ಪೊಲೀಸರ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೇನಿಂಗ್: ಕೇರಳ ಡ್ರಗ್ಸ್‌ ವ್ಯಾಪಾರಿಯ ಭಯಾನಕ ಕುತಂತ್ರ

Published : Sep 26, 2023, 07:35 AM IST
ಪೊಲೀಸರ ಕಂಡರೆ ದಾಳಿ ಮಾಡುವಂತೆ ನಾಯಿಗಳಿಗೆ ಟ್ರೇನಿಂಗ್: ಕೇರಳ ಡ್ರಗ್ಸ್‌ ವ್ಯಾಪಾರಿಯ ಭಯಾನಕ ಕುತಂತ್ರ

ಸಾರಾಂಶ

ಡ್ರಗ್ಸ್‌ (Drug) ವ್ಯಾಪಾರ ಮಾಡುತ್ತಿದ್ದ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಆರೋಪಿಯ ಕುತಂತ್ರದಿಂದ ಅಲ್ಲಿದ್ದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದಿದೆ.

ಕೊಟ್ಟಾಯಂ:  ಕೆಂಪು ಬಟ್ಟೆ ತೊಟ್ಟವರ ಮೇಲೆ ಗೂಳಿಗಳು ದಾಳಿ ಮಾಡುವುದ್ದನ್ನು ನಾವು ನೋಡಿದ್ದೇವೆ. ಆದರೆ ಕೇರಳದಲ್ಲಿ ಖಾಕಿ ತೊಟ್ಟವರ ಮೇಲೆ ದಾಳಿ ಮಾಡುವ ನಾಯಿಗಳಿವೆ..! ಹೌದು. ಡ್ರಗ್ಸ್‌ (Drug) ವ್ಯಾಪಾರ ಮಾಡುತ್ತಿದ್ದ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಆರೋಪಿಯ ಕುತಂತ್ರದಿಂದ ಅಲ್ಲಿದ್ದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ ನಡೆದಿದೆ.

ಆರೋಪಿಯು ಖಾಕಿ ಬಟ್ಟೆ (Police Uniform) ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ತರಬೇತಿ ನೀಡಿದ್ದ. ಹೀಗಾಗಿ ಖಾಕಿ ಧರಿಸಿ ಹೋಗಿದ್ದ ಎನ್‌ಸಿಬಿ (NCB) ಅಧಿಕಾರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ ಎಂಬ ಭಯಾನಕ ಅಂಶ ಹೊರಬಿದ್ದಿದೆ. ಆದಾಗ್ಯೂ ಪೊಲೀಸರು 17 ಕೇಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಆದರೆ ಪೊಲೀಸರು ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದಾಗ ಆರೋಪಿ ಪರಾರಿಯಾಗಿದ್ದಾನೆ. ಅದೃಷ್ಟವವಶಾತ್‌ ಯಾವುದೇ ಪೊಲೀಸರಿಗೆ ನಾಯಿಗಳಿಂದ ಗಾಯಗಳಾಗಿಲ್ಲ.

ಈ ಬಗ್ಗೆ ಮಾತನಾಡಿದ ಕೊಟ್ಟಾಯಂ ಎಸ್‌ಪಿ (Kottayam SP) ಕೆ ಕಾರ್ತಿಕ್‌  (K.Karthik), ‘ಇಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ಊಹಿಸಿರಲಿಲ್ಲ. ಕಾರ್ಯಾಚರಣೆಯ ಪ್ರಾರಂಭದಲ್ಲಿ ನಮಗೆ ಅವುಗಳಿಂದ ತೊಂದರೆಯಾಯಿತು. ಖಾಕಿಗಳಿಗೆ ಕಚ್ಚುವಂತೆ ಆರೋಪಿ ನಾಯಿಗಳಿಗೆ ತರಬೇತಿ ನೀಡಿದ್ದಾನೆ’ ಎಂದಿದ್ದಾರೆ.

ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ

ತರಬೇತಿಗೆ ದಿನಕ್ಕೆ 1000 ರು.!

ಈತ ತಾನು ನಾಯಿಯ ತರಬೇತುದಾರ ಎಂದು ಹೇಳಿಕೊಳ್ಳುತ್ತಿದ್ದ. ಹೀಗಾಗಿ ಕೆಲವು ಶ್ರೀಮಂತರು ದಿನಕ್ಕೆ 1000 ರು. ಕೊಟ್ಟು ಈತನ ಮನೆಗೆ ತರಬೇತಿಗೆ ಎಂದು ನಾಯಿ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಸುತ್ತಮುತ್ತಲಿನ ಮನೆಯ ನಾಯಿಗಳಿಗೆ ಖಾಕಿ ಕಂಡರೆ ದಾಳಿ ಮಾಡುವ ತರಬೇತಿ ನೀಡಿದ್ದಾನೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ

ಈಗ ಇಲ್ಲಿ 13 ನಾಯಿಗಳು ಇದ್ದು ಮಾಲೀಕರನ್ನು ಗುರುತಿಸಿ ವಾಪಸು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!