ಪಾಕ್‌ ಅಧಿಕಾರಿಯ ಪಾಳು ಬಿದ್ದ ಸಮಾಧಿ ದುರಸ್ತಿ ಮಾಡಿದ ಭಾರತೀಯ ಸೇನೆ..!

Published : Oct 16, 2020, 11:10 AM ISTUpdated : Oct 16, 2020, 12:42 PM IST
ಪಾಕ್‌ ಅಧಿಕಾರಿಯ ಪಾಳು ಬಿದ್ದ  ಸಮಾಧಿ ದುರಸ್ತಿ ಮಾಡಿದ ಭಾರತೀಯ ಸೇನೆ..!

ಸಾರಾಂಶ

ಪಾಕ್ ಅಧಿಕಾರಿ ಸಮಾಧಿ ದುರಸ್ತಿ ಮಾಡಿದ ಭಾರತದ ಸೇನೆ | ಮೃತ ಯೋಧ ಯಾವುದೇ ದೇಶದವನಾದರೂ ಎಲ್ಲ ಅಂತಿಮ ಗೌರವಕ್ಕೆ ಅರ್ಹ ಎಂಬ ಸಿದ್ಧಾಂತ ಮೆರೆದ ಭಾರತೀಯ ಸೇನೆ

ಶ್ರೀನಗರ(ಅ.16): ಭಾರತೀಯ ಸೇನೆ ಜಮ್ಮು ಕಾಶ್ಮೀರದ ನೌಗಂ ಸೆಕ್ಟರ್‌ನಲ್ಲಿ ಹಾನಿಯಾಗಿದ್ದ ಪಾಕ್ ಅಧಿಕಾರಿಯ ಸಮಾಧಿಯನ್ನು ದುರಸ್ತಿ ಮಾಡಿದೆ. ಶ್ರೀನಾಗರ ಚೀನಾರ್ ಕಾರ್ಪ್ಸ್‌ ಸಮಾಧಿಯ ಫೋಟೋ ಶೇರ್ ಮಾಡಿದೆ.

ಸಮಾಧಿಯ ಮೇಲೆ, ಮೇಜರ್ ಮೊಹಮ್ಮದ್ ಶಬೀರ್ ಖಾನ್ - ಸಿತಾರ್ ಇ ಜುರಾತ್ ಶಾಹೀದ್ 05, 1972, 1630 ಎಸ್, 9 ಸಿಖ್ ಪ್ರತಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬರೆಯಲಾಗಿದೆ.

ಚೀನಾದಿಂದ ಅಮೆರಿಕಾಗೆ ಅಪಾಯವಿರುವುದು ನಿಜ ಎಂದ ಕಾರ್ಯದರ್ಶಿ ಪೋಂಪೆ

ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 05ರಂದು ಮೃತಪಟ್ಟ ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರ ಸಮಾಧಿ ದುರಸ್ತಿ ಮಾಡಲಾಗಿದೆ ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

ಭಾರತೀಯ ಸೇನೆ ನಂಬುವಂತೆ ಮೃತನಾದ ಯೋಧ ಯಾವುದೇ ದೇಶದವನಾದರೂ ಅದನ್ನೂ ಮೀರಿ ಎಲ್ಲ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದು ಎಂದು ಬರೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?