿಯವಾಗಿತ್ತು. ಮದುವೆ ಇನ್ನು 2 ವಾರ ಇದೆ ಅನ್ನುವಷ್ಟರಲ್ಲೇ ಶರತ್ ಹಾಗೂ ಆತನ ತಾಯಿಗೂ ಕೊರೋನಾ ತಗುಲಿದೆ. ಹೀಗಾಗಿ  ವಂದನಮ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತ ವಧು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ವಧುವಿನ ಕುಟುಂಬಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ ಶರತ್ ಕುಟುಂಬ ಮದುವೆ ಮುಂದೂಡುವ ಕುರಿತು ಚರ್ಚೆ ನಡೆಸದೆ. ಆದರೆ ನಿಗದಿತ ಮೂಹೂರ್ತದಲ್ಲೇ ಮದುವೆ ನಡೆಸಬೇಕು ಅನ್ನೋದು ವರ ಶರತ್ ಮೋನ್ ತಾಯಿಯ ಆಗ್ರಹವಾಗಿತ್ತು. ಹೀಗಾಗಿ ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. 

ಮನವಿಗೆ ಸ್ಪಂದಿಸಿದ ಕಾರಣ ವಧು ಅಭಿರಾಮಿ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಳಿಕ ಸರಳವಾಗಿ ಸೋಂಕಿತ ವರ ಶರತ್ ಮೊನ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಹೊಮಾಲೆ ಹಾಕೋ ಮೂಲಕ ಇಬ್ಬರು ಮದುವೆ ಕಾರ್ಯ ಸರಳವಾಗಿ ಮುಗಿದಿದೆ. ಮದುವೆ ಬಳಿಕ ಹನಿಮೂನ್ ಪ್ರವಾಸದ ದೂರ ಮಾತು, ಕೊನೆ ಪಕ್ಷ ಜೊತೆಯಾಗಿರಲು ಅವಕಾಶ ಇರಲಿಲ್ಲ. ಹೀಗಾಗಿ ಸೋಂಕಿತ ಶರತ್ ಮೊನ್ ಆಸ್ಪತ್ರೆಯಲ್ಲೇ ಉಳಿದುಕೊಂಡರೆ, ವಧು ಅಭಿರಾಮಿ ಮನೆಗೆ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ