
ನವದೆಹಲಿ(ಆ.24): ಡೆಲ್ಟಾಗಿಂತ ಹೊರತಾದ ಕೊರೋನಾ ವೈರಸ್ನ ಹೊಸ ರೂಪಾಂತರಿ ಸೃಷ್ಟಿ ಆಗದೆ 3ನೇ ಅಲೆಯು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ತಿಯಾಗಿ ಗೋಚರವಾಗಲಿದೆ. ನವೆಂಬರ್ ವೇಳೆಗೆ ಅತ್ಯುಚ್ಛ್ರಾಯ ಸ್ಥಿತಿಗೆ ತಲುಪುವ ಭೀತಿಯಿದೆ ಎಂದು ಕೊರೋನಾ ಕುರಿತ ಲೆಕ್ಕಾಚಾರದಲ್ಲಿ ಸಕ್ರಿಯರಾಗಿರುವ ವಿಜ್ಞಾನಿ ಮಣೀಂದ್ರ ಅಗರ್ವಾಲ್ ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಹೆಚ್ಚಳದ ಮುನ್ಸೂಚನೆ ನೀಡಲು ರಚನೆಯಾಗಿರುವ ಮೂವರು ತಜ್ಞ ಸದಸ್ಯರ ತಂಡದ ಪೈಕಿ ಒಬ್ಬರಾದ ಐಐಟಿ ಕಾನ್ಪುರದ ವಿಜ್ಞಾನಿ ಅಗರ್ವಾಲ್ ಅವರು, ‘ಡೆಲ್ಟಾತಳಿಗಿಂತಲೂ ಅಪಾಯಕಾರಿಯಾದ ರೂಪಾಂತರಿ ವೈರಸ್ ರೂಪ ತಾಳದಿದ್ದರೆ, ದೇಶಕ್ಕೆ 3ನೇ ಅಲೆಯ ತೀವ್ರತೆ ತಾಗದು.
3ನೇ ಅಲೆ ಅಪ್ಪಳಿಸಿದರೂ ಅದು 2ನೇ ಅಲೆಯಷ್ಟುತೀವ್ರವಾಗಿರಲ್ಲ. ಬದಲಾಗಿ ಒಂದನೇ ಅಲೆಯಷ್ಟುತೀವ್ರವಿರಬಹುದು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ