Published : Jul 02, 2025, 07:14 AM ISTUpdated : Jul 02, 2025, 08:24 PM IST

India Latest News Live: ಇದೇ ತಿಂಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಬರಲಿದೆ ಘಾತಕ ಹೆಲಿಕಾಪ್ಟರ್‌, ಪಾಕ್‌-ಚೀನಾಗೆ ನಡುಕ!

ಸಾರಾಂಶ

ನವದೆಹಲಿ: ಭಾರತ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ‘ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕಕ್ಕೆ ಬರುವ ನಿಮ್ಮ ಉತ್ಪನ್ನಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಲಾಗುತ್ತದೆ’ ಎಂದು ಲಿಂಡ್ಡ್ ಹೇಳಿದ್ದಾರೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ.70ರಷ್ಟು ತೈಲ ಖರೀದಿಸುತ್ತವೆ.

Apache Helicopter

08:24 PM (IST) Jul 02

ಇದೇ ತಿಂಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಬರಲಿದೆ ಘಾತಕ ಹೆಲಿಕಾಪ್ಟರ್‌, ಪಾಕ್‌-ಚೀನಾಗೆ ನಡುಕ!

ಅಮೆರಿಕದಿಂದ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಸರಕು ಈ ತಿಂಗಳು ಬರಲಿದೆ. 15 ತಿಂಗಳ ಕಾಯುವಿಕೆಯ ನಂತರ, ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಪಶ್ಚಿಮ ಗಡಿಯಲ್ಲಿ ನಿಯೋಜನೆಗೊಳ್ಳಲಿವೆ. ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
Read Full Story

07:51 PM (IST) Jul 02

'ನಾನು ಗೂಗಲ್‌ ಪೇ ಬಳಸೋದೇ ಇಲ್ಲ' UPI apps ಡಿಲೀಟ್‌ ಮಾಡಿದ್ದರ ರಹಸ್ಯ ತಿಳಿಸಿದ ಸಾನಿಯಾ ಮಿರ್ಜಾ ಸೋದರಿ!

ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅವರು ತಮ್ಮ "ಲಿಟಲ್ ಚೇಂಜಸ್, ಬಿಗ್ ಇಂಪ್ಯಾಕ್ಟ್" ಸಿರೀಸ್‌ನಲ್ಲಿ ಖರ್ಚು ಮಾಡುವಲ್ಲಿ ತಮ್ಮ ಬುದ್ಧುವಂತಿಕೆಯ ಸರಳ ಬದಲಾವಣೆಯನ್ನು ಬಹಿರಂಗ ಮಾಡಿದ್ದಾರೆ.

 

Read Full Story

07:29 PM (IST) Jul 02

'ಜನರ ಗುಂಪು ದಾಳಿ ಮಾಡುತ್ತಿದೆ, ದೇವರೇ ಉಳಿಸಬೇಕು' ಮಲಯಾಳಿ ಸನ್ಯಾಸಿಯ ಸಾವು ನಿಗೂಢ, ರೈಲಿನಲ್ಲಿ ಆಗಿದ್ದಾದರೂ ಏನು?

ಒಂದು ಗುಂಪು ಜನ ಟ್ರೈನ್‌ನಲ್ಲಿ ಹಲ್ಲೆ ಮಾಡ್ತಿದ್ದಾರೆ, ಭಗವಂತ ಮಾತ್ರ ರಕ್ಷಣೆ ಅಂತ ಹೇಳಿದ್ರಂತೆ.

Read Full Story

07:15 PM (IST) Jul 02

ಡೆನ್ಮಾರ್ಕ್‌ನ ಕಿಂಡರ್‌ಗಾರ್ಡನ್‌ಗಳಲ್ಲಿ ಕೆಸರುಗದ್ದೆಯಲ್ಲಿ ಮಕ್ಕಳು ಆಡೋದೇ ಅವರ ಕಲಿಕೆ!

ಡೆನ್ಮಾರ್ಕ್‌ನಲ್ಲಿ ಮಕ್ಕಳು ಕೆಸರುಗದ್ದೆಯಲ್ಲಿ ಆಟವಾಡುವುದು ಸಾಮಾನ್ಯ. ಮಣ್ಣಿನ ಆಟವು ಸೃಜನಶೀಲತೆ, ಸಂವೇದನಾ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ..

Read Full Story

06:10 PM (IST) Jul 02

ಪಹಲ್ಗಾಮ್‌ ದಾಳಿಯ 2 ತಿಂಗಳ ಬಳಿಕ ಪಾಕ್‌ ತಾರೆಯರ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ ನಿಷೇಧ ರದ್ದು ಮಾಡಿದ ಭಾರತ!

ಆಪರೇಷನ್ ಸಿಂದೂರ್ ನಂತರ ನಿರ್ಬಂಧಿಸಲಾದ ಹಲವಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. 

Read Full Story

04:57 PM (IST) Jul 02

ಫಿಟ್ ಇದ್ರೂ ಜಸ್ಪ್ರೀತ್ ಬುಮ್ರಾ ಎಜ್‌ಬಾಸ್ಟನ್ ಟೆಸ್ಟ್ ಆಡುತ್ತಿಲ್ಲವೇಕೆ? ಕ್ಯಾಪ್ಟನ್ ಗಿಲ್ ಹೇಳಿದ್ದೇನು?

ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್‌ಗಾಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಗಿಲ್ ಸ್ಪಷ್ಟಪಡಿಸಿದ್ದಾರೆ. ಆರಂಭಿಕ ಆಘಾತದ ನಡುವೆಯೂ ಭಾರತ ಸ್ಥಿರವಾಗಿ ರನ್ ಗಳಿಸುತ್ತಿದೆ.
Read Full Story

04:48 PM (IST) Jul 02

ಮಧುಮೇಹಿಗಳಿಗೂ ಸುರಕ್ಷಿತವಾಗಲಿದೆ ಬಾಹ್ಯಾಕಾಶ ಯಾತ್ರೆ!

ಆಕ್ಸಿಯಮ್-4 ಯೋಜನೆಯಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮಧುಮೇಹ ನಿರ್ವಹಣೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಪ್ರಯೋಗಗಳು ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲೆ ಮಧುಮೇಹ ಚಿಕಿತ್ಸೆಯ ಭವಿಷ್ಯವನ್ನು ಬದಲಾಯಿಸಬಹುದು.
Read Full Story

03:29 PM (IST) Jul 02

ಪೀಕ್‌ ಟ್ರಾಫಿಕ್‌ ಟೈಮ್‌ನಲ್ಲಿ ಡಬಲ್‌ ಚಾರ್ಜ್‌ ವಿಧಿಸಲು ಒಲಾ, ಉಬರ್‌, ರಾಪಿಡೋಗೆ ಸಿಕ್ತು ಅನುಮತಿ!

ಕ್ಯಾಬ್ ದರಗಳು, ರದ್ದತಿ ಶುಲ್ಕಗಳು, ವಿಮೆ ಮತ್ತು ಚಾಲಕ ತರಬೇತಿಯನ್ನು ಒಳಗೊಂಡ ಹೊಸ ಸರ್ಕಾರಿ ನಿಯಮಗಳನ್ನು ಈ ಲೇಖನವು ವಿವರಿಸುತ್ತದೆ. ಪ್ರಯಾಣಿಕರು ಮತ್ತು ಚಾಲಕರಿಬ್ಬರಿಗೂ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳನ್ನು ತಿಳಿದುಕೊಳ್ಳಿ.
Read Full Story

03:12 PM (IST) Jul 02

ಎಜ್‌ಬಾಸ್ಟನ್ ಟೆಸ್ಟ್‌ - ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ, ಭಾರತ ತಂಡದಲ್ಲಿ 3 ಮೇಜರ್ ಚೇಂಜ್!

ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡವು ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದು, ಕರುಣ್ ನಾಯರ್ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ಭಾರತ ಇದುವರೆಗೂ ಟೆಸ್ಟ್ ಗೆಲುವು ಸಾಧಿಸಿಲ್ಲ.
Read Full Story

02:31 PM (IST) Jul 02

ಜನಪ್ರಿಯ ಹಾಜ್‌ಮುಲಾ ಮಾತ್ರೆಗೆ ಜಾರಿಯಾಯ್ತು ಜಿಎಸ್‌ಟಿ ನೋಟಿಸ್‌!

ಜನಪ್ರಿಯ ಹಾಜ್‌ಮುಲಾ ಮಾತ್ರೆಗೆ ಜಿಎಸ್‌ಟಿ ನೋಟಿಸ್‌ ಜಾರಿಯಾಗಿದೆ. ಕ್ಯಾಂಡಿ ಅಥವಾ ಆಯುರ್ವೇದ ಉತ್ಪನ್ನ ಎಂಬ ಗೊಂದಲದಿಂದ ಈ ಸಮಸ್ಯೆ ಉದ್ಭವಿಸಿದೆ. ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.
Read Full Story

01:50 PM (IST) Jul 02

ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು - ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್

ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ವರ್ಷ ಕಳೆದಿದೆ. ತಮ್ಮ ವೃತ್ತಿಜೀವನ ಅಂತ್ಯಗೊಳ್ಳಲು ಕಾರಣರಾದ ಇಬ್ಬರು ಆಟಗಾರರ ಬಗ್ಗೆ ಧವನ್ ಬಹಿರಂಗಪಡಿಸಿದ್ದಾರೆ.
Read Full Story

01:25 PM (IST) Jul 02

ಕೆನರಾ ಬ್ಯಾಂಕ್‌ ಬಳಿಕ, ರಿಲಯನ್ಸ್‌ ಕಮ್ಯುನಿಕೇಷನ್‌ ಲೋನ್‌ ಅಕೌಂಟ್‌ 'ಫ್ರಾಡ್‌' ಎಂದು ವರ್ಗೀಕರಿಸಿದ ಎಸ್‌ಬಿಐ!

ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 2019 ರಿಂದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP)ಯಲ್ಲಿದೆ ಎಂದು ಹೇಳಿದೆ. ಸಾಲ ನೀಡಿರುವ ಬ್ಯಾಂಕ್‌ ಒಂದು ಪರಿಹಾರ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದಿದೆ.

 

Read Full Story

01:07 PM (IST) Jul 02

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ದೇಶದ ಮೊದಲ ವನ್ಯಜೀವಿ ಮೇಲ್ಸೇತುವೆ ಕಾರಿಡಾರ್ !

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ 12 ಕಿಲೋಮೀಟರ್ ವಿಭಾಗವು ರಣಥಂಬೋರ್ ಹುಲಿ ಅಭಯಾರಣ್ಯದ ಬಫರ್ ವಲಯದ ಮೂಲಕ ಹಾದುಹೋಗುತ್ತದೆ. "ಇದು ಭಾರತದ ಅತಿ ಉದ್ದದ ಪ್ರಾಣಿ ಮೇಲ್ಸೇತುವೆ ಕಾರಿಡಾರ್" ಎಂದು NHAI ಪ್ರಾದೇಶಿಕ ಅಧಿಕಾರಿ ಪ್ರದೀಪ್ ಅತ್ರಿ ಹೇಳಿದ್ದಾರೆ.

 

Read Full Story

12:48 PM (IST) Jul 02

ಬಡ, ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಲಿರುವ ಕೇಂದ್ರ ಸರ್ಕಾರ; ಟೂಥ್‌ಪೇಸ್ಟ್‌, ಪಾತ್ರೆ, ಬಟ್ಟೆ, ಶೂ ಬೆಲೆ ಅಗ್ಗ!

ಮೂಲಗಳ ಪ್ರಕಾರ, ಈ ಕ್ರಮವು ಸರ್ಕಾರದ ಮೇಲೆ 40,000 ಕೋಟಿಯಿಂದ 50,000 ಕೋಟಿ ರೂ.ಗಳ ಹೊರೆ ಆಗಲಿದೆ. ಆದರೆ ಆರಂಭಿಕ ಪರಿಣಾಮವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ.

 

Read Full Story

12:33 PM (IST) Jul 02

ಸಂಜು ಸ್ಯಾಮ್ಸನ್‌ಗಾಗಿ ಈ ಇಬ್ಬರು ವಿಶ್ವಕಪ್ ವಿನ್ನರ್ಸ್ ಬಲಿಕೊಡಲು ಮುಂದಾಯ್ತಾ ಚೆನ್ನೈ ಸೂಪರ್ ಕಿಂಗ್ಸ್?

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಹೀಗಿರುವಾಗಲೇ 2026ರ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿರುವುದು ಸದ್ದು ಮಾಡುತ್ತಿದೆ.

Read Full Story

11:32 AM (IST) Jul 02

ಲಂಡನ್‌ನಲ್ಲಿ ಜತೆಯಾದ ಗೇಲ್, ಮಲ್ಯ, ಲಲಿತ್ ಮೋದಿ; ಮತ್ತೊಂದು ಬೆಂಗಳೂರು ಫ್ರಾಂಚೈಸಿ ತಗೋಳ್ತಾರಾ 3 ಲೆಜೆಂಡ್ಸ್?

ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ, ಲಲಿತ್ ಮೋದಿ ಮತ್ತು ಕ್ರಿಸ್ ಗೇಲ್ ಲಂಡನ್‌ನಲ್ಲಿ ಭೇಟಿಯಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ ಏನೆಂಬುದು ಚರ್ಚೆಯ ವಿಷಯವಾಗಿದೆ. ಐಪಿಎಲ್‌ನಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಬಹುದೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
Read Full Story

10:01 AM (IST) Jul 02

ಎಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿಂದು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಜ್‌ಬಾಸ್ಟನ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಹಿಂದೆ ಎಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

10:01 AM (IST) Jul 02

ಮಲ್ಲೇಶ್ವರ ಸ್ಫೋಟ ಕೇಸ್ - 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನ ಬಂಧನ

2013ರ ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟ ಪ್ರಕರಣದ ಶಂಕಿತ ಉಗ್ರ ಅಬೂಬಕ್ಕರ್ ಸಿದ್ದಿಕಿಯನ್ನು 30 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. 

Read Full Story

09:39 AM (IST) Jul 02

ಹಸುವನ್ನು ಪೂಜಿಸುವ ಭಾರತೀಯರು ಕಳ್ಳರು ಎಂದ ವಿದೇಶಿ ವ್ಲಾಗರ್

ಬ್ರಿಟಿಷ್ ವ್ಲಾಗರ್ ಭಾರತ, ಹಿಂದೂ ಧರ್ಮ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಗೋವು ಪೂಜೆ ಮತ್ತು ಭಾರತೀಯರನ್ನು ಕಳ್ಳರೆಂದು ಕರೆದಿದ್ದಕ್ಕೆ ವ್ಯಾಪಕ ಟೀಕೆ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
Read Full Story

09:10 AM (IST) Jul 02

ಗುರುವಾರದಿಂದ ಅಮರನಾಥ ಯಾತ್ರೆ ಶುರು - ಭದ್ರತೆ ಹೇಗಿದೆ?

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಯಾತ್ರೆ ಗುರುವಾರದಿಂದ ಆರಂಭವಾಗಲಿದ್ದು, ಕಾಶ್ಮೀರ ಉಪರಾಜ್ಯಪಾಲರು ಚಾಲನೆ ನೀಡಲಿದ್ದಾರೆ. ಭಕ್ತರ ನೋಂದಣಿ ಆರಂಭವಾಗಿದ್ದು, ಭದ್ರತೆ ಮತ್ತು ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.
Read Full Story

08:36 AM (IST) Jul 02

ಐದು ರಾಜ್ಯಗಳಲ್ಲಿ ಬಿಜೆಪಿ ಹೊಸ ನಾಯಕತ್ವ; ಉತ್ತರಾಖಂಡದಲ್ಲಿ ಇದೇ ಮೊದಲು!

ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಂಡಮಾನ್-ನಿಕೋಬಾರ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Read Full Story

08:22 AM (IST) Jul 02

2 ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸಂಪುಟ ಅಸ್ತು - ಕಂಡೀಷನ್ ಅಪ್ಲೈ

ಕೇಂದ್ರ ಸರ್ಕಾರವು 2 ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಇಎಲ್‌ಐ) ಅನುಮೋದನೆ ನೀಡಿದೆ.

Read Full Story

08:12 AM (IST) Jul 02

ವಿರೋಧ ಮುಂದುವರಿಸಿದ್ರೆ ಆಫ್ರಿಕಾಗೆ ಓಡಿಸುವೆ - ಮಸ್ಕ್‌ಗೆ ಟ್ರಂಪ್ ಎಚ್ಚರಿಕೆ

ತೆರಿಗೆ ಮಸೂದೆ ವಿರೋಧಿಸಿದ ಎಲಾನ್ ಮಸ್ಕ್‌ಗೆ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು, ಟೆಸ್ಲಾ ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಸ್ಕ್ ಹೊಸ ಪಕ್ಷ ಕಟ್ಟುವುದಾಗಿ ತಿರುಗೇಟು ನೀಡಿದ್ದಾರೆ.
Read Full Story

07:44 AM (IST) Jul 02

ಶಿವಕಾಶಿ ದುರಂತ - ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 8 ಸಾವು

ಶಿವಕಾಶಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story

More Trending News