ಕಷ್ಟ​ದ​ಲ್ಲಿದ್ದ 18 ದೇಶ​ಗ​ಳಿಗೆ ಭಾರ​ತದ ಗೋಧಿ: ವಿಶ್ವ​ಸಂಸ್ಥೆ ಶ್ಲಾಘ​ನೆ

Published : Jun 19, 2023, 07:56 AM IST
 ಕಷ್ಟ​ದ​ಲ್ಲಿದ್ದ 18 ದೇಶ​ಗ​ಳಿಗೆ ಭಾರ​ತದ ಗೋಧಿ: ವಿಶ್ವ​ಸಂಸ್ಥೆ ಶ್ಲಾಘ​ನೆ

ಸಾರಾಂಶ

ಕಳೆದ ವರ್ಷ ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮವಾಗಿ ತೀವ್ರ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ 18 ಲಕ್ಷ ಟನ್‌ ಗೋಧಿ ರಫ್ತು ಮಾಡಿದ್ದ ಭಾರತವನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೆ, ಸಿರಿ​ಧಾ​ನ್ಯ​ವನ್ನು ಜಾಗ​ತಿ​ಕ​ವಾಗಿ ಪ್ರಚಾರ ಮಾಡು​ವಲ್ಲಿ ಭಾರತ ಮಹ​ತ್ವದ ಪಾತ್ರ ವಹಿ​ಸಿದೆ ಎಂದೂ ಕೊಂಡಾ​ಡಿ​ದೆ.

ನವದೆಹಲಿ: ಕಳೆದ ವರ್ಷ ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮವಾಗಿ ತೀವ್ರ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ 18 ಲಕ್ಷ ಟನ್‌ ಗೋಧಿ ರಫ್ತು ಮಾಡಿದ್ದ ಭಾರತವನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಅಲ್ಲದೆ, ಸಿರಿ​ಧಾ​ನ್ಯ​ವನ್ನು ಜಾಗ​ತಿ​ಕ​ವಾಗಿ ಪ್ರಚಾರ ಮಾಡು​ವಲ್ಲಿ ಭಾರತ ಮಹ​ತ್ವದ ಪಾತ್ರ ವಹಿ​ಸಿದೆ ಎಂದೂ ಕೊಂಡಾ​ಡಿ​ದೆ.

ಭಾನು​ವಾರ ಪಿಟಿಐ (PTI) ಸುದ್ದಿ​ಸಂಸ್ಥೆ ಜತೆ ಮಾತ​ನಾ​ಡಿದ ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD) ಅಧ್ಯಕ್ಷ ಅಲ್ವಾರೊ ಲಾರಿಯೊ ‘ಜಾಗತಿಕ ಆಹಾರ ವ್ಯವಸ್ಥೆಯನ್ನು ಪರಿವರ್ತಿಸಬೇಕೆನ್ನುವ ವಿಶ್ವಸಂಸ್ಥೆಯ (United Nation) ನಿರ್ಧಾರಕ್ಕೆ ಅನುಗುಣವಾಗಿ ಭಾರತದ ಆದ್ಯತೆಗಳಿವೆ. ಉಕ್ರೇ​ನ್‌-ರಷ್ಯಾ (Ukraine-Russia war) ಯುದ್ಧದ ಕಾರಣ 18 ದೇಶ​ಗಳು ಆಹಾರದ ಕೊರತೆ ಅನು​ಭ​ವಿ​ಸು​ತ್ತಿ​ದ್ದವು. ಈ ವೇಳೆ 18 ಲಕ್ಷ ಟನ್‌ ಗೋಧಿ​ಯನ್ನು ಆ ಬಡ ದೇಶ​ಗ​ಳಿಗೆ ಭಾರತ ಕಳಿಸಿ ಹಸಿವು ನೀಗಿ​ಸಿ​ತು’ ಎಂದಿದ್ದಾರೆ.

ಕಾಶ್ಮೀರ ವಿಷಯಕ್ಕೆ ವಿಶ್ವಸಂಸ್ಥೆ ಸೂಕ್ತ ಪರಿಹಾರ: ಪಾಕ್‌ ನೆಲದಲ್ಲಿ ಚೀನಾ ಕ್ಯಾತೆ; ತಾಲಿಬಾನ್‌ ಜತೆಗೂ ಒಪ್ಪಂದ!

ಇದೇ ವೇಳೆ, ‘ಬ​ಡ​ವರ ಹಸಿವು ನೀಗಿ​ಸು​ವಲ್ಲಿ, ಹವಾ​ಮಾನ ಬದ​ಲಾ​ವಣೆ (climate change) ವಿರುದ್ಧ ರೈತರು ಹೋರಾ​ಡು​ವಲ್ಲಿ ಸಿರಿ​ಧಾ​ನ್ಯ​ಗಳು ಮಹ​ತ್ವದ ಪಾತ್ರ ವಹಿ​ಸು​ತ್ತವೆ. ಹೀಗಾಗಿ ರಿಇ​ಧಾ​ನ್ಯ​ಗಳ ಪುನ​ರು​ಜ್ಜೀ​ವ​ನ​ದಲ್ಲಿ ಭಾರತ ಪ್ರಮುಖ ಪಾತ್ರ ವಹಿ​ಸು​ತ್ತಿ​ದೆ’ ಎಂದೂ ಹೇಳಿ​ದ್ದಾ​ರೆ.  ಭಾರತವು ಪ್ರಪಂಚದ ದಕ್ಷಿಣ ಭಾಗದ ಮತ್ತು ಇತರ ದೇಶಗಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ಲಾರಿ​ಯೊ ಶ್ಲಾಘಿಸಿದ್ದಾರೆ.

ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?