
ಬೀಜಿಂಗ್/ನವದೆಹಲಿ(ಜೂ.06): ಲಡಾಖ್ ಹಾಗೂ ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಲೆಫ್ಟಿನೆಂಟ್ ಜನರಲ್ ಮಟ್ಟದ ಮಹತ್ವದ ಮಾತುಕತೆ ಶನಿವಾರ ನಡೆಯಲಿದೆ.
ಲೇಹ್ನಲ್ಲಿನ 14 ಕೋರ್ ಪಡೆಯ ಮುಖ್ಯಸ್ಥ ಲೆ| ಜ| ಹರಿಂದರ್ ಸಿಂಗ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಾತುಕತೆಯು ಪೂರ್ವ ಲಡಾಖ್ನ ಚುಶೂಲ್ ವಲಯದ ಮಾಲ್ಡೋದಲ್ಲಿ ಬೆಳಗ್ಗೆ 8 ಗಂಟೆಗೆ ಮಾತುಕತೆ ನಿಗದಿಯಾಗಿದೆ.
ಪಾಂಗಾಂಗ್ ತ್ಸೋ, ಗಲ್ವಾನ್ ಕಣಿವೆ ಹಾಗೂ ಡೆಮ್ಚೋಕ್ ಎಂಬ ಲಡಾಖ್ನ 3 ಭಾಗಗಳಲ್ಲಿ ಕಳೆದ ತಿಂಗಳು ಭಾರತ ಹಾಗೂ ಚೀನಾ ಪಡೆಗಳು ಚಕಮಕಿ ನಡೆಸಿದ್ದವು. ಈ ವಿಷಯದ ಬಗ್ಗೆ ಮಾತುಕತೆಯಲ್ಲಿ ಪ್ರಮುಖ ಚರ್ಚೆ ನಡೆಯಲಿದ್ದು, ಕಾದಾಟಕ್ಕೆ ಅಂತ್ಯ ಹಾಡುವ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಭಾರತವು ಯಥಾಸ್ಥಿತಿ ಮುಂದುವರಿಸಬೇಕು ಎಂದು ಚೀನಾ ಮುಂದೆ ಪ್ರಸ್ತಾಪ ಇರಿಸುವ ಉದ್ದೇಶ ಹೊಂದಿದೆ. ಈ ಮುಂಚೆ 10 ಸುತ್ತಿನ ಮಾತುಕತೆಗಳು ನಡೆದಿದ್ದರೂ ಫಲ ನೀಡಿಲ್ಲ.
ಈ ನಡುವೆ, ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್, ಸೂಕ್ತ ರೀತಿಯಲ್ಲಿ ಗಡಿ ವಿಚಾರ ಬಗೆಹರಿಸಿಕೊಳ್ಳಲು ಚೀನಾ ಇಚ್ಛಿಸುತ್ತದೆ ಎಂದಿದ್ದಾರೆ.
ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು ಉಭಯ ದೇಶಗಳ ಪಡೆಗಳು ಗಡಿಯಿಂದ ಶುಕ್ರವಾರವೇ ದೂರ ಸರಿದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ