ಹಿರಿಯರೇ ಚಿಂತೆ ಬಿಡಿ..ಬೇಗ ಹೊರಡಿ.. ಕೊರೋನಾ ಲಸಿಕೆ ಬಹಳ ಸಲೀಸು!

Published : Mar 05, 2021, 10:47 PM IST
ಹಿರಿಯರೇ ಚಿಂತೆ ಬಿಡಿ..ಬೇಗ ಹೊರಡಿ.. ಕೊರೋನಾ ಲಸಿಕೆ ಬಹಳ ಸಲೀಸು!

ಸಾರಾಂಶ

ಹಿರಿಯರೇ ಚಿಂತೆ ಬಿಡಿ..ಬೇಗ ಹೊರಡಿ.. ಕೊರೋನಾ ಲಸಿಕೆ ಬಹಳ ಸಲೀಸು/ ಲಸಿಕೆ ಹಾಕಿಸಿಕೊಳ್ಳುವ ನೋಂದಣಿ ಮತ್ತಷ್ಟು ಸುಲಭ/ ಒಂದು ವಾಟ್ಸಪ್ ಮೆಸೇಜ್ ಒಂದು ಕರೆ/ ನಿಮ್ಮ ಮನೆ ಬಾಗಿಲಿಗೆ ಬಂದು ಕರೆದುಕೊಂಡು ಹೋಗುತ್ತಾರೆ

ಬೆಂಗಳೂರು(ಮಾ.  05) ಚಿಂತೆ ಬಿಡಿ...ಮನೆಯಿಂದಲೇ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಬುಕ್ ಮಾಡಿಕೊಂಡು ಬನ್ನಿ.. ಎಲ್ಲವೂ ಸಲೀಸು.. ನಾವು ಹೇಳುತ್ತಿರುವುದು ಹಿರಿಯ ನಾಗರಿಕರ ಬಗ್ಗೆ.. ಹಿರಿಯ ನಾಗರಿಕರಿಗೊಂದು  ಒಳ್ಳೆಯ ಸುದ್ದಿ ಇಲ್ಲಿದೆ.

ಹಿರಿಯ ನಾಗರಿಕರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಶುರುವಾಗಿದೆ. ಸರ್ಕಾರದ ಜತೆ ಒಂದೊಂದೆ ಕೈಗಳು ಜತೆಯಾಗುತ್ತಿವೆ. ಇದೊಂದು ಮಾದರಿ ಬೆಳವಣಿಗೆ.

ಹೆಲ್ಪಿ ಮತ್ತು ಸಾರದಾ ಫೌಂಡೇಶನ್ ಜತೆಯಾಗಿ ಕೆಲಸ ಮಾಡಲು ಮುಂದಾಗಿವೆ.   ಹಿರಿಯರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡುವ ತೀರ್ಮಾನ ಮಾಡಿದೆ. ಕೋವಿಡ್ ವಾಕ್ಸಿನೇಶನ್ ಡ್ರೈವ್  ಆರಂಭಿಸಿದೆ.

ಕೊರೋನಾ ಲಸಿಕೆ ಪಡೆದುಕೊಂಡ ಪ್ರಧಾನಿ ಮೋದಿ

ಲಸಿಕೆ ಪಡೆದುಕೊಳ್ಳುವುದು ಹೇಗೆ? 
*ಕಾಲ್ ಮಾಡಿ  ಅಥವಾ ವಾಟ್ಸಪ್ ಮಾಡಿ ನೋಂದಾಯಿಸಿಕೊಳ್ಳಿ
* ಸರ್ಕಾರದಿಂದ ಮಾನ್ಯತೆ ಪಡೆದ ಐಡಿ ಇಟ್ಟುಕೊಳ್ಳಿ
* ಸೋಮವಾರದಿಂದ ಶನಿವಾರದವರೆಗೆ ಲಸಿಕೆ ನೀಡಿಕೆ.. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ
* ಲಸಿಕೆ ಶುಲ್ಕ 250  ರೂ.
* ಬೆಂಗಳೂರು, ಚೆನ್ನೈ, ಹೈದರಾಬಾದ್ ನಲ್ಲಿ ಲಭ್ಯ 
* ಸಂಪರ್ಕ ಸಂಖ್ಯೆ:  8861608484

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು.. ಅಗತ್ಯವಾಗಿ ತಿಳಿದುಕೊಳ್ಳಿ

ಫೌಂಡೇಶನ್ ಬಗ್ಗೆ;  ಹೆಲ್ಪಿ ಮತ್ತು ಸಾರದಾ ಪೌಂಡೇಶನ್ ಹಿರಿಯ ನಾಗರಿಕರ ನೆರವಿಗೆ ಸದಾ ಮುಂದೆ.  ಹಿರಿಯ ನಾಗರಿಕರನ್ನು ಆರೈಕೆ ಮಾಡಿಕೊಳ್ಳುವುದರಲ್ಲಿ ನಿಪುಣರಾಗಿರುವವರು ಇಲ್ಲಿ ನೆರವಿಗೆ ನಿಲ್ಲುತ್ತಾರೆ. ಹಿರಿಯ ನಾಗರಿಕರಿಗೆ ಗಂಟೆಗಳ ಲೆಕ್ಕದಲ್ಲಿ, ದಿನದ ಲೆಕ್ಕದಲ್ಲಿ, ವಾರದ  ಲೆಕ್ಕದಲ್ಲಿ ನೆರವು ಸಿಗಲಿದೆ.  ಆನ್ ಲೈನ್ ಮೂಲಕ  ಹಿರಿಯ ನಾಗರಿಕರಿಗೆ ದೈನಂದಿನ ಕೆಲಸ ಸೇರಿದಂತೆ ಎಲ್ಲ ನೆರವು ನೀಡಲು ಸಂಸ್ಥೆ ಸದಾ ಸಿದ್ಧವಾಗಿರುತ್ತದೆ.   ಹೆಚ್ಚಿನ ಮಾಹಿತಿಯನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು. 

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿ ಹಲವು ದಿನ ಕಳೆದಿವೆ. ಮೊದಲು ಕೊರೋನಾ ವಾರಿಯರ್ಸ್ ಗೆ ನೀಡಲಾಗಿದ್ದು ಈಗ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ.  ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ  ಅನೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ .

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?