ಕಾವೇರಿಗಾಗಿ ಕರ್ನಾಟಕದಿಂದ ಮತ್ತೆ ಕಾನೂನು ಸಮರ.. ನೀರು ಕೊಡಲ್ಲ!

Published : Jul 19, 2021, 07:29 PM IST
ಕಾವೇರಿಗಾಗಿ ಕರ್ನಾಟಕದಿಂದ ಮತ್ತೆ ಕಾನೂನು ಸಮರ.. ನೀರು ಕೊಡಲ್ಲ!

ಸಾರಾಂಶ

* ತಮಿಳುನಾಡಿನಿಂದ ಕಾವೇರಿ ಹೆಚ್ಚುವರಿ ನೀರು ಬಳಕೆ * ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ * ಅನುಮತಿ ನೀಡದಂತೆ ತಡೆ ಕೋರಿ ಮನವಿ * ಕಾವೇರಿ-ಗುಂಡಾರ್ ಸಂಪರ್ಕ ಯೋಜನೆಗೆ ಮುಂದಾಗಿರುವ ತಮಿಳುನಾಡು

ಬೆಂಗಳೂರು(ಜು. 19)  ತಮಿಳುನಾಡು ವಿರುದ್ದ ಕರ್ನಾಟಕ ಕಾನೂನು ಸಮರಕ್ಕೆ ಇಳಿದಿದೆ. ಸುಪ್ರೀಂ ಕೋರ್ಟ್ ನಲ್ಲಿ  ಕರ್ನಾಟಕ ವಿಶೇಷ ಅರ್ಜಿ ದಾಖಲಿಸಿದೆ. 91 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ತಮಿಳುನಾಡು ಬಳಕೆ ಮಾಡುತ್ತಿದೆ ಎಂದು ಹೇಳಿದೆ.

ಕಾವೇರಿ-ಗುಂಡಾರ್ ಸಂಪರ್ಕ ಯೋಜನೆ ಅಡಿ ತಮಿಳುನಾಡು ನೀರು ಬಳಕೆ ಮಾಡಲು ಹೊರಟಿದೆ. ಈ ಯೋಜನೆಗೆ ಹೆಚ್ಚುವರಿ 45 ಟಿಎಂಸಿ ಪೂರೈಕೆ ಮಾಡಲು ತಮಿಳುನಾಡು ಮುಂದಾಗಿದೆ. ಈ ಯೋಜನೆ ಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು  ಎಂದು ಕೇಳಿಕೊಳ್ಳಲಾಗಿದೆ.

ಮೇಕೆದಾಟು ಯೋಜನೆಗೆ ಮತ್ತೊಂದು ರಾಜ್ಯದಿಂದಲೂ ವಿರೋಧ

ಕಾವೇರಿ-ವೈಗೈ-ಗುಂಡಾರ್ ನದಿ ಕಾಲುವೆ ಸಂಪರ್ಕ ಯೋಜನೆ  ವಿರುದ್ಧ ಸುಪ್ರೀಂಕೋರ್ಟ್ ಗೆ ಕರ್ನಾಟಕ ಅರ್ಜಿ ಹಾಕಿದೆ.  ಕರ್ನಾಟಕ ಮೇಲ್ಭಾಗದ ರಾಜ್ಯವಾಗಿದ್ದು, ಹೆಚ್ಚುವರಿ ನೀರು ಬಳಸಿಕೊಳ್ಳುವ ಹಕ್ಕು ಹೊಂದಿದೆ. ತಮಿಳುನಾಡಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ ನೀರನ್ನು ಹರಿಸಿದ ಬಳಿಕ ಉಳಿದ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬೇಕೆಂಬುದು ರಾಜ್ಯದ ಚಿಂತನೆಯಾಗಿದೆ.

ಆದರೆ ತಮಿಳುನಾಡಿನ ಹೊಸ ಯೋಜನೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತ.ನಾಡು ಹೊಸ ಯೋಜನೆಗೆ ಅನುಮತಿ ನೀಡಬಾರದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು