ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದಿದ್ದ ವಿದ್ಯಾರ್ಥಿನಿ ಬಳಿ 10 ಬುಲೆಟ್ಸ್ ಪತ್ತೆ.. ಅಪ್ರಾಪ್ತೆಯ ಕಾರಣ ಕೇಳಿ ಪೊಲೀಸರೇ ಶಾಕ್

Published : Aug 09, 2026, 12:30 PM IST
Bullets In Pocket

ಸಾರಾಂಶ

10 ಬುಲೆಟ್ಸ್ ಜೇಬನಲ್ಲಿ ಇಟ್ಕೊಂಡು ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದ ಅಪ್ರಾಪ್ತೆ.. ಅನುಮಾನಗೊಂಡ ಪೊಲೀಸರು ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಾರಣ ನೀಡಿದ್ದಾಳೆ. ಅದನ್ನು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.. ಸ್ಟೋರಿಯ ವಿವರ ಇಲ್ಲಿದೆ.

ಗೊಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಜೈಲಿನಲ್ಲಿ ಪೊಲೀಸರನ್ನೇ ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ತನ್ನ ಪ್ರಿಯಕರನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳ ಜೇಬಿನಲ್ಲಿ ಬರೋಬ್ಬರಿ 10 ಸಜೀವ ಗುಂಡುಗಳು (Live Cartridges) ಪತ್ತೆಯಾಗಿವೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಗೊಂಡಾದ ವಿಭಾಗೀಯ ಜೈಲಿನಲ್ಲಿ ಹರ್ಷು ಕಶ್ಯಪ್ ಎಂಬ ಕೈದಿಯನ್ನು ಭೇಟಿಯಾಗಲು ಅಪ್ರಾಪ್ತ ಬಾಲಕಿ ಮತ್ತು ಇನ್ನೊಬ್ಬ ವ್ಯಕ್ತಿ ಬಂದಿದ್ದರು. ಜೈಲಿನ ಮುಖ್ಯ ದ್ವಾರದಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವಾಗ ಬಾಲಕಿಯ ನಡವಳಿಕೆ ಅನುಮಾನ ಮೂಡಿಸಿದೆ. ಆಕೆ ನೀಡಿದ ಹೆಸರು ಮತ್ತು ಅವಳ ಬಳಿ ಇದ್ದ ಆಧಾರ್ ಕಾರ್ಡ್‌ನಲ್ಲಿದ್ದ ಹೆಸರು ತಾಳೆಯಾಗಲಿಲ್ಲ. ಇದು ಜೈಲು ಸಿಬ್ಬಂದಿಯನ್ನು ಎಚ್ಚರಿಸಿತು.

ಅನುಮಾನಗೊಂಡ ಮಹಿಳಾ ಸಿಬ್ಬಂದಿ ಬಾಲಕಿಯನ್ನು ತಪಾಸಣೆ ನಡೆಸಿದಾಗ, ಅವಳ ಜೇಬಿನಲ್ಲಿ 10 ಸಜೀವ ಗುಂಡುಗಳು ಪತ್ತೆಯಾಗಿವೆ. ಇದರ ಜೊತೆಗೆ ನಕಲಿ ಆಧಾರ್ ಕಾರ್ಡ್ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಕ್ಷಣವೇ ಜೈಲರ್ ಅಫ್ತಾಬ್ ಆಲಂ ಅನ್ಸಾರಿ ಅವರು ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ಅಸಲಿ ಗುರುತನ್ನು ಬಿಚ್ಚಿಟ್ಟಿದ್ದಾಳೆ. ಗುಂಡುಗಳ ಬಗ್ಗೆ ಕೇಳಿದಾಗ ಆಕೆ ನೀಡಿದ ಕಾರಣ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಈ ಗುಂಡುಗಳು ನನ್ನ ತಂದೆಯ ಪರವಾನಗಿ ಹೊಂದಿದ ಪಿಸ್ತೂಲ್‌ನದ್ದು. ನನ್ನ ತಂದೆಗೆ ಸಿಟ್ಟು ಜಾಸ್ತಿ. ನಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಅವರಿಗೆ ತಿಳಿದರೆ, ಅವರು ಸಿಟ್ಟಿನಲ್ಲಿ ನನ್ನನ್ನು ಅಥವಾ ಯಾರನ್ನಾದರೂ ಶೂಟ್ ಮಾಡಬಹುದು ಎಂದು ಭಯವಿತ್ತು. ಹಾಗಾಗಿ ಅವರು ಅನಾಹುತ ಮಾಡಬಾರದು ಎಂಬ ಉದ್ದೇಶದಿಂದ ಪಿಸ್ತೂಲ್‌ನಲ್ಲಿದ್ದ ಗುಂಡುಗಳನ್ನು ತೆಗೆದು ನನ್ನ ಜೇಬಿನಲ್ಲಿಟ್ಟುಕೊಂಡು ಬಂದೆ ಎಂದು ಆಕೆ ಸಮರ್ಥಿಸಿಕೊಂಡಿದ್ದಾಳೆ.

ಸದ್ಯ ಪೊಲೀಸರು ಬಾಲಕಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ನಕಲಿ ಆಧಾರ್ ಕಾರ್ಡ್ ಬಳಕೆ ಮತ್ತು ಸಜೀವ ಗುಂಡುಗಳನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಜೈಲಿನಂತಹ ಅತೀ ಹೆಚ್ಚು ಭದ್ರತೆ ಇರುವ ಜಾಗಕ್ಕೆ ಗುಂಡುಗಳನ್ನು ತಂದಿರುವುದು ದೊಡ್ಡ ಸುರಕ್ಷತಾ ಲೋಪ ಎಂದೂ ಪರಿಗಣಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?
ಕೃತಕ ಬುದ್ಧಿಮತ್ತೆ (AI) ಬಳಸಿ ವೈರಸ್‌ಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ