ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು!

Published : Dec 14, 2020, 08:42 AM ISTUpdated : Dec 14, 2020, 09:01 AM IST
ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು!

ಸಾರಾಂಶ

ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು| ದಿಲ್ಲಿ, ಅಯೋಧ್ಯೆ, ಬೋಧಗಯಾ, ಶ್ರೀನಗರ ಉಗ್ರರ ಟಾರ್ಗೆಟ್‌| ಮಹಿಳಾ ತಂಡದ ನೇತೃತ್ವದಲ್ಲಿ ದೇಶದೆಲ್ಲೆಡೆ ದಾಳಿಗೆ ಉಗ್ರರ ಸಂಚು| ವಿದೇಶಿ ಉಗ್ರರಿಗೆ ಭಾರತದಲ್ಲಿ ಪಿಎಫ್‌ನಿಂದ ನೆರವು ಸಾಧ್ಯತೆ| ಸಂಚಲ್ಲಿ ಝಾಕಿರ್‌ ನಾಯ್‌್ಕ, ರೋಹಿಂಗ್ಯ ಮುಖಂಡ ನಾಸಿರ್‌ ಭಾಗಿ

ನವದೆಹಲಿ(ಡಿ.14): ದಿಲ್ಲಿ, ಅಯೋಧ್ಯೆ, ಬೋಧಗಯಾ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ಕೃತ್ಯ ಕೈಗೊಳ್ಳಲು ಮಲೇಷ್ಯಾ ಮೂಲದ ಸಂಘಟನೆಯೊಂದು ಸಂಚು ರೂಪಿಸಿರುವ ಆತಂಕಕಾರಿ ವಿಷಯ ಬಯಲಾಗಿದೆ. ಈ ಕುರಿತು 2 ಲಕ್ಷ ಡಾಲರ್‌ ಹಣಕಾಸು ವ್ಯವಹಾರ ನಡೆದಿರುವುದನ್ನು ಭಾರತದ ಗುಪ್ತಚರ ಸಂಸ್ಥೆಯಾದ ‘ರೀಸಚ್‌ರ್‍ ಆ್ಯಂಡ್‌ ಅನಾಲಿಸಿಸ್‌ ವಿಂಗ್‌’ (ರಾ) ಪತ್ತೆ ಹಚ್ಚಿದೆ.

ಈ ವ್ಯವಹಾರಗಳ ಮೂಲವನ್ನು ಹುಡುಕಿದಾಗ, ಅವು ಕೌಲಾಲಂಪುರ ಮೂಲದ ರೋಹಿಂಗ್ಯ ಮುಸ್ಲಿಂ ಮುಖಂಡ ಮೊಹಮ್ಮದ್‌ ನಾಸಿರ್‌ ಹಾಗೂ ಭಾರತದಿಂದ ಪರಾರಿಯಾಗಿ ಮಲೇಷ್ಯಾಗೆ ಹೋಗಿ ನೆಲೆಸಿರುವ ವಿವಾದಿತ ಇಸ್ಲಾಮಿಕ್‌ ಧರ್ಮಬೋಧಕ ಝಾಕಿರ್‌ ನಾಯ್‌್ಕಗೆ ಸಂಬಂಧಿಸಿದ ವಹಿವಾಟುಗಳು ಎಂದು ಗೊತ್ತಾಗಿದೆ. ಉಗ್ರ ಸಂಘಟನೆಯ 2 ಲಕ್ಷ ಡಾಲರ್‌ ಹಣದಲ್ಲಿ ಒಂದು ಭಾಗವು ಚೆನ್ನೈ ಮೂಲದ ಹವಾಲಾ ಡೀಲರ್‌ ಒಬ್ಬನಿಗೆ ಬಂದಿದೆ. ಇನ್ನೊಂದು ಆತಂಕಕಾರಿ ವಿಷಯವೆಂದರೆ ಈ ಬಾರಿ ದಾಳಿಗೆ ಮಹಿಳೆಯೊಬ್ಬರಿಗೆ ನೇತೃತ್ವದ ನೀಡಿರುವುದು. ಭಾರತದಲ್ಲಿ ಉಗ್ರ ದಾಳಿಗೆ ಮಹಿಳೆಯೊಬ್ಬರ ನೇತೃತ್ವ ನೀಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಮಹಿಳೆಗೆ ದಾಳಿ ಹೊಣೆ!

ದಾಳಿಯ ಹೊಣೆ ವಹಿಸಲಾಗಿರುವ ಮಹಿಳೆಯೊಬ್ಬರಿಗೆ ಮಲೇಷ್ಯಾದ ಉಗ್ರ ಸಂಘಟನೆಯು ಮ್ಯಾನ್ಮಾರ್‌ನಲ್ಲಿ ಭಯೋತ್ಪಾದನೆ ತರಬೇತಿ ನೀಡಿದೆ. ಈಕೆಯ ನೇತೃತ್ವದಲ್ಲೇ ಗುಂಪು ರಚಿಸಿ ಭಾರತದಲ್ಲಿ ದಾಳಿಗೆ ಸಂಚು ರೂಪಿಸಲಾಗಿದೆ. ಬಾಂಗ್ಲಾದೇಶ ಅಥವಾ ನೇಪಾಳ ಗಡಿಯ ಮೂಲಕ ಡಿಸೆಂಬರ್‌ ಮಧ್ಯಭಾಗದಲ್ಲಿ ಉಗ್ರರ ಗುಂಪು ಭಾರತದಲ್ಲಿ ನುಸುಳಲು ಯೋಜನೆ ಹಾಕಿಕೊಂಡಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಗುಂಪು ಭಾರತದಲ್ಲಿ ದಾಳಿ ನಡೆಸಬಹುದು ಎಂಬ ಮಾಹಿತಿ ‘ರಾ’ಗೆ ಲಭಿಸಿದೆ.

ದಾಳಿಗೆ ಪಿಎಫ್‌ಐ ನೆರವು

ಈ ದಾಳಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಬೆಂಬಲ ದೊರಕಬಹುದು ಎಂದು ಗುಪ್ತಚರ ದಳವು ರಾಜ್ಯಗಳಿಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಹಿನ್ನೆಲೆಯಲ್ಲಿ ದಿಲ್ಲಿ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್