ಆ. 16ರಿಂದ ವೈಷ್ಣೋ ದೇವಿ ಯಾತ್ರೆ ಆರಂಭ: ಮಾರ್ಗಸೂಚಿಗಳು ಹೀಗಿವೆ

Suvarna News   | Asianet News
Published : Aug 14, 2020, 01:13 PM ISTUpdated : Aug 14, 2020, 01:42 PM IST
ಆ. 16ರಿಂದ ವೈಷ್ಣೋ ದೇವಿ ಯಾತ್ರೆ ಆರಂಭ: ಮಾರ್ಗಸೂಚಿಗಳು ಹೀಗಿವೆ

ಸಾರಾಂಶ

ಆಗಸ್ಟ್ 16ರಿಂದ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಯಾತ್ರೆ ಆರಂಭವಾಗಲಿದೆ. ಕೊರೋನಾ ವೈರಸ್‌ನಂತರ ಲಾಕ್‌ಡೌನ್‌ನಿಂದಾಗಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಇದೀಗ 6 ತಿಂಗಳ ಬಳಿಕ ದೇವಾಲಯ ಭಕ್ತರಿಗೆ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರ ತಿಳಿಸಿದೆ.

ಜಮ್ಮುಕಾಶ್ಮೀರ(ಆ.14): ಆಗಸ್ಟ್ 16ರಿಂದ ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ಯಾತ್ರೆ ಆರಂಭವಾಗಲಿದೆ. ಕೊರೋನಾ ವೈರಸ್‌ನಂತರ ಲಾಕ್‌ಡೌನ್‌ನಿಂದಾಗಿ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಇದೀಗ 6 ತಿಂಗಳ ಬಳಿಕ ದೇವಾಲಯ ಭಕ್ತರಿಗೆ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರ ತಿಳಿಸಿದೆ.

ಯಾತ್ರೆಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಮಂಡಳಿ ತಿಳಿಸಿದೆ. ದೇವಾಲಯದ ಸುತ್ತ ಮುತ್ತ ಸ್ಯಾನಿಸೈಟೇಷನ್ ಕೂಡಾ ಮಾಡಲಾಗುತ್ತಿದೆ. ಕೊರೊನಾ ಮಧ್ಯೆಯೇ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಯಾತ್ರಿಗಳನ್ನು ಸ್ವಾಗತಿಸಲು ದೇವಾಲಯ ಸಜ್ಜಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಪುಡಿ ಮಾರುಕಟ್ಟೆಗೆ

ಸ್ವಾತಂತ್ರ್ಯೋತ್ಸವದ ದಿನ ಕಳೆದು ಆಗಸ್ಟ್ 16ರಂದು ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಜಮ್ಮುಕಾಶ್ಮೀರ ಸರ್ಕಾರ ನಿರ್ಧರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳು ಆಗಸ್ಟ್‌ 16ರಿಂದ ತೆರೆಯಲ್ಪಡುತ್ತದೆ ಎಂದು ಆಗಸ್ಟ್ 4ರಂದು ಜಮ್ಮು ಕಾಶ್ಮೀರದ ಅಧಿಕೃತ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದರು.

ಶಬ್ಬಾಶ್..! ಹುಕ್ಕಾ ಸೇದುತ್ತ ಕೋರ್ಟ್‌ ವಿಚಾರಣೆಗೆ ವಕೀಲ ಹಾಜರ್‌!

ಧಾರ್ಮಿಕ ಮೆರವಣಿಗೆ, ಜಾತ್ರೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ವೈಷ್ಣೋ ದೇವಿ ದೇವಾಲಯವು ಮೇ 18ರಂದು ಮುಚ್ಚಲ್ಪಟ್ಟಿತ್ತು.

ಯಾತ್ರೆಯ ಮಾರ್ಗಸೂಚಿಗಳು:

  • ಯಾತ್ರಾ ಸ್ಥಳಗಳನ್ನು ಮತ್ತೆ ತೆರೆದಿರುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
  • ಸೆಪ್ಟೆಂಬರ್  30ರ ತನಕಒಂದು  ದಿನದಲ್ಲಿ 5000 ಯಾತ್ರಿಗಳಿಗೆ ಮಾತ್ರ ಅವಕಾಶವಿರುತ್ತದೆ.
  • ಆನ್‌ಲೈನ್‌ ಮೂಲಕ ಮಾತ್ರ ಮುಂಗಡವಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾಗುತ್ತದೆ. ಕೌಂಟರ್‌ಗಳಲ್ಲಿ ಜನಸಂದಣಿ ತಪ್ಪಿಸಲು ಈ ರೀತಿ ಮಾಡಲಾಗಿದೆ.
  • ಎಲ್ಲ ಭಕ್ತಾದಿಗಳೂ ಆರೋಗ್ಯ ಸೇತು ಎಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ.
  • ಭಕ್ತಾದಿಗಳು ಮೂರ್ತಿಗಳು, ಪ್ರತಿಮೆ, ಧಾರ್ಮಿಕ ಗ್ರಂಥಗಳನ್ನು ಮುಟ್ಟಲು ಅವಕಾಶವಿಲ್ಲ.

ಕಣಿವೆ ರಾಜ್ಯದಲ್ಲಿ 27 ಸಾವಿರ ಕೊರೋನಾ ಸೋಂಕಿತರು: 536 ಹೊಸ ಕೊರೋನಾ ಪ್ರಕರಣಗಳು ಸೇರಿ ಜಮ್ಮು ಕಾಶ್ಮೀರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,949 ತಲುಪಿದೆ. 509 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ