
ನವದೆಹಲಿ(ಏ.27): ಕೋವಿಡ್ ಉತ್ತುಂಗದಲ್ಲಿದೆ. ಇದರ ನಡುವೆ ಭಾರತದ ಲಸಿಕೆ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆಯಾ? ವಿದೇಶಗಳು ಲಸಿಕೆ ತಯಾರಿಸಿ ಒಂದು ದಿನ ನಮಗೂ ನೀಡುತ್ತಾರೆ ಎಂದು ಹಲವರು ಹೇಳಿದ್ದರು. ಆದರೆ ಈ ಸಂಕಷ್ಟದ ಸಮಯದಲ್ಲಿ ಭಾರತ ಆತ್ಮನಿರ್ಭರತೆ ದಾರಿಯನ್ನು ಆಯ್ಕೆ ಮಾಡಿಕೊಂಡಿತು. ಇದರ ಪರಿಣಾಮ ಏನಾಗಿದೆ ಅನ್ನೋದು ವಿಶ್ವಕ್ಕೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಿಪಬ್ಲಿಕ್ ಮಾಧ್ಯಮದ ಸಮ್ಮಿಟ್ನಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಕೋವಿಡ್ ಕಾಲದಲ್ಲಿನ ಸಂಕಷ್ಟದ ದಿನಗಳನ್ನು ನೆನೆದಿದ್ದಾರೆ.
ಕೋವಿಡ್ ಸಮಯದಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಅತ್ಯಂತ ಮುಖ್ಯವಾಗಿತ್ತು. ಅತೀವ ಒತ್ತಡ, ಹೊಸ ದಾರಿ, ಸವಾಲುಗಳ ನಡುವೆ ದೇಶದ ಹಿತಕ್ಕಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆದಿದ್ದೇನೆ. ಈ ವೇಳೆ ರಾಜಕೀಯ ಭವಿಷ್ಯದ ಕುರಿತು ಯಾವುದೇ ಆಲೋಚನೆ ಮಾಡಿಲ್ಲ. ಕೇವಲ ದೇಶದ ಹಿತ ಮಾತ್ರ ನನ್ನ ಮುಂದಿತ್ತು ಎಂದು ಮೋದಿ ಹೇಳಿದ್ದಾರೆ. ಆದರೆ ಲಸಿಕೆ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ಹಲವರು ವಿದೇಶಿ ಲಸಿಕೆಯನ್ನು ಶ್ಲಾಘಿಸಿದರು. ಭಾರತದ ಲಸಿಕೆ ಕುರಿತು ಯಾವೆಲ್ಲಾ ಮಾತುಗಳನ್ನು ಆಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ಸಂವಾದದಲ್ಲಿ ಮೋದಿ ಮಾತು!
ಭಾರತ 2 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಗೆ ಬರಲು 60 ವರ್ಷ ತೆಗೆದುಕೊಂಡಿದೆ. ಕಳೆದ 9 ವರ್ಷದಲ್ಲಿ ಭಾರತ 3.5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವದ 10ನೇ ಅರ್ಥವ್ಯವಸ್ಥೆಯಿಂದ ಇದೀಗ 5ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದೇವೆ. ಇದು ಸಂಕಷ್ಟದ ಸಮಯದಲ್ಲೂ ನಾವು ಸಾಧನೆ ಮಮಾಡಿದ್ದೇವೆ. ಪರಿವರ್ತನೆ ಜಗತ್ತಿನ ಮುಂದಿದೆ ಎಂದು ಮೋದಿ ಹೇಳಿದ್ದಾರೆ.
ಪ್ರತಿ ನೀತಿ ರೂಪಿಸುವ ಮೂದಲು ತಳಮಟ್ಟದ ಜನಸಾಮಾನ್ಯನಿಗೆ ಇದರಿಂದ ಆಗುವ ಪ್ರಯೋಜನಗಳು, ಸಾವಲುಗಳ ಕುರಿತು ಚರ್ಚಿಸಿ ನಿರ್ಧಾರಕೈಗೊಳ್ಳಲಾಗುತ್ತದೆ. ದೇಶದ ಅಭಿವೃದ್ಧಿಗ ಹೊಸ ವೇಗ ನೀಡಿದ್ದೇವೆ. ಕೆಲ ಯೋಜನೆಗಳನ್ನು ಆರಂಭಿಸಿದಾಗ ಕೆಲವರು ಟೀಕೆ ಮಾಡಿದ್ದರು. ಆದರೆ ಇದೀಗ ಅದೇ ಯೋಜನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ದಲಿತರು, ಬಡವರರು, ರೈತರು, ತುಳಿತಕ್ಕೊಳಗಾದವರು, ಮಧ್ಯಮವರ್ಗ ಸೇರಿದಂತೆ ಎಲ್ಲಾ ವರ್ಗದ ಜನರು ನಮ್ಮ ಸರ್ಕಾರದ ಲಾಭ ಪಡೆಯುತ್ತಿದ್ದಾರೆ. ತುಷ್ಠೀಕರಣ ರಾಜಕಾರಣ ಬಿಟ್ಟು ಸಂತುಷ್ಠಿಕರಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಮೇ 2ರಂದು ಸಿಂಧನೂರಿಗೆ ಮೋದಿ: ಪ್ರಧಾನಿಯೊಬ್ಬರು ಆಗಮಿಸುತ್ತಿರುವುದು ಇದೇ ಮೊದಲು!
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಈ ದೇಶದ ಬಡವರ ನೆಮ್ಮದಿಗೆ ಕಾರಣವಾದ ಯೋಜನೆ. ಕೊರೋನಾ ಸಮಯದಲ್ಲಿ ಭಾರತದ ಬಡವರು ಹಸಿವಿನಿಂದ ಇರಬಾರದು ಎಂದು ಆರಂಭಗೊಂಡ ಈ ಯೋಜನೆ ವಿಸ್ತರಣೆಗೊಳ್ಳುತ್ತಲೇ ಬಂದಿದೆ. ಇಂದ ಬಡವರ ಹಕ್ಕಾಗಿ ಬದಲಾಗಿದೆ. ಇದರಿಂದ ಬಡವರು ಯಾವುದೇ ಚಿಂತೆಯಿಲ್ಲದೆ ಬದುಕು ಸಾಗಿಸಲು ಸಾಧ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ