ಪಹಲ್ಗಾಂ ಕೈಬಿಟ್ಟ ಎಸ್‌ಸಿಒ ಜಂಟಿ ಹೇಳಿಕೆಗೆ ಸಹಿ : ಭಾರತ ತಿರಸ್ಕಾರ

Published : Jun 27, 2025, 04:09 AM IST
Rajnath Singh at SCO Defence Ministers’ meet in Qingdao, China (Photo/ANI)

ಸಾರಾಂಶ

ಪಹಲ್ಗಾಂ ದಾಳಿ ವಿಚಾರ ಕೈಬಿಟ್ಟು, ಕೇವಲ ಬಲೂಚಿಸ್ತಾನ ಸಂಘರ್ಷವನ್ನಷ್ಟೇ ಪ್ರಸ್ತಾಪಿಸಿ ಪಾಕಿಸ್ತಾನವನ್ನು ಭಯೋತ್ಪಾದನೆ ಪೀಡಿತ ರಾಷ್ಟ್ರವಾಗಿ ಬಿಂಬಿಸುವ ಉದ್ದೇಶದ ಶಾಂಘೈ ಕಾರ್ಪೊರೇಷನ್‌ ಆರ್ಗನೈಸೇಷನ್‌(ಎಸ್‌ಸಿಒ)ನ ಜಂಟಿ ಹೇಳಿಕೆಗೆ ಸಹಿಹಾಕಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಿರಾಕರಿಸಿದ್ದಾರೆ.

ಕ್ವಿಂಗ್ಡಾವೋ: ಪಹಲ್ಗಾಂ ದಾಳಿ ವಿಚಾರ ಕೈಬಿಟ್ಟು, ಕೇವಲ ಬಲೂಚಿಸ್ತಾನ ಸಂಘರ್ಷವನ್ನಷ್ಟೇ ಪ್ರಸ್ತಾಪಿಸಿ ಪಾಕಿಸ್ತಾನವನ್ನು ಭಯೋತ್ಪಾದನೆ ಪೀಡಿತ ರಾಷ್ಟ್ರವಾಗಿ ಬಿಂಬಿಸುವ ಉದ್ದೇಶದ ಶಾಂಘೈ ಕಾರ್ಪೊರೇಷನ್‌ ಆರ್ಗನೈಸೇಷನ್‌(ಎಸ್‌ಸಿಒ)ನ ಜಂಟಿ ಹೇಳಿಕೆಗೆ ಸಹಿಹಾಕಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಿರಾಕರಿಸಿದ್ದಾರೆ. ಈ ಮೂಲಕ ವಿಶ್ವವೇದಿಕೆಯಲ್ಲಿ ಭಾರತಕ್ಕೆ ರಾಜತಾಂತ್ರಿಕವಾಗಿ ಮುಖಭಂಗವುಂಟು ಮಾಡುವ ಚೀನಾ ಮತ್ತು ಪಾಕ್‌ ಕಳ್ಳಾಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.

ಯಾಕೆ ಸಹಿಹಾಕಿಲ್ಲ?:

ಪಹಲ್ಗಾಂ ದಾಳಿ ಉಲ್ಲೇಖ ಇಲ್ಲದಿರುವುದು ಮತ್ತು ಉಗ್ರವಾದಕ್ಕೆ ಸಂಬಂಧಿಸಿ ಭಾರತದ ಕಠಿಣ ನಿಲುವಿನ ಪ್ರಸ್ತಾಪ ಮಾಡದ ಹಿನ್ನೆಲೆಯಲ್ಲಿ ಜಂಟಿ ಹೇಳಿಕೆಗೆ ಸಹಿಹಾಕಲು ಭಾರತ ನಿರಾಕರಿಸಿದೆ. ಈ ಹೇಳಿಕೆಯಲ್ಲಿ ಬಲೂಚಿಸ್ತಾನದ ವಿಚಾರ ಪ್ರಸ್ತಾಪವಾಗಿತ್ತಾದರೂ 26 ಮಂದಿಯನ್ನು ಬಲಿಪಡೆದ ಪಹಲ್ಗಾಂ ದಾಳಿ ಅಂಶ ಕೈಬಿಡಲಾಗಿತ್ತು.ಆಪರೇಷನ್‌ ಸಿಂದೂರ ಕಾರ್ಯಾಚರಣೆ ಪ್ರಾಮುಖ್ಯತೆ ತಗ್ಗಿಸಲೆಂದೇ ಚೀನಾ ಮತ್ತು ಪಾಕಿಸ್ತಾನ ಇಂಥ ಕುತಂತ್ರ ಹೆಣೆದಿತ್ತು. 

ಬಲೂಚಿಸ್ತಾನಕ್ಕೆ ಬಾಹ್ಯಶಕ್ತಿಗಳಿಂದ ಬೆದರಿಕೆ ಇದೆ ಎಂಬಂತೆ ಬಿಂಬಿಸಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕ್‌ ಮೇಲಿನ ವಿಶ್ವದ ಗಮನ ಬೇರೆಡೆ ತಿರುಗಿಸುವ ಪ್ರಯತ್ನ ಇದಾಗಿತ್ತು. ಈ ಮೂಲಕ ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ನಡೆಸುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ರಕ್ಷಣೆ ನೀಡುವ ಪಯತ್ನ ಮಾಡಿತ್ತು.ಯಾರ್ಯಾರು ಭಾಗಿ?:

ಚೀನಾದ ಕ್ವಿಂಗ್ಡೋದಲ್ಲಿ ಎಸ್‌ಸಿಒದಲ್ಲಿ ರಕ್ಷಣಾ ಸಚಿವರ ಸಭೆ ಆಯೋಜಿಸಲಾಗಿದ್ದು ರಷ್ಯಾ, ಪಾಕಿಸ್ತಾನ, ಚೀನಾ, ಪಾಕಿಸ್ತಾನ, ಇರಾನ್‌, ಕಝಕಿಸ್ತಾನ, ಕಿಗ್ರಿಸ್ತಾನ, ತಜಕಿಸ್ತಾನ ಮತ್ತು ಉಜ್ವೇಕಿಸ್ತಾನ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಭಾರತದ ಪರ ಪಾಲ್ಗೊಂಡಿದ್ದ ರಾಜನಾಥ್‌ ಸಿಂಗ್‌ ಅವರು, ಸಭೆ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಗೆ ಸಹಿಹಾಕಲು ನಿರಾಕರಿಸಿದರು. ಎಸ್‌ಸಿಒ ಸಭೆ ರಕ್ಷಣಾ ಸಚಿವರ ಜಂಟಿ ಹೇಳಿಕೆಯಿಲ್ಲದೆ ಮುಕ್ತಾಯಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್