ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

Published : Aug 14, 2020, 09:30 PM ISTUpdated : Aug 14, 2020, 09:31 PM IST
ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

ಸಾರಾಂಶ

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ(ಆ.15) ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೊರೋನಾ ವೈರಸ್ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮಾರ್ಗಸೂಚಿಯಂತೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಧ್ವಜಾರೋಹಣ ಸೇರಿದಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ(ಆ.14): ಕೊರೋನಾ ವೈರಸ್ ನಡುವೆ ದೇಶ ಸ್ವಾತಂತ್ರ್ಯ ದಿನಾಚರೆ ಆಚರಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ಅದ್ಧೂರಿ ಕಾರ್ಯಕ್ರಮಗಳಿಲ್ಲ. ಕೊರೋನಾ ಕಾರಣ ಸರಳವಾಗಿ ಪ್ರಮುಖ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. 

ಹುತಾತ್ಮ ಯೋಧರಿಗೆ ನಮನ: ಸ್ವಾತಂತ್ರ್ಯ ದಿನಾಚರಣೆಗೆ ಮಹತ್ವದ ಸಂದೇಶ ಸಾರಿದ ರಾಷ್ಟ್ರಪತಿ!.

74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ದೇಶವನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ನಾಳಿನ(ಆ.15)ರ ಸ್ವಾತಂತ್ರ್ಯ ದಿನಾಚರೆ ಕಾರ್ಯಕ್ರದಮ ವಿವರ ಇಲ್ಲಿದೆ.

  • ಬೆಳಗ್ಗೆ 7.18ಕ್ಕೆ ನರೇಂದ್ರ ಮೋದಿ  ಲಾಹೋರ್ ಗೇಟ್ ಮೂಲಕ ಕೆಂಪು ಕೋಟೆ ಪ್ರವೇಶ
  • ಕೆಂಪು ಕೋಟೆಗೆ ಆಗಮಿಸಿದ ಮೋದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಬರಮಾಡಿಕೊಳ್ಳಲಿದ್ದಾರೆ
  • ರಕ್ಷಣಾ  ಕಾರ್ಯದರ್ಶಿ ಪ್ರಧಾನಿ ಮೋದಿಗೆ, ಜನರಲ್ ಆಫೀಸರ್ ಕಮಾಂಡಿಂಗ್(GoC) ಲೆ.ಜ. ವಿಜಯ್ ಕುಮಾರ್ ಅವರನ್ನು ಪರಿಚಯಿಸಲಿದ್ದಾರೆ
  • GoC, ಇಂಟರ್ ಸರ್ವೀಸ್ ಹಾಗೂ ಪೊಲೀಸ್ ಗಾರ್ಡ್ ಪ್ರಧಾನಿ ಮೋದಿಗೆ ಸಲ್ಯೂಟ್ ಗೌರವ ನೀಡಲಿದ್ದಾರೆ
  • ಪ್ರಧಾನಿ ನರೇಂದ್ರ ಮೋದಿಗೆ ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ. ಭೂ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಒಟ್ಟು 24 ಮಂದಿ ಅಧಿಕಾರಿಗಳು ಮೋದಿಗೆ  ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ
  • ವಾಯುಪಡೆಯ ಲೆ.ಕೊಲೊನೆಲ್ ಗೌರವ್ ಎಸ್ ಯೆವಾಲ್ಕರ್, ಭೂಸೇನೆಯ ಮೇಜರ್ ಪಲ್ವಿಂದರ್ ಗೆವಾಲ್, ನೌಕಾಪಡೆಯ ಕೆವಿಆರ್ ರೆಡ್ಡಿ, ಪ್ರಧಾನಿ ಮೋದಿಗೆ ನೀಡಲಿರುವ ಗಾರ್ಡ್ ಆಫ್ ಹಾನರ್ ನೇತೃತ್ವವಹಿಸಲಿದ್ದಾರೆ.
  • ಭಾರತೀಯ ಸೇನೆಯ ಅತ್ಯಂತ ಜನಪ್ರಿಯ ಗರ್ವಾಲ್ ರೈಫಲ್ಸ್ ತುಕಡಿ ಗಾರ್ಡ್ ಆಫ್ ಹಾನರ್ ನೀಡಲಿದೆ
  • ಗಾರ್ಡ್ ಆಫ್ ಹಾನರ್ ಬಳಿಕ ಪ್ರಧಾನಿ ಮೋದಿ ಧ್ವಜಾರೋಹಣಕ್ಕಾಗಿ ಆಗಮಸಲಿದ್ದಾರೆ. ಈ ವೇಳೆ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಎಂಎಂ ನರವಾಣೆ, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳು ಸಾಥ್ ನೀಡಲಿದ್ದಾರೆ.
  • ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಸೇನಾಧಿಕಾರಿಗಳು ಹಾಗೂ ಗಾರ್ಡ್ ಆಫ್ ಹಾನರ್ ನೀಡಿದ ತುಕಡಿ ರಾಷ್ಟ್ರ ಧ್ವಜಕ್ಕೆ ಸಲ್ಯೂಟ್ ಮಾಡಲಿದೆ
  • ಸುಬೆದಾರ್ ಮೇಜರ್ ಅಬ್ದುಲ್ ಗಾನಿ ನೇತೃತ್ವದ ಮಿಲಿಟರಿ ಬ್ಯಾಂಡ್ ರಾಷ್ಟ್ರಗೀತೆ ನುಡಿಸಲಿದೆ.
  • ಲೆಫ್ಟಿನೆಂಟ್ ಕೊಲೊನೆಲ್ ಜಿತೇಂದ್ರ ಸಿಂಗ್ ಮೆಹ್ತ ನೇತೃತ್ವದ ಸೇನಾ ತುಕಡಿ 21 ಗನ್ ಸಲ್ಯೂಟ್ ಮೂಲಕ ಗೌರವ ಸಲ್ಲಿಸಲಿದೆ
  • ಧ್ವಜಾರೋಹಣ ಗೌರವ ಸಮರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ
  • ವಿವಿದ ಶಾಲೆಗಳ 500 NCC ಕೆಡೆಟ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!