
ಮುಂಬೈ[ಜ.24]: ‘ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳನ್ನು, ಸಂತ್ರಸ್ತೆಯ ತಂದೆ-ತಾಯಿ ಕ್ಷಮಿಸಬೇಕು’ ಎಂದು ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಅವರನ್ನು ನಟಿ ಕಂಗನಾ ರಾಣಾವತ್ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!
‘ಇಂದಿರಾ ಜೈಸಿಂಗ್ರಂಥವರು ಅತ್ಯಾಚಾರಿಗಳಿಗೆ ಜನ್ಮ ನೀಡುತ್ತಾರೆ. ನಿರ್ಭಯಾ ಅತ್ಯಾಚಾರಿಗಳ ಜತೆಗೇ 4 ದಿನದ ಮಟ್ಟಿಗೆ ಇಂದಿರಾರನ್ನೂ ಜೈಲಿನಲ್ಲಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮಾತನಾಡಿದ ಕಂಗನಾ, ‘ಇಂದಿರಾ ಜೈಸಿಂಗ್ರನ್ನು ನಿರ್ಭಯಾ ಅತ್ಯಾಚಾರಿಗಳ ಜತೆ 4 ದಿನ ಜೈಲಿನಲ್ಲಿಡಬೇಕು. ಅತ್ಯಾಚಾರಿಗಳ ಮೇಲೆ ಕರುಣೆ ತೋರುತ್ತಾರೆ ಎಂದರೆ ಎಂಥ ಜನ ಇವರು? ಇಂತಹ ಅತ್ಯಾಚಾರಿಗಳಿಗೆ ಇಂದಿರಾರಂಥವರೇ ಜನ್ಮ ನೀಡುತ್ತಾರೆ’ ಎಂದು ಹಿಡಿಶಾಪ ಹಾಕಿದರು.
‘ಇಂತಹ ರೇಪಿಸ್ಟ್ಗಳನ್ನು ಗುಟ್ಟಾಗಿ ನೇಣಿಗೇರಿಸಬಾರದು. ಇವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು’ ಎಂದು ನಟಿ ಆಗ್ರಹಿಸಿದರು. ಕಂಗನಾ ಹೇಳಿಕೆಯನ್ನು ನಿರ್ಭಯಾ ತಾಯಿ ಆಶಾದೇವಿ ಸ್ವಾಗತಿಸಿದ್ದಾರೆ. ‘ಕೊನೆಗೂ ಒಬ್ಬರು ನನ್ನ ಜತೆ ನಿಂತರಲ್ಲ’ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ