
ನವದೆಹಲಿ(ಜು.08): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲಗೊಳಿಸಿದ ಪರಿಣಾಮ ಇರಬಹುದು ಎನ್ನವುಂತೆ, ಬುಧವಾರ ಕೊರೋನಾ ಕೇಸ್ ಮತ್ತು ಸಾವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 43,733 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಮಂಗಳವಾರ ದಾಖಲಾದ 34,703ಕ್ಕೆ ಹೋಲಿಸಿದರೆ, ಬುಧವಾರ 9 ಸಾವಿರದಷ್ಟುಹೆಚ್ಚು ಮಂದಿಗೆ ಸೋಂಕು ತಗುಲಿದೆ.
ಇನ್ನು ಇದೇ ಅವಧಿಯಲ್ಲಿ 930 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಸೋಮವಾರ ಮತ್ತು ಮಂಗಳವಾರದ ಮಧ್ಯೆ 553 ಮಂದಿಯಷ್ಟೇ ಕೊರೋನಾಕ್ಕೆ ಬಲಿಯಾಗಿದ್ದರು. ಮತ್ತೊಂದೆಡೆ ನಿನ್ನೆ ಒಂದೇ ದಿನ 47 ಸಾವಿರಕ್ಕೂ ಹೆಚ್ಚು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2.97 ಲಕ್ಷದೊಂದಿಗೆ 3 ಲಕ್ಷದ ಹತ್ತಿರಕ್ಕೆ ದಾಪುಗಾಲಿಡುತ್ತಿದೆ. ಇನ್ನು ದೇಶದಲ್ಲಿ 4.59 ಲಕ್ಷದಷ್ಟುಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ.
ಕೇರಳದಲ್ಲಿ ಅತಿಹೆಚ್ಚು 14,373 ಕೇಸ್ಗಳು, ಮಹಾರಾಷ್ಟ್ರ 8418, ತಮಿಳುನಾಡು 3479 ಮತ್ತು 3104 ಕೋವಿಡ್ ಸೋಂಕಿತರೊಂದಿಗೆ ಅತಿಹೆಚ್ಚು ಕೇಸ್ ದಾಖಲಾಗುತ್ತಿರುವ ಪಂಚ ರಾಜ್ಯಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ