ವೈಷ್ಣೋವಿ ದೇವಾಲಯ ಸಂಕೀರ್ಣದಲ್ಲಿ ಆಗ್ನಿ ದುರಂತ; ನಗದು ಕೌಂಟರ್ ಸಂಪೂರ್ಣ ಭಸ್ಮ!

Published : Jun 08, 2021, 09:04 PM ISTUpdated : Jun 08, 2021, 09:30 PM IST
ವೈಷ್ಣೋವಿ ದೇವಾಲಯ ಸಂಕೀರ್ಣದಲ್ಲಿ ಆಗ್ನಿ ದುರಂತ; ನಗದು ಕೌಂಟರ್ ಸಂಪೂರ್ಣ ಭಸ್ಮ!

ಸಾರಾಂಶ

ವೈಷ್ಣೋವಿ ದೇವಾಲಾಯದ ಸಂಕೀರ್ಣದಲ್ಲಿರುವ ಕಟ್ಟಡ ಭಸ್ಮ ಸಂಪೂರ್ಣ ಹೊತ್ತಿ ಉರಿದ ದೇವಾಲಯದ ನಗದು ಕೌಂಟರ್ ಪುಣೆ ಫ್ಯಾಕ್ಟರ ಅಗ್ನಿ ದುರಂತದ ಬೆನ್ನಲ್ಲೇ ಮತ್ತೊಂದು ಅವಘಡ

ಜಮ್ಮು ಮತ್ತು ಕಾಶ್ಮೀರ(ಜೂ.08): ಕಣಿವೆ ರಾಜ್ಯದ  ರಿಯಾಲಿ ಜಿಲ್ಲೆಯ ವೈಷ್ಣೋವಿ ದೇವಾಲಯದ ಸಂಕೀರ್ಣದಲ್ಲಿರುವ ಕಟ್ಟದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಟ್ಟದ ಧಗ ಧಗ ಹೊತ್ತಿ ಉರಿದಿದೆ. ಪರಿಣಾಮ ದೇವಾಲಯದ ನಗದು ಕೌಂಟರ್ ಸಂಪೂರ್ಣ ಭಸ್ಮವಾಗಿದೆ.

ವೈಷ್ಣೋ ದೇವಿ ಪೂಜೆಯ ಪ್ರಸಾದ ನಿಮ್ಮ ಮನೆ ಬಾಗಿಲಿಗೆ..!..

ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಪವಿತ್ರ ಕ್ಷೇತ್ರ ವೈಷ್ಣೋವಿ ದೇವಾಲಯದ ಗರ್ಭ ಗುಡಿ ಸನಿಹದಲ್ಲಿರುವ ಕಾಳಿಕಾ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 4.15ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ದಿಢೀರ್ ದೇಗುಲದ ನಗದು ಕೌಂಟರ್‌‌ಗೆ ಆವರಿಸಿಕೊಂಡಿದೆ. ಇದರಿಂದ ಕೌಂಟರ್ ಸಂಪೂರ್ಣ ಭಸ್ಮವಾಗಿದೆ. ಇಷ್ಟೇ ಅಲ್ಲ ದೇಗಲುದ ನಗದು ಹಣ ಸುಟ್ಟುಹೋಗಿದೆ. ಇದರೊಂದಿಗೆ ದಾಖಲೆ ಪತ್ರಗಳು ಕೂಡ ನಾಶವಾಗಿದೆ.

"

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ರಿಯಾಸಿ ಜಿಲ್ಲಾ ಆಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ದೇಗುಲದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಬೆಂಕಿ ನಂದಿಸಲು ನೆರವಾಗಿದ್ದಾರೆ. ಅಷ್ಟರವೇಳೆಗೆ ಕಾಳಿಗಾ ಭವನ ಸಂಪೂರ್ಣ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪುಣೆಯ ಸ್ಯಾನಿಟೈಸರ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಸಾಂತ್ವನ ಜೊತೆಗೆ ಪರಿಹಾರ ಘೋಷಿಸಿದ ಮೋದಿ

ನಿನ್ನೆ(ಜೂ.07) ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ 18 ಜೀವಗಳು ಸುಟ್ಟುಕರಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದ ವೈಷ್ಣೋವಿ ದೇವಾಲಯದಲ್ಲಿ ಆಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ  ಬೆಂಕಿ ಕಾಣಿಸಿಕೊಂಡಿದೆ ಅಧಿಕಾರಿಗಳು ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..