ಪಾಕ್‌ ಅಧಿಕಾರಿಯ ಪಾಳು ಬಿದ್ದ ಸಮಾಧಿ ದುರಸ್ತಿ ಮಾಡಿದ ಭಾರತೀಯ ಸೇನೆ..!

By Suvarna NewsFirst Published Oct 16, 2020, 11:10 AM IST
Highlights

ಪಾಕ್ ಅಧಿಕಾರಿ ಸಮಾಧಿ ದುರಸ್ತಿ ಮಾಡಿದ ಭಾರತದ ಸೇನೆ | ಮೃತ ಯೋಧ ಯಾವುದೇ ದೇಶದವನಾದರೂ ಎಲ್ಲ ಅಂತಿಮ ಗೌರವಕ್ಕೆ ಅರ್ಹ ಎಂಬ ಸಿದ್ಧಾಂತ ಮೆರೆದ ಭಾರತೀಯ ಸೇನೆ

ಶ್ರೀನಗರ(ಅ.16): ಭಾರತೀಯ ಸೇನೆ ಜಮ್ಮು ಕಾಶ್ಮೀರದ ನೌಗಂ ಸೆಕ್ಟರ್‌ನಲ್ಲಿ ಹಾನಿಯಾಗಿದ್ದ ಪಾಕ್ ಅಧಿಕಾರಿಯ ಸಮಾಧಿಯನ್ನು ದುರಸ್ತಿ ಮಾಡಿದೆ. ಶ್ರೀನಾಗರ ಚೀನಾರ್ ಕಾರ್ಪ್ಸ್‌ ಸಮಾಧಿಯ ಫೋಟೋ ಶೇರ್ ಮಾಡಿದೆ.

ಸಮಾಧಿಯ ಮೇಲೆ, ಮೇಜರ್ ಮೊಹಮ್ಮದ್ ಶಬೀರ್ ಖಾನ್ - ಸಿತಾರ್ ಇ ಜುರಾತ್ ಶಾಹೀದ್ 05, 1972, 1630 ಎಸ್, 9 ಸಿಖ್ ಪ್ರತಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬರೆಯಲಾಗಿದೆ.

ಚೀನಾದಿಂದ ಅಮೆರಿಕಾಗೆ ಅಪಾಯವಿರುವುದು ನಿಜ ಎಂದ ಕಾರ್ಯದರ್ಶಿ ಪೋಂಪೆ

ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 05ರಂದು ಮೃತಪಟ್ಟ ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರ ಸಮಾಧಿ ದುರಸ್ತಿ ಮಾಡಲಾಗಿದೆ ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

In keeping with the traditions & ethos of the , resuscitated a damaged grave of Major Mohd Shabir Khan, Sitara-e-Jurrat, Pakistan Army, who was Killed in Action (KIA) at a forward location along LC in Naugam Sector on 05 May 1972. pic.twitter.com/EjbFQSn9Iq

— Chinar Corps🍁 - Indian Army (@ChinarcorpsIA)

ಭಾರತೀಯ ಸೇನೆ ನಂಬುವಂತೆ ಮೃತನಾದ ಯೋಧ ಯಾವುದೇ ದೇಶದವನಾದರೂ ಅದನ್ನೂ ಮೀರಿ ಎಲ್ಲ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದು ಎಂದು ಬರೆಯಲಾಗಿದೆ.

click me!