'ಬೆಡ್‌' ಪರ್ಫಾಮೆನ್ಸ್ ಮಾಡಿದ್ದಕ್ಕೆ ಶಾಲೆಯ 13 ಶಿಕ್ಷಕಿಯರಿಗೆ ಇಲಾಖೆಯಿಂದ ಶಿಕ್ಷೆ!

Published : May 29, 2024, 07:23 PM IST
'ಬೆಡ್‌' ಪರ್ಫಾಮೆನ್ಸ್ ಮಾಡಿದ್ದಕ್ಕೆ ಶಾಲೆಯ 13 ಶಿಕ್ಷಕಿಯರಿಗೆ ಇಲಾಖೆಯಿಂದ ಶಿಕ್ಷೆ!

ಸಾರಾಂಶ

ಇಲ್ಲಿನ ಶಾಲೆಯೊಂದರಲ್ಲಿ ಬೆಡ್‌ ಪರ್ಫಾಮೆನ್ಸ್‌ ನೀಡಿದ್ದಕ್ಕೆ 13 ಶಿಕ್ಷಕಿಯರು ಶಿಕ್ಷೆಗೊಳಗಾಗಿದ್ದಾರೆ ಅನ್ನೋ ವಿಚಾರ ಎಲ್ಲೆಡೆ ವೈರಲ್‌ ಆಗ್ತಿದೆ. ಏನಿದು ಬೆಡ್‌ ಪರ್ಫಾಮೆನ್ಸ್ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. 

ಪಾಟ್ನಾ: ಇಲ್ಲಿನ ಶಾಲೆಯೊಂದರಲ್ಲಿ ಬೆಡ್‌ ಪರ್ಫಾಮೆನ್ಸ್‌ ನೀಡಿದ್ದಕ್ಕೆ 13 ಶಿಕ್ಷಕಿಯರು ಶಿಕ್ಷೆಗೊಳಗಾಗಿದ್ದಾರೆ ಅನ್ನೋ ವಿಚಾರ ಎಲ್ಲೆಡೆ ವೈರಲ್‌ ಆಗ್ತಿದೆ. ಏನಿದು ಬೆಡ್‌ ಪರ್ಫಾಮೆನ್ಸ್ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 13 ಶಿಕ್ಷಕರು ಕರ್ತವ್ಯಕ್ಕೆ ಗೈರುಹಾಜರಾದ ನಂತರ ಅವರನ್ನು ಶಿಕ್ಷೆಗೆ ಒಳಪಡಿಸಲಾಯಿತು. ಬ್ಯಾಡ್‌ ಪರ್ಫಾಮೆನ್ಸ್‌ನಿಂದಾಗಿ ಶಿಕ್ಷಣ ಇಲಾಖೆ ಈ ಹದಿಮೂರು ಶಿಕ್ಷಕಿಯರ ಸಂಬಳವನ್ನು ಕಡಿತಗೊಳಿಸಿದೆ. ಆದರೆ ರಿಪೋರ್ಟ್‌ ಕಾರ್ಡ್‌ನಲ್ಲಿ ಬ್ಯಾಡ್‌ ಪರ್ಫಾಮೆನ್ಸ್ ಬದಲು, ಬೆಡ್ ಪರ್ಫಾಮೆನ್ಸ್ ಎಂದು ನಮೂದಿಸಿ ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಮೇ 2 ರಂದು ಜಮುಯಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹಠಾತ್ ತಪಾಸಣೆ ನಡೆಸಿದರು, ಈ ಸಂದರ್ಭದಲ್ಲಿ ಹಲವಾರು ಶಿಕ್ಷಕರು ಕರ್ತವ್ಯಕ್ಕೆ ಗೈರುಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಶಿಕ್ಷಕರ ಕಾರ್ಯನಿರ್ವಹಣೆಯೂ ತೃಪ್ತಿಕರವಾಗಿಲ್ಲ ಎಂದು ಕಂಡುಬಂದಿದೆ.

ಕುಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಹೈಸ್ಕೂಲ್‌ ಶಿಕ್ಷಕರ ರಜೆ 15 ದಿನ ಕಟ್‌..!

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಅಧಿಕೃತ ಪತ್ರವೊಂದನ್ನು ನೀಡಿದ್ದಾರೆ. ಆದರೆ, ಪತ್ರದ ವಿಷಯವು ಶಿಕ್ಷಕರಿಗಿಂತ ಶಿಕ್ಷಣ ವಿಭಾಗವನ್ನು ಹೆಚ್ಚು ಅವಮಾನಕ್ಕೆ ಒಳಗಾಗುವಂತೆ ಮಾಡಿದೆ.

ಪತ್ರದ ಪ್ರಕಾರ, 13 ಶಿಕ್ಷಕರ ಹಾಸಿಗೆಯ ಕೆಲಸಕ್ಕಾಗಿ ಸಂಬಳವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಡಿಇಒ ಕಚೇರಿ ಶೀಘ್ರವೇ ಸ್ಪಷ್ಟನೆ ನೀಡಿದೆ. DEO ಪ್ರಕಾರ, ಟೈಪಿಂಗ್ ದೋಷದಿಂದಾಗಿ ಕೆಟ್ಟ ಕಾರ್ಯಕ್ಷಮತೆಯನ್ನು 'ಬೆಡ್ ಪರ್ಫಾರ್ಮೆನ್ಸ್' ಎಂದು ತಪ್ಪಾಗಿ ಟೈಪ್ ಮಾಡಲಾಗಿದೆ ಎಂದು ವಿವರಿಸಿದೆ. ಇಂಥಾ ತಪ್ಪುಗಳು ಇಲಾಖೆಯ ವಿಶ್ವಾಸಾರ್ಹತೆ ಮತ್ತು ಶಿಕ್ಷಕರ ಘನತೆಗೆ ಧಕ್ಕೆ ತರುತ್ತವೆ ಎಂದು ಶಿಕ್ಷಕ ಸಂಘಗಳು ಕಳವಳ ವ್ಯಕ್ತಪಡಿಸಿವೆ.

ಗಡಿಜಿಲ್ಲೆ ಚಾಮರಾಜನಗರದಲ್ಲಿ ಮತ್ತೆ ಶಿಕ್ಷಕರ ಕೊರತೆ; ಎಸ್‌ಎಸ್‌ಎಲ್‌ಸಿ ಫಲಿತಾಂಶ ಭಾರೀ ಕುಸಿತ!

ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ನಡೆಯದಂತೆ ಕ್ರಮಕೈಗೊಳ್ಳುವುದಾಗಿ ಹಾಗೂ ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಿದ್ದುಪಡಿಯನ್ನು ಅಧಿಕೃತವಾಗಿ ಅಂಗೀಕರಿಸಿದ ನಂತರ ಪೀಡಿತ ಶಿಕ್ಷಕರು ತಮ್ಮ ಕಡಿತಗೊಳಿಸಿದ ವೇತನವನ್ನು ಪಡೆಯುತ್ತಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!