ಕೋವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆ ಬೆರೆಸಿದರೆ ಸಮಸ್ಯೆಯಿಲ್ಲ

Kannadaprabha News   | Asianet News
Published : Jul 31, 2021, 08:56 AM ISTUpdated : Jul 31, 2021, 09:05 AM IST
ಕೋವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆ ಬೆರೆಸಿದರೆ ಸಮಸ್ಯೆಯಿಲ್ಲ

ಸಾರಾಂಶ

ಭಾರತದ ಕೋವಿಶೀಲ್ಡ್‌ ಹಾಗೂ ರಷ್ಯಾದ ಸ್ಪುಟ್ನಿಕ್‌ ಲಸಿಕೆಯನ್ನು ಬೆರೆಸಬಹುದು ಲಸಿಕೆಯನ್ನು ಬೆರೆಸಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಈ ವಿಚಾರ ಭಾರತದಲ್ಲಿ ಲಸಿಕೆ ವಿತರಣೆಗೆ ಹೊಸ ಆಶಾಕಿರಣ ಮೂಡಿಸಿದೆ

ನವದೆಹಲಿ (ಜು.31):  ಬ್ರಿಟನ್‌ನ ಆಸ್ಟ್ರಾಜೆನೆಕಾ (ಭಾರತದಲ್ಲಿ ಕೋವಿಶೀಲ್ಡ್‌) ಹಾಗೂ ರಷ್ಯಾದ ಸ್ಪುಟ್ನಿಕ್‌ ಲಸಿಕೆಯನ್ನು ಬೆರೆಸಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಇದು ಭಾರತದಲ್ಲಿ ಲಸಿಕೆ ವಿತರಣೆಗೆ ಹೊಸ ಆಶಾಕಿರಣ ಮೂಡಿಸಿದೆ.

ಮೊದಲಿಗೆ ಸ್ಪುಟ್ನಿಕ್‌ ಲಸಿಕೆಯ 1 ಡೋಸ್‌ ಪಡೆದವರಿಗೆ 2ನೇ ಡೋಸ್‌ ಆಸ್ಟ್ರಾಜೆನೆಕಾ ಲಸಿಕೆ ನೀಡುವ ಜಗತ್ತಿನ ಮೊದಲ ಅಧ್ಯಯನ ಫೆಬ್ರವರಿಯಲ್ಲಿ ಅಜರ್‌ಬೈಜನ್‌ ದೇಶದಲ್ಲಿ 50 ಜನರ ಮೇಲೆ ನಡೆದಿದೆ. ಈ ಪ್ರಯೋಗದಲ್ಲಿ ಯಾರೊಬ್ಬರಿಗೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪುಟ್ನಿಕ್‌ ಲಸಿಕೆಯನ್ನು ಮಾರಾಟ ಮಾಡುತ್ತಿರುವ ಆರ್‌ಡಿಐಎಫ್‌ ಕಂಪನಿ ತಿಳಿಸಿದೆ.

ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಲಸಿಕೆ ಪಡೆದವರ ಸಂಖ್ಯೆ 3 ಕೋಟಿಗೇರಿಕೆ: ಸುಧಾಕರ್‌

ಸ್ಪುಟ್ನಿಕ್‌ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಗುತ್ತಿಗೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಪಡೆದುಕೊಂಡಿದೆ. ಸೀರಂನಿಂದ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್‌ನ ಸ್ಪುಟ್ನಿಕ್‌ ಲಸಿಕೆಗಳು ಹೊರಬರಲಿವೆ. ಭಾರತದಲ್ಲಿ ಲಸಿಕೆಗಳ ಕೊರತೆ ಉಂಟಾಗಿರುವುದರಿಂದ, ಮೊದಲ ಡೋಸ್‌ ಕೋವಿಶೀಲ್ಡ್‌ ಪಡೆದವರಿಗೆ 2ನೇ ಡೋಸ್‌ ಸ್ಪುಟ್ನಿಕ್‌ ನೀಡಲು ಸರ್ಕಾರ ಅನುಮತಿ ನೀಡಿದರೆ ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಲು ಅನುಕೂಲವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!