
ಭಾರತವು ಮುಂದಿನ 24 ರಿಂದ 36 ಗಂಟೆಗಳೊಳಗೆ ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳಬಹುದು ಎಂಬ ಖಾಸಗಿ ಗುಪ್ತಚರ ಮಾಹಿತಿ ನಮಗೆ ಬಂದಿದೆ ಎಂದು ಪಾಕಿಸ್ತಾನ ಬುಧವಾರ ಹೇಳಿಕೆ ನೀಡಿದೆ. ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಎಂಬ ಸ್ಥಳದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯಾನಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತದಲ್ಲೂ ಭದ್ರತಾ ಚಟುವಟಿಕೆಗಳು ಹೆಚ್ಚಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಅಧಿಕಾರಿಗಳ ಜೊತೆ ಮಹತ್ವದ ಸಭೆಗಳನ್ನು ನಡೆಸಿದರು. ಇದರಿಂದ, ಭಾರತ ಪಾಕಿಸ್ತಾನ ವಿರುದ್ಧ ಸೇನೆಯ ಮೂಲಕ ಉತ್ತರ ಕೊಡಬಹುದೆಂದು ಊಹಾಪೋಹ ಎದ್ದಿದೆ.
ಈ ದುರ್ಘಟನೆಯ ಬಳಿಕ ಭಾರತ–ಪಾಕಿಸ್ತಾನ ನಡುವಿನ ಸಂಬಂಧಗಳು ಮತ್ತಷ್ಟು ಹಾಳಾಗಿದೆ. ಎರಡು ದೇಶಗಳು ತಮ್ಮ ದೇಶದಲ್ಲಿರುವ ಭಾರತ-ಪಾಕ್ ಪ್ರಜೆಗಳನ್ನು ಮರಳಿ ನಿಮ್ಮ ದೇಶಕ್ಕೆ ಹೋಗಿ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜೊತೆಗೆ ರಾಜತಾಂತ್ರಿಕ ಸಭೆಗಳನ್ನು ಕೈಬಿಟ್ಟಿವೆ.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು, “ಭಾರತವು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನವನ್ನೇ ಆರೋಪಿಸಿ, ಯುದ್ಧದಂತೆ ಕ್ರಮ ತೆಗೆದುಕೊಳ್ಳಬಹುದು” ಎಂದು ದೂರದರ್ಶನದಲ್ಲಿ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಕಾಶ್ಮೀರದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳುವ ಕುರಿತಾಗಿ ಹಲವು ಯುದ್ಧಗಳೂ ಆಗಿವೆ. ಪ್ರಧಾನಿ ಮೋದಿ ಅವರು ಸೇನೆಗೆ "ಪೂರ್ಣ ಸ್ವಾತಂತ್ರ್ಯ" ನೀಡಿದ್ದಾರೆ ಎಂದು ವರದಿಯಾಗಿದೆ. ಅದರೊಂದಿಗೆ ವಿಶ್ವದ ಪ್ರಮುಖ ನಾಯಕರು ಈ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಹೆಜ್ಜೆ ಇಡುತ್ತಿದ್ದಾರೆ. ಅಮೆರಿಕ ಹಾಗೂ ವಿಶ್ವಸಂಸ್ಥೆ ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಿವೆ. ಯುದ್ಧ ಮಾಡದೆ ಶಾಂತಿ ಸ್ಥಾಪನೆ ಮಾಡುವುದು ಮುಖ್ಯ ಆಶಯವಾಗಿದೆ.
ಈ ಬಾರಿ ಭಾರತ ಏನು ಕ್ರಮ ಕೈಗೊಳ್ಳಬಹುದು ಎಂಬುದು ಸ್ಪಷ್ಟವಿಲ್ಲ. ಆದರೆ ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ. ಈ ಕೆಳಗಿನ ಅಂಶಗಳು ಎದ್ದು ಕಾಣುತ್ತವೆ.
1. ರಹಸ್ಯ ಸೇನಾ ದಾಳಿ (ಗೌಪ್ಯ ಆಪರೇಷನ್)
2. ಸರ್ಜಿಕಲ್ ಸ್ಟ್ರೈಕ್
3. ವೈಮಾನಿಕ ದಾಳಿ (ಏರ್ ಸ್ಟ್ರೈಕ್)
ಪೂರ್ಣ ಪ್ರಮಾಣದ ಯುದ್ಧಗಳ ಇತಿಹಾಸ: ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ಬಾರಿ ಯುದ್ಧವಾಗಿದೆ. ಈ ಯುದ್ಧಗಳಲ್ಲಿ ಮೂರು ಕಾಶ್ಮೀರಕ್ಕೆ ಸಂಬಂಧಿಸಿದ್ದವು.
1947-48: ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಭಾರತ ಸೇನೆ ಹಸ್ತಕ್ಷೇಪ ಮಾಡಿತು. ರಾಜ ಹರಿ ಸಿಂಗ್ ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸಿದರು. ಯುದ್ಧ ಕದನ ವಿರಾಮದಿಂದ ಕೊನೆಗೊಂಡಿತು.
1965: ಪಾಕಿಸ್ತಾನಿ ಸೇನೆ ಕಾಶ್ಮೀರಕ್ಕೆ ನುಸುಳಿದಾಗ ಭಾರತ ಲಾಹೋರ್ ತನಕ ದಾಳಿ ನಡೆಸಿತು. ಸಾವಿರಾರು ಮಂದಿ ಸತ್ತರು. ಬಳಿಕ ಯುಎನ್ನ ಮಧ್ಯಸ್ಥಿಕೆಯಿಂದ ಯುದ್ಧ ನಿಲ್ಲಿಸಲಾಯಿತು.
1971: ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೇನೆ ಕಳಸಿ ಜಯಗಳಿಸಿತು. ಬಳಿಕ ಸಿಮ್ಲಾ ಒಪ್ಪಂದದ ಮೂಲಕ ಎಲ್ಒಸಿ ಸ್ಥಾಪನೆಯಾಯಿತು.
1999: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆ ಎಲ್ಒಸಿಯನ್ನು ದಾಟಿ ಹಿಮಮಲೆಯ ಮೇಲ್ಭಾಗಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿತು. ಭಾರತ ಅವರಿಗೆ ತೀವ್ರ ಪ್ರತಿರೋಧ ನೀಡಿ ಗೆಲುವು ಸಾಧಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ