ಕರ್ನಾಟಕ ಸೇರಿ ಚೆಟ್ಟಿನಾಡ್‌ ಗ್ರೂಪ್‌ನ 60 ಕಡೆ ದಾಳಿ: 7 ಕೋಟಿ ನಗದು ವಶ!

Published : Dec 10, 2020, 08:44 AM IST
ಕರ್ನಾಟಕ ಸೇರಿ ಚೆಟ್ಟಿನಾಡ್‌ ಗ್ರೂಪ್‌ನ 60 ಕಡೆ ದಾಳಿ: 7 ಕೋಟಿ ನಗದು ವಶ!

ಸಾರಾಂಶ

ಕರ್ನಾಟಕ ಸೇರಿ ಚೆಟ್ಟಿನಾಡ್‌ ಗ್ರೂಪ್‌ನ 60 ಕಡೆ ದಾಳಿ: 7 ಕೋಟಿ ನಗದು ವಶ| ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದಲ್ಲಿರುವ 60 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ 

ನವದೆಹಲಿ(ಡಿ.10): ತಮಿಳುನಾಡು ಮೂಲದ ಚೆಟ್ಟಿನಾಡ್‌ ಸಮೂಹ ಸಂಸ್ಥೆಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದಲ್ಲಿರುವ 60 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ಮಾಡಲಾಗಿದ್ದು, ಸುಮಾರು ಏಳು ಕೋಟಿ ನಗದು ವಶಕ್ಕೆ ಪಡೆಯಲಾಗಿದೆ.

ನೂರು ವರ್ಷಗಳಷ್ಟುಹಳೆಯದಾಗಿರುವ ಈ ಸಂಸ್ಥೆಯ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದ್ದು, ಹೀಗಾಗಿ ಐಟಿ ಇಲಾಖೆ ದಾಳಿ ಮಾಡಿದೆ. ಪ್ರಕರಣ ಸಂಬಂಧ ಈವರೆಗೆ ಯಾವುದೇ ಬಂಧನವಾಗಿಲ್ಲ. ಸಿಮೆಂಟ್‌, ವಿದ್ಯುತ್‌,ಗಣಿ, ಹೋಟೆಲ್‌ ಸೇರಿ ಹಲವು ವ್ಯವಹಾರಗಳಲ್ಲಿ ಚೆಟ್ಟಿನಾಡ್‌ ತೊಡಗಿಸಿಕೊಂಡಿದೆ.

ಇದೇ ವರ್ಷದ ಆಗಸ್ಟ್‌ನಲ್ಲಿ ಚೆಟ್ಟಿನಾಡ್‌ ಬಿಲ್ಡರ್ಸ್‌ ಅನ್ನು ಜಿಂದಾಲ್‌ ನೇತೃತ್ವದ ಜೆಎಸ್‌ಡಬ್ಲ್ಯೂ ಇನ್‌ಫ್ರಾಸ್ಟ್ರಕ್ಚರ್‌ಗೆ ಮಾರಾಟ ಮಾಡಿತ್ತು. ಕರ್ನಾಟಕದ ಬೆಂಗಳೂರು, ಮಂಗಳೂರು, ವಿಜಯಪುರ, ತುಮಕೂರು ಹೊಸದುರ್ಗದಲ್ಲಿ ಚೆಟ್ಟಿನಾಡ್‌ ಸಮೂಹದ ಹಲವು ಕೈಗಾರಿಕೆಗಳಿವೆ. ಈ ಸಮೂಹದ ಅಧ್ಯಕ್ಷರಾಗಿದ್ದ ಎಂ.ಎ.ಎಂ ರಾಮಸ್ವಾಮಿ 2004ರಿಂದ 2010ರ ವರೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!