ರೈತರ ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ಬಂದ್‌ ಯಾಕೆ?  ಸುಪ್ರೀಂ ಅಚ್ಚರಿ ಜತೆ ಎಚ್ಚರಿಕೆ

Published : Sep 30, 2021, 06:23 PM ISTUpdated : Sep 30, 2021, 06:25 PM IST
ರೈತರ ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ಬಂದ್‌ ಯಾಕೆ?  ಸುಪ್ರೀಂ ಅಚ್ಚರಿ ಜತೆ ಎಚ್ಚರಿಕೆ

ಸಾರಾಂಶ

* ರೈತರ ಪ್ರತಿಭಟನೆ ಹೆಸರಿನಲ್ಲಿ ಹೆದ್ದಾರಿ ತಡೆ * ನಿರಂತರವಾಗಿ ಹೆದ್ದಾರಿ ಬಂದ್ ಮಾಡಿದರೆ ಹೇಗೆ? * ಕಾನೂನು ಜಾರಿ ಮಾಡುವುದು ನ್ಯಾಯಾಂಗದ ಕೆಲಸ

ನವದೆಹಲಿ(ಸೆ. 30) ಕೇಂದ್ರ ಸರ್ಕಾರದ(Union Govt)  ಕೃಷಿ ಕಾಯಿದೆ ತಿದ್ದುಪಡಿ ವಿರೋಧಿಸಿ ರೈತ (Farmars) ಸಂಘಟನೆಗಳು ಪ್ರತಿಭಟನೆ ಮಾಡಿಕೊಂಡೇ ಬಂದಿವೆ. ಇದೆ ಕಾರಣಕ್ಕೆ ಹಲವು ಸಾರಿ ಭಾರತ್ ಬಂದ್ ಗೆ ಕರೆಯನ್ನು ನೀಡಿದ್ದವು. 

ಪ್ರತಿಭಟನೆ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು(Highway) ಸದಾ ಕಾಲ ಅರ್ಧದಷ್ಟು ಬಂದ್ ಮಾಡುವ ವಿಚಾರದ ಬಗ್ಗೆ ಸುಪ್ರೀಂ(Supreme Court) ಮಾತನಾಡಿದೆ.  ಪ್ರತಿಭಟನೆ ಹೆಸರಿನಲ್ಲಿ ಹೆದ್ದಾರಿಗಳಿಗೆ ಯಾಕೆ ನಿರ್ಬಂಧ ಹಾಕುತ್ತೀರಿ? ಇದು ಎಲ್ಲಿ ಕೊನೆಯಾಗುತ್ತದೆ ಎಂಬ ಅರಿವು ನಿಮಗೆ ಇದೇಯಾ? ಎಂದು ಸುಪ್ರೀಂ ಕೋರ್ಟ್  ನ್ಯಾಯಪೀಠದ ಎಸ್‌ಕೆ  ಕೌಲ್ ಪ್ರಶ್ನೆ ಮಾಡಿದ್ದಾರೆ.

ರೈತರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೋಯ್ಡಾದ ನಿವಾಸಿ ಮೋನಿಕಾ ಅಗರ್‌ ವಾಲ್ ಸಲ್ಲಿಕೆ ಮಾಡಿದ್ದ ಮನವಿ ವಿಚಾರಣೆ  ವೇಳೆ ನ್ಯಾಯಾಲಯ ಮೇಲಿನ ಮಾತು ಹೇಳಿದೆ. 

ಭಾರತ್ ಬಂದ್ ಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ಹೆದ್ದಾರಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ನಿರ್ವಾಹಕ ಮತ್ತು ಸರ್ಕಾರದ ಕೆಲಸವಾಗಿದೆ. ಇದಕ್ಕೆಲ್ಲ ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ.  ಕಾರ್ಯಾಂಗದ ವ್ಯಾಪ್ತಿಗೆ ಪ್ರವೇಶಿಸಿದೆ ಎಂಬ ಮಾತು ಬರುತ್ತದೆ.  ಹಾಗಾಗಿ ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರವನ್ನು ನ್ಯಾಯಾಲಯದ ಅಂಗಣದವರೆಗೂ ತರಬೇಡಿ ಎಂದಿದೆ.  ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ಕಾರಣಕ್ಕೆ ಹೆದ್ದಾರಿಯಲ್ಲೇ  ಹಲವು ದಿನಗಳ ಕಾಲ ಟ್ರಾಕ್ಟರ್ ಗಳನ್ನು ನಿಲ್ಲಿಸಿಕೊಳ್ಳಲಾಗಿತ್ತು. 

ಯಾವ ಆಧಾರ  ಇಟ್ಟುಕೊಂಡು ಹೆದ್ದಾರಿ ಬಂದ್ ಮಾಡಲು ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಲಯ  ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಾರ್ಯಾಂಗದ ಜವಾಬ್ದಾರಿ ಎಂದು ತಿಳಿಸಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್