ಅಸ್ಸಾಂ, ಸಿಕ್ಕಿಂನಲ್ಲೂ ಭಾರಿ ಮಳೆ: ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ನೆರೆ, 34 ಸಾವಿರ ಜನ ಬಾಧಿ​ತ

Published : Jun 18, 2023, 07:29 AM IST
 ಅಸ್ಸಾಂ, ಸಿಕ್ಕಿಂನಲ್ಲೂ ಭಾರಿ ಮಳೆ:  ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ನೆರೆ, 34 ಸಾವಿರ ಜನ ಬಾಧಿ​ತ

ಸಾರಾಂಶ

ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿ​ಯಾ​ಗಿದ್ದು, 34 ಸಾವಿರ ಜನರು ಬಾಧಿ​ತ​ರಾ​ಗಿ​ದ್ದಾ​ರೆ.  ಇನ್ನೊಂದೆಡೆ ಸಿಕ್ಕಿಂನಲ್ಲಿ ಕೂಡ ಭಾರಿ ಮಳೆ ಬಿದ್ದು, ಅಲ್ಲಲ್ಲಿ ಭೂಕು​ಸಿತ ಸಂಭ​ವಿ​ಸಿವೆ.

ಗುವಾ​ಹ​ಟಿ/ಗ್ಯಾಂಗ್ಟ​ಕ್‌: ಇತ್ತ ಪೂರ್ವ ಭಾರ​ತದ ಗುಜ​ರಾ​ತ್‌​ನಲ್ಲಿ ಚಂಡ​ಮಾ​ರುತ ಅಬ್ಬ​ರಿ​ಸಿ​ದರೆ ಅತ್ತ ಈಶಾನ್ಯ ರಾಜ್ಯ​ಗಳು ಕೂಡ ಪ್ರವಾಹ ಸಂಕ​ಷ್ಟಕ್ಕೆ ಒಳ​ಗಾ​ಗಿವೆ. ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿ​ಯಾ​ಗಿದ್ದು, 34 ಸಾವಿರ ಜನರು ಬಾಧಿ​ತ​ರಾ​ಗಿ​ದ್ದಾ​ರೆ.  ಇನ್ನೊಂದೆಡೆ ಸಿಕ್ಕಿಂನಲ್ಲಿ ಕೂಡ ಭಾರಿ ಮಳೆ ಬಿದ್ದು, ಅಲ್ಲಲ್ಲಿ ಭೂಕು​ಸಿತ ಸಂಭ​ವಿ​ಸಿವೆ. ಇದ​ರಿಂದಾಗಿ 3500 ಪ್ರವಾ​ಸಿ​ಗರು ಉತ್ತರ ಸಿಕ್ಕಿಂ ಜಿಲ್ಲೆಯ ಬೆಟ್ಟಗುಡ್ಡ​ಗ​ಳಲ್ಲಿ ಸಿಲುಕಿ​ದ್ದರು. ಭಾರ​ತೀಯ ಸೇನೆ (Indian Army) ಹಾಗೂ ವಿವಿಧ ರಕ್ಷಣಾ ಪಡೆ​ಗಳು ಅಲ್ಲಿಗೆ ತೆರಳಿ ಪ್ರವಾ​ಸಿ​ಗ​ರನ್ನು ರಕ್ಷಣೆ ಮಾಡಿವೆ. 19 ಬಸ್ಸು ಹಾಗೂ 70 ಸಣ್ಣ ವಾಹ​ನ​ಗ​ಳನ್ನು ಇವರ ರಕ್ಷ​ಣೆಗೆ ಸಿಕ್ಕಿಂ ಸರ್ಕಾರ (Sikkim Government) ನಿಯೋ​ಜಿ​ಸಿ​ತ್ತು.

ಅಸ್ಸಾಂ ಹೆಚ್ಚು ಬಾಧಿ​ತ:

ಭಾರಿ ಮಳೆಯ ಕಾರಣ ಅಸ್ಸಾಂ (Assam) ಹೆಚು ಬಾಧಿ​ತ​ವಾ​ಗಿದೆ. ಬ್ರಹ್ಮ​ಪುತ್ರ (River Brahma Putra) ಸೇರಿ ಅನೇಕ ನದಿ​ಗ​ಳಲ್ಲಿ ನೀರಿನ ಹರಿವು ಬಾರಿ ಹೆಚ್ಚಿದೆ. ಅನೇ​ಕ ಕಡೆ ಅಪಾಯದ ಮಟ್ಟಮೀರಿ ನದಿ ಹರಿ​ಯು​ತ್ತಿದೆ. ಕೆಲವು ಕಡೆ ಬಾಂದಾ​ರ​ಗಳು ಒಡೆ​ದಿವೆ. 34 ಸಾವಿರ ಜನರು ಪ್ರವಾ​ಹ​ದಿಂದ ಬಾಧಿತ​ರಾ​ಗಿ​ದ್ದಾರೆ. ಲಖೀಂಪುರ ಜಿಲ್ಲೆ​ಯಲ್ಲಿ ಹೆಚ್ಚು ಜನ (23,516) ಸಂತ್ರ​ಸ್ತ​ರಾ​ಗಿದ್ದು, ದಿಬ್ರು​ಗಢ (3857), ಡರಾಂಗ್‌ (2231), ಬಿಶ್ವ​ನಾಥ್‌ (2231) ಹಾಗೂ ಧೇಮಾ​ಜಿ (1085 ಸಂತ್ರಸ್ತರು) ನಂತ​ರದ ಸ್ಥಾನ​ದ​ಲ್ಲಿ​ವೆ. 77 ಗ್ರಾಮ​ಗಳು ಪ್ರವಾ​ಹ​ಪೀ​ಡಿ​ತ​ವಾ​ಗಿ​ದ್ದು, 209 ಹೆಕ್ಟೇರ್‌ ಭೂಮಿಯ​ಲ್ಲಿನ ಬೆಳೆ ಹಾಳಾ​ಗಿ​ದೆ.

ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!