Operation Ganga ಯಶಸ್ವಿ ಮುಕ್ತಾಯ, ಕೊನೆಯ ದಿನ 674 ಮಂದಿ ಆಗಮನ

Kannadaprabha News   | Asianet News
Published : Mar 12, 2022, 04:15 AM IST
Operation Ganga ಯಶಸ್ವಿ ಮುಕ್ತಾಯ, ಕೊನೆಯ ದಿನ 674 ಮಂದಿ ಆಗಮನ

ಸಾರಾಂಶ

- ಕೊನೆಯ 674 ಭಾರತೀಯರು ನಿನ್ನೆ ಆಗಮನ - 14 ದಿನ, 90 ವಿಮಾನ, 18000 ಜನರ ರಕ್ಷಣೆ - ಉಕ್ರೇನ್‌ ಯುದ್ಧದಿಂದ ಭಾರತೀಯರು ಪಾರು

ನವದೆಹಲಿ ( ಮಾ. 11): ಭಾರತವು ಯುದ್ಧಪೀಡಿತ ಉಕ್ರೇನ್‌ನಲ್ಲಿ (War torn Ukraine) ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಆರಂಭಿಸಿದ್ದ ‘ಆಪರೇಶನ್‌ ಗಂಗಾ’ ( Operation Ganga ) ತೆರವು ಕಾರ್ಯಾಚರಣೆಗೆ 14ನೇ ದಿನವಾದ ಶುಕ್ರವಾರ ತೆರೆ ಬಿದ್ದಿದೆ. 674 ಭಾರತೀಯರನ್ನು ಹೊತ್ತ 3 ವಿಮಾನಗಳು ಪೋಲೆಂಡ್‌ನಿಂದ (Poland) ಶುಕ್ರವಾರ ದಿಲ್ಲಿಗೆ ಆಗಮಿಸಿದ್ದು, ಇದರೊಂದಿಗೆ ಕಾರ್ಯಾಚರಣೆಗೆ ಮಂಗಳ ಹಾಡಿದಂತಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರವು (Indian Governament) ತೆರವು ಕಾರ್ಯಾಚರಣೆಗೆ ಸಹಕರಿಸಿದ ರಷ್ಯಾ, ಉಕ್ರೇನ್‌, ಸ್ಲೊವಾಕಿಯಾ, ಹಂಗೇರಿ, ರೊಮೇನಿಯಾ, ಪೋಲೆಂಡ್‌ ದೇಶಗಳಿಗೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದೆ.

‘ಏರ್‌ ಇಂಡಿಯಾ’ದ ಮೊದಲ ವಿಮಾನ ಶುಕ್ರವಾರ ನಸುಕಿನ ಜಾವ 5.45ಕ್ಕೆ ಪೋಲೆಂಡ್‌ನಿಂದ ದಿಲ್ಲಿಗೆ ಆಗಮಿಸಿತು. ಬಳಿಕ ಮಧ್ಯಾಹ್ನ 12.15ಕ್ಕೆ ಭಾರತೀಯ ವಾಯುಪಡೆಯ ವಿಮಾನ ಹಿಂಡನ್‌ ವಾಯುನೆಲೆಗೆ ಬಂದಿಳಿಯಿತು. ಇದಾದ ಐದೇ ನಿಮಿಷದಲ್ಲಿ 12.20ಕ್ಕೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನ ಭಾರತೀಯರನ್ನು ಹೊತ್ತು ತಂದಿತು.

ಕೊನೆಯ ತಂಡದಲ್ಲಿದ್ದ 674 ಜನರು ಉಕ್ರೇನ್‌ನ ಯುದ್ಧಪೀಡಿತ ಸುಮಿ ( Sumy )ನಗರದಲ್ಲಿ ಸಿಲುಕಿದ್ದರು. ಬಳಿಕ ರಷ್ಯಾ-ಉಕ್ರೇನ್‌ ತಾತ್ಕಾಲಿಕ ಕದನವಿರಾಮ ಸಾರಿದ್ದ ಕಾರಣ ಇವರನ್ನು ಪೋಲೆಂಡ್‌ಗೆ ರಸ್ತೆ ಮಾರ್ಗದಲ್ಲಿ ಕರೆತರಲಾಗಿತ್ತು ಹಾಗೂ ಪೋಲೆಂಡ್‌ನಿಂದ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ವಿಮಾನ ವ್ಯವಸ್ಥೆ ಮಾಡಿತ್ತು.

ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ನಂತರ ಸೆ.26ರಿಂದ ಸುತ್ತಮುತ್ತಲಿನ ರೊಮೇನಿಯಾ, ಪೋಲೆಂಡ್‌, ಹಂಗೇರಿ ಹಾಗೂ ಸ್ಲೊವಾಕಿಯಾದಿಂದ ಭಾರತೀಯರ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಭಾರತೀಯರನ್ನು ರಸ್ತೆ ಮಾರ್ಗದ ಮೂಲಕ ಈ ದೇಶಗಳಿಗೆ ಬರಲು ಸೂಚಿಸಿ, ಅಲ್ಲಿಂದ ಉಚಿತ ವಿಮಾನ ವ್ಯವಸ್ಥೆ ಮಾಡಿತ್ತು. ಅಲ್ಲದೆ, ಈ ನಾಲ್ಕೂ ದೇಶಗಳಲ್ಲಿ ಭಾರತೀಯರು ಸುರಕ್ಷಿತವಾಗಿ ವಿಮಾನ ಏರುವಂತೆ ಮಾಡಲು ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ,  ವಿ.ಕೆ. ಸಿಂಗ್‌, ಹರ್ದೀಪ್‌ ಪುರಿ ಹಾಗೂ ಕಿರಣ್‌ ರಿಜಿಜು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಳಿಸಿಕೊಟ್ಟಿದ್ದರು. ಒಟ್ಟು 14 ದಿನಗಳ ತೆರವು ಕಾರ್ಯಾಚರಣೆಯಲ್ಲಿ 90 ವಿಮಾನಗಳ ಮೂಲಕ ಸುಮಾರು 18 ಸಾವಿರ ಭಾರತೀಯರನ್ನು ಉಕ್ರೇನ್‌ನಿಂದ ಕರೆತರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

Russia Ukraine War ಉಕ್ರೇನ್‌ಗೆ ಸೇನಾ ನೆರವು ಹೆಚ್ಚಿಸಿದ ಐರೋಪ್ಯ ಒಕ್ಕೂಟ
ಜೈಶಂಕರ್‌ ಧನ್ಯವಾದ: ಭಾರತೀಯರ ಸುರಕ್ಷಿತ ವಾಪಸಾತಿಗೆ ಸಹಕರಿಸಿ ರಷ್ಯಾ, ಉಕ್ರೇನ್‌, ರೆಡ್‌ಕ್ರಾಸ್‌ ಸಂಸ್ಥೆ, ಸ್ಲೊವಾಕಿಯಾ, ಹಂಗೇರಿ, ರೊಮೇನಿಯಾ, ಪೋಲೆಂಡ್‌ ದೇಶಗಳಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಧನ್ಯವಾದ ಸಲ್ಲಿಸಿದ್ದಾರೆ. "ಉಕ್ರೇನ್‌ನಿಂದ, ಅದರಲ್ಲೂ ಸುಮಿ ನಗರದಿಂದ ನಾಗರಿಕರ ರಕ್ಷಣೆ ಸವಾಲಿನದಾಗಿತ್ತು. ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ಬದ್ಧತೆಯ ಕಾರಣ ಆಪರೇಷನ್‌ ಗಂಗಾ ಯಶಸ್ವಿಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ" ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

Ukraine Crisis ಹೆರಿಗೆ ಆಸ್ಪತ್ರೆ ಸೇರಿ ಕಂಡ ಕಂಡಲ್ಲಿ ದಾಳಿ ನಡೆಸುತ್ತಿದೆ ರಷ್ಯಾ!
ಯುರೋಪ್‌ ಒಕ್ಕೂಟದ ನೆಚ್ಚಿನ ದೇಶದ ಪಟ್ಟಿಯಿಂದ ರಷ್ಯಾಕ್ಕೆ ಕೊಕ್‌ಗೆ ನಿರ್ಧಾರ
ವಾಷಿಂಗ್ಟನ್‌ :
ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಯೂರೋಪಿಯನ್‌ ಒಕ್ಕೂಟದ ದೇಶಗಳು ವ್ಯಾಪಾರದ ಉದ್ದೇಶದಲ್ಲಿ ರಷ್ಯಾಕ್ಕೆ ನೀಡಿದ್ದ ಅತ್ಯಾಪ್ತ ದೇಶದ ಸ್ಥಾನಮಾನ ಹಿಂತೆಗೆದಕೊಳ್ಳಲು ನಿರ್ಧರಿಸಿದೆ ಎಂದು ಅಮೆರಿಕ ತಿಳಿಸಿದೆ. ರಷ್ಯಾವನ್ನು ನೆಚ್ಚಿನ ರಾಷ್ಟ್ರಗಳ ಪಟ್ಟಿಯಿಂದ ತೆಗೆಯುವುದರಿಂದ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಅಮದು ಸುಂಕ ಹೇರಿಕೆಗೆ ಸಹಾಯವಾಗುತ್ತದೆ, ಇದರಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬೀಳುತ್ತದೆ, ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಮಿತ್ರ ರಾಷ್ಟ್ರಗಳಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಬಿಡೆನ್‌ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್‌ ಅಧ್ಯಕ್ಷ ರಷ್ಯಾದ ಮೇಲಿನ ವ್ಯಾಪರ ಸಂಬಂಧಗಳನ್ನು ಕಡಿತುಕೊಳ್ಳುವಂತೆ ಅಮೆರಿಕ ಮತ್ತು ಇತರೆ ಮಿತ್ರ ರಾಷ್ಟ್ರಗಳಿಗೆ ಒತ್ತಡ ಹೇರಿದ್ದರು ಈ ಹಿನ್ನೆಲೆಯಲ್ಲಿ ಹಲು ದೇಶಗಳು ರಷ್ಯಾದ ತೈಲೋತ್ಪನ್ನಗಳನ್ನು ನಿಷೇಧಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌