ಪಾಕ್‌ ಏರ್‌ಬೇಸ್‌ ತಿಂದು ತೇಗಿದ ಭಾರತೀಯ ವಾಯುಪಡೆ!

Kannadaprabha News   | Kannada Prabha
Published : Oct 10, 2025, 09:35 AM IST
Pak Airbase

ಸಾರಾಂಶ

ಆಪರೇಷನ್‌ ಸಿಂದೂರದ ವೇಳೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಭಾರತೀಯ ವಾಯಪಡೆ, ಇದೀಗ ದಾಳಿಯಲ್ಲಿ ತಾನು ಧ್ವಂಸಗೊಳಿಸಿದ್ದ ವಾಯುನೆಲೆ, ಸೇನಾ ನೆಲೆ, ಉಗ್ರರ ಕಚೇರಿಗಳ ಪ್ರದೇಶಗಳ ಹೆಸರನ್ನು ತನ್ನ ಔತಣದ ಕೂಟದ ಮೆನುವಿಗೆ ಇಟ್ಟು ಪಾಕಿಸ್ತಾನವನ್ನು ಮತ್ತಷ್ಟು ಅಣಕವಾಡಿದೆ.

ನವದೆಹಲಿ: ಆಪರೇಷನ್‌ ಸಿಂದೂರದ ವೇಳೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಭಾರತೀಯ ವಾಯಪಡೆ, ಇದೀಗ ದಾಳಿಯಲ್ಲಿ ತಾನು ಧ್ವಂಸಗೊಳಿಸಿದ್ದ ವಾಯುನೆಲೆ, ಸೇನಾ ನೆಲೆ, ಉಗ್ರರ ಕಚೇರಿಗಳ ಪ್ರದೇಶಗಳ ಹೆಸರನ್ನು ತನ್ನ ಔತಣದ ಕೂಟದ ಮೆನುವಿಗೆ ಇಟ್ಟು ಪಾಕಿಸ್ತಾನವನ್ನು ಮತ್ತಷ್ಟು ಅಣಕವಾಡಿದೆ.

ಭಾರತೀಯ ವಾಯುಪಡೆಯು 93ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಔತಣ ಕೂಟಕ್ಕೆ ಹಲವು ರೀತಿಯ ವಸ್ತುಗಳನ್ನು ಸಿದ್ಧಪಡಿಸಿ ಅದನ್ನು ಅಧಿಕಾರಿಗಳಿಗೆ, ಯೋಧರಿಗೆ ಉಣ ಬಡಿಸಲಾಗಿತ್ತು.

ಈ ವೇಳೆ ಆಹಾರ ಪದಾರ್ಥಗಳ ಕುರಿತು ಮಾಹಿತಿ ನೀಡಲು ಸಿದ್ಧಪಡಿಸಿದ್ದ ಮೆನುವಿನಲ್ಲಿ, ಪ್ರತಿಯೊಂದಕ್ಕೂ ಪಾಕಿಸ್ತಾನವನ್ನು ಅಣಕವಾಡುವ ರೀತಿಯಲ್ಲಿ ಹೆಸರು ಇಡಲಾಗಿದೆ.

ಏನೇನು ಹೆಸರು?:

ರಾವಲ್ಪಿಂಡಿ ಚಿಕನ್‌ ಟಿಕ್ಕಾ ಮಸಾಲಾ, ಬಹಾವಲ್ಪುರ ನಾನ್‌, ರಫಿಕಿ ರಾರಾ ಮಟನ್‌, ಭೊಲಾರಿ ಪನೀರ್‌ ಮೆತಿ ಮಲೈ, ಸುಕ್ಕುರ್‌ ಶಾಮ್‌ ಸವೇರಾ ಕೊಫ್ತಾ, ಸರಗೊಧಾ ದಾಲ್‌ ಮಖನಿ, ಜಾಕೋಬಾಬಾದ್‌ ಮೆವಾ ಪಲಾವ್‌ದೆಂದು ಹೆಸರಿಟ್ಟಿದೆ. ಅದೇ ರೀತಿ ಸಿಹಿ ತಿಂಡಿಗಳಿಗೆ: ಬಾಲಾಕೋಟ್‌ ತಿರಮಿಸು, ಮುಜ್ಜಾಫರಾಬಾದ್‌ ಕುಲ್ಫಿ ಫಲುದಾ, ಮುರಿದ್ಕೆ ಮೀಠಾ ಪಾನ್‌ ಎಂದು ಹೆಸರಿಟ್ಟಿದ್ದು, ಈ ಮೆನುವಿನ ಫೋಟೋ ಭಾರಿ ಹರಿದಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ