ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

By Suvarna NewsFirst Published Aug 14, 2020, 9:30 PM IST
Highlights

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ(ಆ.15) ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೊರೋನಾ ವೈರಸ್ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮಾರ್ಗಸೂಚಿಯಂತೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಧ್ವಜಾರೋಹಣ ಸೇರಿದಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ(ಆ.14): ಕೊರೋನಾ ವೈರಸ್ ನಡುವೆ ದೇಶ ಸ್ವಾತಂತ್ರ್ಯ ದಿನಾಚರೆ ಆಚರಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ಅದ್ಧೂರಿ ಕಾರ್ಯಕ್ರಮಗಳಿಲ್ಲ. ಕೊರೋನಾ ಕಾರಣ ಸರಳವಾಗಿ ಪ್ರಮುಖ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. 

ಹುತಾತ್ಮ ಯೋಧರಿಗೆ ನಮನ: ಸ್ವಾತಂತ್ರ್ಯ ದಿನಾಚರಣೆಗೆ ಮಹತ್ವದ ಸಂದೇಶ ಸಾರಿದ ರಾಷ್ಟ್ರಪತಿ!.

74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ದೇಶವನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ನಾಳಿನ(ಆ.15)ರ ಸ್ವಾತಂತ್ರ್ಯ ದಿನಾಚರೆ ಕಾರ್ಯಕ್ರದಮ ವಿವರ ಇಲ್ಲಿದೆ.

  • ಬೆಳಗ್ಗೆ 7.18ಕ್ಕೆ ನರೇಂದ್ರ ಮೋದಿ  ಲಾಹೋರ್ ಗೇಟ್ ಮೂಲಕ ಕೆಂಪು ಕೋಟೆ ಪ್ರವೇಶ
  • ಕೆಂಪು ಕೋಟೆಗೆ ಆಗಮಿಸಿದ ಮೋದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಬರಮಾಡಿಕೊಳ್ಳಲಿದ್ದಾರೆ
  • ರಕ್ಷಣಾ  ಕಾರ್ಯದರ್ಶಿ ಪ್ರಧಾನಿ ಮೋದಿಗೆ, ಜನರಲ್ ಆಫೀಸರ್ ಕಮಾಂಡಿಂಗ್(GoC) ಲೆ.ಜ. ವಿಜಯ್ ಕುಮಾರ್ ಅವರನ್ನು ಪರಿಚಯಿಸಲಿದ್ದಾರೆ
  • GoC, ಇಂಟರ್ ಸರ್ವೀಸ್ ಹಾಗೂ ಪೊಲೀಸ್ ಗಾರ್ಡ್ ಪ್ರಧಾನಿ ಮೋದಿಗೆ ಸಲ್ಯೂಟ್ ಗೌರವ ನೀಡಲಿದ್ದಾರೆ
  • ಪ್ರಧಾನಿ ನರೇಂದ್ರ ಮೋದಿಗೆ ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ. ಭೂ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಒಟ್ಟು 24 ಮಂದಿ ಅಧಿಕಾರಿಗಳು ಮೋದಿಗೆ  ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ
  • ವಾಯುಪಡೆಯ ಲೆ.ಕೊಲೊನೆಲ್ ಗೌರವ್ ಎಸ್ ಯೆವಾಲ್ಕರ್, ಭೂಸೇನೆಯ ಮೇಜರ್ ಪಲ್ವಿಂದರ್ ಗೆವಾಲ್, ನೌಕಾಪಡೆಯ ಕೆವಿಆರ್ ರೆಡ್ಡಿ, ಪ್ರಧಾನಿ ಮೋದಿಗೆ ನೀಡಲಿರುವ ಗಾರ್ಡ್ ಆಫ್ ಹಾನರ್ ನೇತೃತ್ವವಹಿಸಲಿದ್ದಾರೆ.
  • ಭಾರತೀಯ ಸೇನೆಯ ಅತ್ಯಂತ ಜನಪ್ರಿಯ ಗರ್ವಾಲ್ ರೈಫಲ್ಸ್ ತುಕಡಿ ಗಾರ್ಡ್ ಆಫ್ ಹಾನರ್ ನೀಡಲಿದೆ
  • ಗಾರ್ಡ್ ಆಫ್ ಹಾನರ್ ಬಳಿಕ ಪ್ರಧಾನಿ ಮೋದಿ ಧ್ವಜಾರೋಹಣಕ್ಕಾಗಿ ಆಗಮಸಲಿದ್ದಾರೆ. ಈ ವೇಳೆ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಎಂಎಂ ನರವಾಣೆ, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳು ಸಾಥ್ ನೀಡಲಿದ್ದಾರೆ.
  • ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಸೇನಾಧಿಕಾರಿಗಳು ಹಾಗೂ ಗಾರ್ಡ್ ಆಫ್ ಹಾನರ್ ನೀಡಿದ ತುಕಡಿ ರಾಷ್ಟ್ರ ಧ್ವಜಕ್ಕೆ ಸಲ್ಯೂಟ್ ಮಾಡಲಿದೆ
  • ಸುಬೆದಾರ್ ಮೇಜರ್ ಅಬ್ದುಲ್ ಗಾನಿ ನೇತೃತ್ವದ ಮಿಲಿಟರಿ ಬ್ಯಾಂಡ್ ರಾಷ್ಟ್ರಗೀತೆ ನುಡಿಸಲಿದೆ.
  • ಲೆಫ್ಟಿನೆಂಟ್ ಕೊಲೊನೆಲ್ ಜಿತೇಂದ್ರ ಸಿಂಗ್ ಮೆಹ್ತ ನೇತೃತ್ವದ ಸೇನಾ ತುಕಡಿ 21 ಗನ್ ಸಲ್ಯೂಟ್ ಮೂಲಕ ಗೌರವ ಸಲ್ಲಿಸಲಿದೆ
  • ಧ್ವಜಾರೋಹಣ ಗೌರವ ಸಮರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ
  • ವಿವಿದ ಶಾಲೆಗಳ 500 NCC ಕೆಡೆಟ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ
click me!