ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!

Published : Nov 27, 2023, 03:37 PM ISTUpdated : Nov 27, 2023, 03:41 PM IST
ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!

ಸಾರಾಂಶ

ಮದ್ರಾಸ್ ಈಗ ಚೆನ್ನೈ, ಬಾಂಬೆ-ಮುಂಬೈ ಆಗಿ ಬದಲಾಗಿದೆ. ಹೀಗೆ ಹೈದರಾಬಾದ್ ಭಾಗ್ಯನಗರವಾಗಿ ಮರುನಾಮಕರಣ ಗೊಳ್ಳುವುದು ಖಚಿತ. ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಘೋಷಣೆ ಹೊರಬೀಳಲಿದೆ ಅನ್ನೋ ಬಿಜೆಪಿ ಘೋಷಣೆ ಇದೀಗ ಬಾರಿ ಸಂಚಲನ ಸಷ್ಟಿಸಿದೆ.

ಹೈದರಾಬಾದ್(ನ.27) ಹೈದರಾಬಾದ್ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನಗರವನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವುದಾಗಿ ಘೋಷಣೆ ಮಾಡಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿಕ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಜಿ ಕಿಶನ್ ರೆಡ್ಡಿ ಮರುನಾಮಕರಣ ಖಚಿತ ಎಂದು ಘೋಷಣೆ ಮಾಡಿದ್ದಾರೆ. ಕೆಲ ನಗರಗಳನ್ನು ಈಗಾಗಲೇ ಮರುನಾಮಕರಣ ಮಾಡಲಾಗಿದೆ. ಬಾಂಬೆ, ಕಲ್ಕತ್ತಾ ಬಳಿಕ ಇದೀಗ ಹೈದರಾಬಾದ್ ಭಾಗ್ಯನಗರವಾಗಿ ಮರುನಾಮಕರಣಗೊಳ್ಳಲಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಿಶನ್ ರೆಡ್ಡಿ, ಹಿಮಂತ ಬಿಶ್ವಾ ಶರ್ಮಾ ಹಾಗೂ ಯೋಗಿ ಆದಿತ್ಯನಾಥ್ ಈಗಾಗಲೇ ಮರುನಾಮಕರಣ ಘೋಷಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮರುನಾಮಕರಣ ಖಚಿತ ಎಂದಿದ್ದಾರೆ. ಮದ್ರಾಸ್ ನಗರವನ್ನು ಚೆನ್ನೈ ಎಂದು, ಬಾಂಬೆ-ಮುಂಬೈ ಆಗಿ, ಕಲ್ಕತ್ತಾವನ್ನು ಕೋಲ್ಕತಾ ಎಂದು ಮರುನಾಮಕರಣ ಮಾಡಲಾಗಿದೆ. ರಾಜಪಥವನ್ನು ಕರ್ತವ್ಯಪಥ ಎಂದು ಕೇಂದ್ರ ಬಿಜೆಪಿ ಮರುನಾಮಕರಣ ಮಾಡಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ

 

ತೆಲಂಗಾಣ ಚುನಾವಣೆಗೆ ಅಕ್ರಮ ಹಣ ವರ್ಗಾವಣೆ?: ಜಮೀರ್ ಅಹಮ್ಮದ್ ತಂಗಿದ್ದ ಹೋಟೆಲ್‌ ಮೇಲೆ ಪೊಲೀಸರ ದಾಳಿ

ಯಾರು ಈ ಹೈದರ್. ಆತನ ಹೆಸರನ್ನು ನಗರಕ್ಕೆ ಏಕೆ ಇಡಬೇಕು. ಹೈದರಾಬಾದ್ ಹೆಸರಿಗೂ ಮೊದಲು ಇದು ಭಾಗ್ಯನಗರವಾಗಿತ್ತು. ನಿಜಾಮರ ಆಡಳಿತದಲ್ಲಿ ಭಾಗ್ಯನಗರವನ್ನು ಹೈದರಾಬಾದ್ ಎಂದು ಮರುನಾಮಕರಣ ಮಾಡಲಾಗಿದೆ. ಮದ್ರಾಸ್ ನಗರನ್ನು ಚೆನ್ನೈ ಎಂದು ಮರುನಾಮಕರಣ ಮಾಡಿದ್ದು ಬಿಜೆಪಿಯಲ್ಲ. ಚೆನ್ನೈ ಮರುನಾಮಕರಣವನ್ನು ಎಲ್ಲರೂ ಬೆಂಬಲಿಸಿದ್ದಾರೆ. ಇದೀಗ ಹೈದರಾಬಾದ್ ಭಾಗ್ಯನಗರ ಅನ್ನೋ ಮರುನಾಮಕರಣಕ್ಕೆ ಮಾತ್ರ ಕೆಲವರು ವಿರೋಧಿಸುತ್ತಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.

ಗುಲಾಮಿ ಸಂಸ್ಕೃತಿಯಲ್ಲಿ ಜೀವನ ಸಾಗಿಸುವ ಕಾಲ ಇದಲ್ಲ. ಇದು ಸ್ವಾವಲಂಭಿ ಭಾರತ. ಯಾವುದೇ ಗುಲಾಮಿ ಪದ್ದತಿಯನ್ನು ಉಳಿಸುವುದಿಲ್ಲ ಎಂದು ಜಿ ಕಿಶನ ರೆಡ್ಡಿ ಹೇಳಿದ್ದಾರೆ. 

ಒವೈಸಿ ಪೊಲೀಸ್ ಬೆದರಿಕೆ ಪ್ರಕರಣ ಅಸ್ಸಾಂನಲ್ಲಾಗಿದ್ರೆ ಐದೇ ನಿಮಿಷದಲ್ಲಿ ಸೆಟ್ಲ್; ಸಿಎಂ ಹಿಮಂತ ಎಚ್ಚರಿಕೆ!

ಇತ್ತೀಚೆಗೆ ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಭಾಗ್ಯನಗರ ಹೇಳಿಕೆ ನೀಡಿದ್ದರು. ‘ಕಾಂಗ್ರೆಸ್‌ ಇಮದಿನ ಹೈದರಾಬಾದ್‌ ನಗರವನ್ನು ನಿರ್ಮಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈ ನಗರವನ್ನು ಭಾಗ್ಯಲಕ್ಷ್ಮೀ ದೇವತೆಯ ಹೆಸರಿನಲ್ಲಿ ಭಾಗ್ಯನಗರ ಎಂದು ನಿರ್ಮಿಸಿ ಇಲ್ಲಿನ ರಾಮಭಕ್ತ ಮತದಾರರಿಗೆ ಅರ್ಪಿಸಲಾಗುವುದು’ ಎಂದರು. ಇದೇ ವೇಳೆ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಬಣ್ಣಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!