ನವದೆಹಲಿ(ಜು.22): ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕವೂ ಸಿಧು ಹಾಗು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಣಗಳ ನಡುವೆ ‘ಸಂಘರ್ಷ’ ಮುಂದುವರಿದಿದೆ. ಸುಮಾರು 60 ಕಾಂಗ್ರೆಸ್ ಶಾಸಕರು ಬುಧವಾರ ಸಿಧು ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿದ್ದಾರೆ. ಈ ಮೂಲಕ ಸಿಧು ಬಣವು ತನ್ನ ಬಳಿ ‘ಬಹುಮತ’ ಇದೆ ಎಂಬ ಬಲಪ್ರದರ್ಶನ ಮಾಡಿದೆ.
ಪಂಜಾಬ್ ವಿಧಾನಸಭೆಯಲ್ಲಿ 80 ಕಾಂಗ್ರೆಸ್ ಶಾಸಕರಿದ್ದಾರೆ. ಈ ಪೈಕಿ 60 ಮಂದಿ ಬಸ್ಸಿನಲ್ಲಿ ಆಗಮಿಸಿ ಸಿಧು ಭೇಟಿ ಮಾಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಶುಭ ಕೋರಿದ್ದು ವಿಶೇಷ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ನೇಮಕ!
ಆದರೆ ಸಿಧು ಅಧ್ಯಕ್ಷರಾಗಿ 4 ದಿನ ಕಳೆದರೂ ಅಮರೀಂದರ್ ಅವರು ಸಿಧುರನ್ನು ಭೇಟಿ ಮಾಡಿಲ್ಲ. ‘ಸಿಧು ಈ ಹಿಂದೆ ನನ್ನ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಅವರು ಕ್ಷಮೆ ಕೇಳದ ಹೊರತು ಭೇಟಿ ಸಾಧ್ಯವಿಲ್ಲ’ ಎಂಬುದು ಅಮರೀಂದರ್ ಪಟ್ಟು.
ಆದರೆ ಸಿಎಂ ಅವರ ಈ ನಿಲುವಿಗೆ ಸಚಿವ ಸುಖಜಿಂದರ್ ಸಿಂಗ್ ರಂಧಾವಾ ಸೇರಿದಂತೆ ಕೆಲ ಶಾಸಕರು ಆಕ್ಷೇಪಿಸಿದ್ದಾರೆ. ‘ಸಿಎಂ ಅವರ ಈ ನಡೆ ಸ್ವೀಕಾರಾರ್ಹವಲ್ಲ. ಈ ಹಿಂದಿನ ಅಧ್ಯಕ್ಷರ ಜತೆ ಭಿನ್ನಮತ ಮರೆತಂತೆ ಈ ಸಲವೂ ಅವರು ನಡೆದುಕೊಳ್ಳುತ್ತಿಲ್ಲ ಏಕೆ?’ ಎಂದು ಆಕ್ಷೇಪಿಸಿದ್ದಾರೆ. ಸಿಧು ಕ್ಷಮೆ ಕೇಳಬೇಕಿಲ್ಲ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕನೂ ಆದ ಕಾಂಗ್ರೆಸ್ಸಿಗ ಪರ್ಗತ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ