
ಮಾಲ್ಡಾ (ಜೂ.4): ಗಂಡನ ಕೊಂದು ಡ್ರಮ್ನಲ್ಲಿ ಸಿಮೆಂಟ್ ಹಾಕಿ ಸೀಲ್ ಮಾಡಿದ ಮುಸ್ಕಾನ್ ಎಂಬಾಕೆಯ ಭಯಾನಕ ಕೃತ್ಯ ಮಾಸುವ ಮುನ್ನವೇ, ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಹತ್ಯೆಗೈದು ಗೋಡೆಯಲ್ಲಿಟ್ಟು ಸಿಮೆಂಟ್ನಿಂದ ಪ್ಲಾಸ್ಟರ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕನ್ನಡದ ‘ದೃಶ್ಯ’ ಚಿತ್ರ ನೆನಪಿಸುವ ಈ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.
ದೂರು: ಈ ನಡುವೆ ಸದ್ದಾಂ ನದಾಫ್ ಮೇ 18ರಂದು ಮನೆಯಿಂದ ಹೋಗಿದ್ದವನು ಹಿಂದಿರುಗಿ ಬಂದಿರಲಿಲ್ಲ. ಈ ಸಂಬಂಧ ಆತನ ಪತ್ನಿ ನಾಸ್ರಿನ್ ಖಾತುನ್ ಮೇ 23ರಂದು ದೂರು ದಾಖಲಿಸಿದ್ದರು. ಜತೆಗೆ ತಮಗೆ ತಮ್ಮ ಸಂಬಂಧಿಯೇ ಆಗಿದ್ದ ರೆಹಮಾನ್ ನದಾಫ್ ಮತ್ತು ಮೌಮಿತಾ ಹಸನ್ ವಿರುದ್ಧ ಅನುಮಾನ ಇರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೌಮಿತಾಳನ್ನು ವಿಚಾರಣೆ ಮಾಡಿದಾಗ ಮೊದಲಿಗೆ ಒಪ್ಪಿಕೊಳ್ಳದೇ ಇದ್ದರೂ ಕೊನೆಗೆ ಪ್ರಿಯಕರನ ಕಾಟ ತಾಳಲಾಗದೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಆಗಿದ್ದೇನು?:ಸದ್ದಾಂ ನದಾಫ್ ಎಂಬಾತ ನಾಸ್ರಿನ್ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಇದರ ನಡುವೆ ತನ್ನ ಸಂಬಂಧಿಯೇ ಆಗಿದ್ದ ಮೌಮಿತಾ ಎಂಬಾಕೆಯ ಜೊತೆಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಹಲವು ವರ್ಷಗಳಿಂದ ಈ ಅಕ್ರಮ ಸಂಬಂಧ ಮುಂದುವರೆದುಕೊಂಡು ಬಂದಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಈ ವೇಳೆ ನಮ್ಮಿಬ್ಬರ ಸಂಬಂಧದ ಬಗ್ಗೆ ನಿನ್ನ ಪತಿಗೆ ಹೇಳುತ್ತೇನೆ ಎಂದು ಸದ್ದಾಂ ನಾಸ್ರಿನ್ಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಆಕೆ ಇತ್ತೀಚೆಗೆ ಕೆಲ ಆಪ್ತರ ಜೊತೆಗೆ ಸೇರಿಕೊಂಡು ಸದ್ದಾಂನನ್ನು ಹತ್ಯೆಗೈದು, ಬಳಿಕ ಮನೆಯ ಗೋಡೆಯೊಂದರಲ್ಲಿ ಆತನ ಶವ ಇಟ್ಟು ಹೊರಗಿನಿಂದ ಪ್ಲಾಸ್ಟರ್ ಮಾಡಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ