
ನವದೆಹಲಿ(ಮಾ.18): ಉತ್ತರಾಖಂಡ್ನ ಟಕನ್ಪುರ್ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಟನಕ್ಪುರ್ಗೆ ತೆರಳುತ್ತಿದ್ದ ಪೂರ್ಣಾಗಿರಿ ಜನ್ ಶತಾಬ್ಧಿ ಎಕ್ಸ್ಪ್ರೆಸ್ ಬುಧವಾರ ಸುಮಾರು 35 ಕಿ. ಮೀಟರ್ನಷ್ಟು ದೂರ ಹಿಂದಕ್ಕೋಡಿದೆ. ಈ ರೈಲನ್ನು ಬಾಮುಷ್ಕಿಲ್ ಖಟೀಮಾದಲ್ಲಿ ತಡೆಯಲಾಗಿದೆ. ಇನ್ನು ಈ ರೈಲು ಟನಕ್ಪುರ ರೈಲು ನಿಲ್ದಾಣ ತಲುಪುವುದಕ್ಕೂ ಮುನ್ನ ದನವೊಂದು ರೈಲಿನೆದುರು ಬಂದಿದೆ. ಚಾಲಕ ರೈಲು ನಿಲ್ಲಿಸಿ ವ್ಯಾಕ್ಯುಮ್ ಹಾಕುತ್ತಿದ್ದಂತೆಯೇ ರೈಲು ವಿರುದ್ಧ ದಿಕ್ಕಿನಲ್ಲಿ ಓಡಲಾರಂಭಿಸಿದೆ.
ರೈಲು ಹಿಂದಕ್ಕೋಡುತ್ತಿದ್ದಂತೆಯೇ ರೈಲಿನಲ್ಲಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಆದರೆ ಖಟೀಮಾ ನಿಲ್ದಾಣದಲ್ಲಿ ಬಹಳ ಪ್ರಯಾಸಪಟ್ಟು ರೈಲನ್ನು ತಡೆಯಲಾಗಿದೆ. ಬಳಿಕ ಪ್ರಯಾಣಿಕರನ್ನು ಇಳಿಸಿ ಬಸ್ನಲ್ಲಿ ಕಳುಹಿಸಲಾಗಿದೆ.
ಚಂಪಾವತ್ನ ಪೊಲೀಸ್ ಇನ್ಸ್ಪೆಕ್ಟರ್ ಲಂಕೇಶ್ವರ್ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಪ್ರಾಣಿಯನ್ನು ಉಳಿಸಲು ಚಾಲಕ ಬ್ರೇಕ್ ಹಾಕಿರಬೇಕು. ಇದರಿಂದ ರೈಲು ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ