ನೂರಾರು ಜನರ ಜೀವ ಉಳಿಸಿದ ಪಬ್ ಜಿ, ಆಡೋರಿಗೆ ಇನ್ನುಂದೆ ಬೈಯಂಗಿಲ್ಲ!

Published : May 10, 2020, 04:30 PM ISTUpdated : May 10, 2020, 04:56 PM IST
ನೂರಾರು ಜನರ ಜೀವ ಉಳಿಸಿದ ಪಬ್ ಜಿ, ಆಡೋರಿಗೆ ಇನ್ನುಂದೆ ಬೈಯಂಗಿಲ್ಲ!

ಸಾರಾಂಶ

ವಿಶಾಖಪಟ್ಟಣ ಅನಿಲ ದುರಂತ/ ನೂರಾರು ಜನರ ಪ್ರಾಣ ಕಾಪಾಡಿದ ಪಬ್ ಜಿ / ಗೆಳೆಯರಿಬ್ಬರ ಸಾಹಸ/ ಪೊಲೀಸರಿಗೆ ಮೊದಲು ಮಾಹಿತಿ ತಿಳಿಸಿದ ಯುವಕ

ವಿಶಾಖಪಟ್ಟಣ(ಮೇ 10)  ಪಬ್ ಜಿ ಎಂಬ ಮೊಬೈಲ್ ಗೇಮ್ ಆಡುವವರನ್ನು ಸಿಕ್ಕಾಪಟ್ಟೆ ಬೈಯುತ್ತಾರೆ. ಅವರಿಗೂ ಒಂದು  ಕಾಲ ಬರುತ್ತದೆ ಈ ಘಟನೆಯೇ ಸಾಕ್ಷಿ. ಆಂಧ್ರ ಪ್ರದೇಶದ ವಿಶಾಖಪಟ್ಟಣ ಘಟನೆಯಲ್ಲಿ ಅನೇಕ ಜನರ ಪ್ರಾಣ ಉಳಿಸಲು ಪಬ್ ಜಿ ಗೇಮ್ ಕಾರಣ! ಹೌದು ಈ ಸುದ್ದಿಯನ್ನು ನಂಬಲೇಬೇಕು .

ಆಗಿದ್ದಿಷ್ಟು..  ಗ್ಯಾಸ್ ಲೀಕ್  ಆದ ಕಂಪನಿಯ ಸುತ್ತಲಿನ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಸುರೇಶ್ ಮಧ್ಯರಾತ್ರಿಯಾದರೂ ಪಬ್ ಜಿ ಆಡುತ್ತಿದ್ದ. ಗ್ಯಾಸ್ ಲೀಕ್ ಆದ ನಂತರ ಈತನ ಮೂಗಿಗೆ ವಾಸನೆ ಬಡಿದಿದೆ.  ಸುರೇಶ್ ಸ್ನೇಹಿತ ಕಿರಣ ಕರೆ ಮಾಡಿ ಗ್ಯಾಸ್ ವಾಸನೆ ಬಗ್ಗೆ ಹೇಳಿದ್ದಾನೆ.

ಉಸಿರಾಡುವ ಗಾಳಿಯೇ ವಿಷವಾದಾಗ, ವಿಶಾಖಪಟ್ಟಣದ ಕತೆ!

ತಕ್ಷಣ ಎಚ್ಚೆತ್ತುಕೊಂಡ ಸುರೇಶ್ ಪೊಲೀಸರಿಗೆ ವಿಷಯ ಮುಟ್ಟಿಸಿದ. ಇದರ ಪರಿಣಾಮವಾಗಿಯೇ ಸಾಕಷ್ಟು ಜನರನ್ನು ಹೊರಗೆ ತರಲಾಯಿತು.  ಪಬ್ ಜಿ ಆಡುತ್ತಿದ್ದ ಸುರೇಶ್ ಅವರಿಗೆ ಒಂದು ಅಭಿನಂದನೆ ಹೇಳಲೇಬೇಕು. 

11 ಮಂದಿಯ ಸಾವಿಗೆ ಕಾರಣವಾದ ವೈಜಾಗ್‌ ವಿಷಾನಿಲ ಸೋರಿಕೆ ಕಾರಣವಾಗಿತ್ತು. ಗ್ಯಾಸ್ ಲೀಕ್ ಆದ  ಎಲ್‌ಜಿ ಪಾಲಿಮರ್ಸ್‌ ಇಂಡಿಯಾಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ದಂಡ ವಿಧಿಸಿತ್ತು. 

ಅಲ್ಲದೆ ಈ ನಡುವೆ, ವಿಷಾನಿಲ ಸೋರಿಕೆ ಕುರಿತು ತನಿಖೆ ನಡೆಸಲು ಅತ್ಯುನ್ನತ ಸಮಿತಿಯೊಂದನ್ನು ಆಂಧ್ರ ಮುಖ್ಯ ಕಾರ್ಯದರ್ಶಿ ನೀಲಂ ಸಾಹ್ನೆ ಅವರು ರಚನೆ ಮಾಡಿದ್ದಾರೆ. ವಿಷಾನಿಲದಿಂದ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ದೀರ್ಘಾವಧಿಯಲ್ಲಿ ಯಾವುದಾದರೂ ಪರಿಣಾಮಗಳು ಆಗುತ್ತವೆಯೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್