ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್ ರಾಜ್ ಇನ್ನಿಲ್ಲ

Suvarna News   | Asianet News
Published : Aug 17, 2020, 07:27 PM ISTUpdated : Aug 17, 2020, 07:54 PM IST
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್ ರಾಜ್ ಇನ್ನಿಲ್ಲ

ಸಾರಾಂಶ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್ ರಾಜ್ ನಿಧನ/ ಹೃದಯಾಘಾತದಿಂದ ಹಿರಿಯ ಗಾಯಕ ನಿಧನ/  ಅಭಿಮಾನಿಗಳಿಂದ ನಮನ/ ಅಮೆರಿಕದ ನ್ಯೂಜರ್ಸಿಯಲ್ಲಿದ್ದ ಗಾಯಕ/ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಂದ  ಗಾಯಕನ ಸ್ಮರಣೆ

ನವದೆಹಲಿ(ಆ. 17)  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ಅಮೆರಿಕಾದ ನ್ಯೂ ಜರ್ಸಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ಪುರಸ್ಕಾರಕ್ಕೆ ಪಾತ್ರವಾಗಿದ್ದ ಗಾಯಕ ನಿಧನರಾಗಿದ್ದಾರೆ. ಹಿಂದೂಸ್ತಾನಿ ಸಂಗೀತದ ಶಕ್ತಿಯನ್ನು ಇಡೀ ಪ್ರಪಂಚಕ್ಕೆ ಮತ್ತೆ ಮತ್ತೆ ಸಾರಿದ ಗಾಯಕ ಇನ್ನು ನೆನಪು ಮಾತ್ರ. 

ಸಣ್ಣ ವಯಸ್ಸಿಗೆ ಹೃದಯಾಘಾತ; ಕಾರಣಗಳು ಹಲವು

80 ವರ್ಷಗಳ  ಸಂಗೀತ ಜೀವನದಲ್ಲಿ ಜಸ್ ರಾಜ್ ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ.  ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಜಸ್ ರಾಜ್ 1930 ರಲ್ಲಿ ಹರ್ಯಾಣ ರಾಜ್ಯದ ಹಿಸ್ಸಾರ್ ನಲ್ಲಿ ಜನಿಸಿದರು.ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತಮ್ಮ ಸಹೋದರ ಪಂಡಿತ್ ಮಣಿರಾಮ್ ರವರಿಂದ ಪಡೆದರು. ಹಲವಾರು ಪ್ರಶಸ್ತಿಗಳನ್ನು ಪಡೆದ ಜಸ್ ರಾಜ್ ಭಾರತದ ಉದ್ದಗಲ ಜನಪ್ರಿಯತೆ ಗಳಿಸಿಕೊಂಡರು.  ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಜಸ್ ರಾಜ್ ಬಳಿ ಶಿಷ್ಯರಾಗಿ ಅಧ್ಯಯನ ಮಾಡಿದ್ದಾರೆ. ಪ್ರಧಾನಿ ನರೇಂಧ್ರ ಮೋದಿ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಜಸ್‌ ರಾಜ್ ಅವರಿಗೆ ನಮನ ಸಲ್ಲಿಸಿ ಸ್ಮರಣೆ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಮಾನ್ಯತೆ: ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಜಸ್ ರಾಜ್ ಅವರಿಗೆ ವಿಶೇಷ ಗೌರವ ಒಂದನ್ನು ಸಲ್ಲಿಕೆ ಮಾಡಲಾಗಿತ್ತು. ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಗ್ರಹವೊಂದಕ್ಕೆ ಜಸ್ ರಾಜ್ ಹೆಸರನ್ನು ನಾಮಕರಣ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ನವೆಂಬರ್  11, 2006 ಶೋಧನೆಗೊಳಗಾಗಿದ್ದ ಗ್ರಹ ಮಂಗಳ ಮತ್ತು ಗುರು ನಡುವಿನ ಕಕ್ಷೆಯಲ್ಲಿ ಸಂಚಾರ ಮಾಡುತ್ತದೆ ಎಂಬುದನ್ನು ತಿಳಿಸಿತ್ತು.

 

 

“ಓಂ ನಮೋ ಭಗವತೇ ವಾಸುದೇವಾಯ”...... ಈ ಮಹಾಮಂತ್ರವನ್ನು ಜಸ್‌ರಾಜ್ ಕಂಠದಲ್ಲಿ ಒಮ್ಮೆ ಕೇಳಿದವರು ಬೇರೆಯವರ ಕಂಠದಲ್ಲಿ  ಕೇಳಲು ಒಪ್ಪಲಾರರು........ ಹೋಗಿ ಬನ್ನಿ ಗಂಧರ್ವರೇ!!!....  ಸ್ವರ್ಗದಲ್ಲಿ ದೇವತೆಗಳಿಗೆ ನಿಮ್ಮ ಸಂಗೀತ ಸುಧೆ ಬೇಕಾಗಿರಬಹುದು!..... ಸದ್ಗತಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!