ಗರ್ಭಿಣಿ ಸತ್ತಿದ್ದಕ್ಕೆ ನರ್ಸ್ ಅನ್ನು ಮಹಡಿಯಿಂದ ಎಸೆದು ಕುಟುಂಬಸ್ಥರ ಸೇಡು!

Published : May 29, 2024, 06:50 PM ISTUpdated : May 29, 2024, 07:23 PM IST
ಗರ್ಭಿಣಿ ಸತ್ತಿದ್ದಕ್ಕೆ ನರ್ಸ್ ಅನ್ನು ಮಹಡಿಯಿಂದ ಎಸೆದು ಕುಟುಂಬಸ್ಥರ ಸೇಡು!

ಸಾರಾಂಶ

ಹೊಟ್ಟೆನೋವಿನಿಂದ ಖಾಸಗಿ ನರ್ಸಿಂಗ್ ಹೋಮ್‌ ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ  ಕುಟುಂಬದ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದಲ್ಲಿ ನಡೆದಿದೆ.

ಪಾಟ್ನಾ (ಮೇ.29): ಹೊಟ್ಟೆನೋವಿನಿಂದ ಖಾಸಗಿ ನರ್ಸಿಂಗ್ ಹೋಮ್‌ ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯ ಕುಟುಂಬದ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ.

30 ನಿಮಿಷದಲ್ಲಿ ಸ್ಫೋಟಿಸುವ ಬಾಂಬ್‌ ಬೆದರಿಕೆ: ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು, ರಕ್ಕೆ ಮೇಲೆ ಬಂದ ವೃದ್ಧೆ

ಗುಡಿಯಾ ಕುಮಾರಿ ಎಂಬಾಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದರಿಂದ ಕೋಪಗೊಂಡು ಆಕೆಯ ಕುಟುಂಬಸ್ಥರು, ನರ್ಸ್ ನೀಡಿದ್ದ ಚುಚ್ಚು ಮುದ್ದಿನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ನರ್ಸ್‌ನ್ನು ಮಹಡಿಯಿಂದ ತಳ್ಳಿದ್ದಾರೆ. ಅದೃಷ್ಟವಶಾತ್ ನರ್ಸ್ ಪೂನಮ್ ಕುಮಾರಿ (35) ಬದುಕುಳಿದಿದ್ದಾರೆ.ಸದ್ಯ ಆಕೆಯ ಪರಿಸ್ಥಿತಿ ಮಾತ್ರ ಗಂಭೀರವಾಗಿದೆ.

ಕ್ಯಾನ್ಸರ್‌ ಆತಂಕದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌, ಜಾಮೀನು ವಿಸ್ತರಣೆ ನಿರಾಕರಿಸಿದ ಸುಪ್ರೀಂ

ಬಿಹಾರ ಪೊಲೀಸ್ ಠಾಣೆಯ ಗೃಹ ಅಧಿಕಾರಿ (ಎಸ್‌ಎಚ್‌ಒ) ರಮಾಶಂಕರ್ ಸಿಂಗ್,  ರೋಗಿಯ ಸಾವಿನ ನಂತರ ಕೋಪಗೊಂಡ ಕುಟುಂಬ ಸದಸ್ಯರು ಕ್ಲಿನಿಕ್ ಅನ್ನು ಧ್ವಂಸಗೊಳಿಸಿದರು.ಗರ್ಭಿಣಿ ಮಹಿಳೆಯ ಸಾವು ಸಂಬಂಧಿಕರಿಂದ ಹಿಂಸಾಚಾರಕ್ಕೆ ಕಾರಣವಾಯಿತು. ನರ್ಸ್ ಅನ್ನು ಬಿಹಾರ ನರ್ಸಿಂಗ್ ಹೋಂನ 1 ನೇ ಮಹಡಿಯಿಂದ ಎಸೆದರು.  ಗರ್ಭಿಣಿಯ ಸಾವು ನಂತರ ಆಕೆಯ ಕುಟುಂಬವು ಆಸ್ಪತ್ರೆಯ ಅನೇಕ ಸೌಲಭ್ಯವನ್ನು ಧ್ವಂಸಗೊಳಿಸಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?